ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆಗೆ ವಿರೋಧ
Team Udayavani, Mar 14, 2021, 12:14 PM IST
ಶ್ರೀರಂಗಪಟ್ಟಣ: ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ವಿರೋಧಿಸಿದ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ವಿವಿಧ ಕನ್ನಡ ಪರಸಂಘಟನೆಗಳೊಂದಿಗೆ ಕೆಆರ್ಎಸ್ ಬೃಂದಾವನಕ್ಕೆ ಮುತ್ತಿಗೆ ಯತ್ನ ಮಾಡಿದರು.
ಕೆಆರ್ಎಸ್ ಅಣೆಕಟ್ಟೆಯ ಮುಖ್ಯ ದ್ವಾರದಲ್ಲಿ ವಾಟಾಳ್ ನಾಗರಾಜು ನೇತೃತ್ವದಲ್ಲಿ ಜಮಾಯಿಸಿದನೂರಾರು ಕನ್ನಡ ಪರ ಸಂಘಟನೆಗಳ ಮುಖಂಡರು,ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡಿನ ಜನರಿಗೆ ಕಾವೇರಿ ನದಿ ಜೋಡಣೆಮಾಡಲು ಇವತ್ತಿನ ರಾಜ್ಯ ಬಿಜೆಪಿ ಸರ್ಕಾರ ಕುಮ್ಮಕ್ಕುನೀಡುತ್ತಿದೆ. ಕರ್ನಾಟಕ ಮೇಕೆದಾಟು ಯೋಜನೆಗೆಮುಂದಾದರೆ ತಮಿಳುನಾಡು ವಿರೋಧಿಸುತ್ತಿದೆ.ಇದರಿಂದ ಕರ್ನಾಟಕಕ್ಕೆ ಒಂದು ನ್ಯಾಯ ತಮಿಳುನಾಡಿಗೆ ಒಂದು ನ್ಯಾಯವಾಗಿದೆ ಎಂದು ದೂರಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಾಟಾಳ್ ನಾಗರಾಜು, ಬ್ಯಾರಿಕೇಟ್ ನೂಕಿ ಒಳ ಹೋಗಲು ಪ್ರಯತ್ನ ಮಾಡಿದರು. ಈ ವೇಳೆ ಸಿಪಿಐ ಯೋಗೇಶ್,ಪಿಎಸ್ಐ ರವಿಕಿರಣ್ರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬ್ಯಾರಿಕೇಡ್ ಮುಂದೆಯೇ ಹೋರಾಟಗಾರರು ಮಲಗಿ ಮಹದಾಯಿ, ಕಾವೇರಿ ನಮ್ಮದು. ಕನ್ನಡಿಗರಾದ ನಾವು ಈಗಲೇ ಎಚ್ಚೆತ್ತು ಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕನ್ನಡ ಪರ ಸಂಘಟನೆ ಮುಖಂಡರಾದ ಗಿರೀಶ್ಗೌಡ, ಜಿ.ಎಂ.ರಾಮು, ನಾರಾಯಣಸ್ವಾಮಿ, ಚಿನ್ನಿರಾಮಚಂದ್ರ, ಮಣಿಕಂಠ, ಪಾರ್ಥಸಾರಥಿ ಮತ್ತಿತರರಿದ್ದರು.
ತಮಿಳುನಾಡಿಗೆ ಬಿಜೆಪಿ ಬೆಂಬಲ : ತಮಿಳುನಾಡಿನಲ್ಲಿ ಬಿಜೆಪಿಯನ್ನುಕಟ್ಟಲು ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರಗಳು ತಮಿಳುನಾಡಿಗೆಬೆಂಬಲ ನೀಡುತ್ತಿವೆ. ಆರ್ಎಸ್ ಎಸ್ ಮೂಲಕ ತಮಿಳುನಾಡಿನಲ್ಲಿಬಿಜೆಪಿ ಬಲವರ್ಧನೆಗೆ ರಾಜ್ಯಸರ್ಕಾರವನ್ನು ಕೇಂದ್ರ ಸರ್ಕಾರಬಳಸಿಕೊಂಡು ಕಾವೇರಿ ನೀರಿನಖ್ಯಾತೆ ಮೂಲಕ ರಾಜ್ಯದ ಜನರಹಿತವನ್ನು ಬಲಿ ಕೊಡುತ್ತಿವೆ.ರಾಜ್ಯದ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಕುರ್ಚಿಗಾಗಿ ರಾಜ್ಯವನ್ನುಬಲಿಕೊಡುತ್ತಿದ್ದಾರೆಂದು ವಾಟಾಳ್ ನಾಗರಾಜು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ