ಕಾರಿನಲ್ಲಿ ಸ್ಪೋಟಕ ಪತ್ತೆ ಪ್ರಕರಣ : ತಿಹಾರ್ ಜೈಲಲ್ಲಿ ಮತ್ತೂಂದು ಮಹತ್ವದ ಸಾಕ್ಷ್ಯ ಲಭ್ಯ
Team Udayavani, Mar 12, 2021, 10:05 PM IST
ನವದೆಹಲಿ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆ ಸಮೀಪ ಪತ್ತೆಯಾದ ಕಾರ್ ಬಾಂಬ್ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿ ಮತ್ತೂಂದು ಮಹತ್ವದ ಸಾಕ್ಷ್ಯ ಲಭಿಸಿದೆ. ಇದು ತಿಹಾರ್ ಜೈಲಿನಿಂದಲೇ ನಡೆದ ಸಂಚು ಎಂದು ಗೊತ್ತಾದ ಮರುದಿನವೇ ಕಾರ್ಯಾಚರಣೆಗೆ ಬಳಕೆಯಾದ ಮೊಬೈಲ್ ಜೈಲಧಿಕಾರಿಗಳಿಗೆ ಸಿಕ್ಕಿದೆ.
ಜೈಷ್- ಉಲ್- ಹಿಂದ್ ಸಂಘಟನೆ ವ್ಯಕ್ತಿಗೆ ಸೇರಿದೆ ಎನ್ನಲಾದ ಈ ಮೊಬೈಲ್ ನಿಂದಲೇ ಟೆಲಿಗ್ರಾಂ ಮೂಲಕ ಸಂಭಾಷಣೆಗಳು ನಡೆದಿದ್ದವು ಎಂದು ಶಂಕಿಸಲಾಗಿದೆ. “ತಿಹಾರ್ ಜೈಲಿನ ಕೋಣೆಯೊಂದರಲ್ಲಿ ಈ ಮೊಬೈಲ್ ಸಿಕ್ಕಿದ್ದು, ಸಂಬಂಧಿತ ಉಗ್ರರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.
ವಿಚಾರಣೆ ಬಳಿಕ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿಕೊಡಲಾಗುವುದು’ ಎಂದು ತಿಹಾರ್ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾ ತಿಳಿಸಿದ್ದಾರೆ.
ಇದನ್ನೂ ಓದಿ :“ಪೋಕ್ಸೋ’ ವಯೋಮಿತಿ 18ರಿಂದ 16ಕ್ಕೆ ಇಳಿಕೆ? ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸ್ಸು