18 ಜಾನುವಾರುಗಳ ರಕ್ಷಣೆ
Team Udayavani, Mar 15, 2021, 8:40 PM IST
ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 18 ಜಾನುವಾರುಗಳನ್ನ ಬೆಂಗಳೂರಿನ ಪ್ರಾಣಿದಯಾ ಸಂಘದ ಪದಾಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ, ದಾವಣಗೆರೆಯ ಮಹಾವೀರ ಗೋಶಾಲೆಗೆ ಬಿಟ್ಟಂತಹ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಪ್ರಾಣಿ ದಯಾ ಸಂಘದವರು ಬೆಳಗ್ಗೆ 5ಕ್ಕೆ ರಾಣಿಬೆನ್ನೂರಿನ ಜಾನುವಾರು ಸಂತೆಗೆ ಭೇಟಿ ನೀಡಿದ್ದರು.
ಸಂತೆಯಲ್ಲಿ ಸುತ್ತಾಡಿ ಯಾರು ಜಾನುವಾರು ಕೊಳ್ಳುತ್ತಾರೆ ಎಂದು ಗಮನಿಸಿದರು. ಅದರಂತೆ ಅಲ್ಲೇ ಗೌಪ್ಯವಾಗಿ ಮಾಹಿತಿ ಕಲೆ ಹಾಕಿದ್ದರು. ಜಾನುವಾರುಗಳ ಹೊತ್ತ ವಾಹನ ಹೊರಟಾಗ ಅದು ಎಲ್ಲಿಗೆ ಹೋಗುತ್ತದೆ ಎಂದು ವಾಹನ ಹಿಂಬಾಲಿಸಿದರು. ಒಂದು ವಾಹನ ಹರಿಹರ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ಸ್ಥಳಿಯ ಪೊಲೀಸ್ನವರಿಗೆ ಮಾಹಿತಿ ನೀಡಿ ನಂತರ ರಾಣಿಬೆನ್ನೂರಿಗೆ ತೆರಳಿದ್ದಾರೆ. ಎರಡು ವಾಹನಗಳು ದಾವಣಗೆರೆ ಬೈಪಾಸ್ ಮೂಲಕ ದಾವಣಗೆರೆ ಆವರಗೆರೆ ಕಡೆಯಿಂದ ನಗರ ಪ್ರವೇಶ ಮಾಡುವಾಗ ಜಿಲ್ಲಾ ಪೊಲೀಸ್ ಇಲಾಖೆ ಸಹಕಾರ ಪಡೆದು ಎರಡು ವಾಹನಗಳನ್ನು ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದರು. ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಗಜೇಂದ್ರಪ್ಪ ವಾಹನಗಳಲ್ಲಿದ್ದ ಜಾನುವಾರುಗಳನ್ನು ಮಹಾವೀರ ಗೋ ಶಾಲೆಯ ಮಾಲೀಕರನ್ನು ಸಂರ್ಪಕಿಸಿ ಗೋ ಶಾಲೆಗೆ ಬಿಡುವ ವ್ಯವಸ್ಥೆ ಮಾಡಿದರು.
ಪ್ರಾಣಿದಯಾ ಸಂಘದವರು ಸ್ಥಳೀಯರಾದ ಎಂ.ಜಿ. ಶ್ರೀಕಾಂತ್, ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿ ಹಾಗೂ ರಾಕೇಶ್, ವಿಕಾಸ್ ಇಟಗಿ, ಪುರುಷೋತ್ತಮ,ತಿಪ್ಪೇಶ್ ಇತರರ ನೆರವು ಪಡೆದರು. ಹರಿಹರದಲ್ಲಿ ವಶಕ್ಕೆ ಪಡೆದ ವಾಹನವನ್ನು ದಾಖಲೆ ಇದೆ ಎಂದು ನಮಗೆ ಮಾಹಿತಿ ನೀಡದೇ ವಾಹನ ಬಿಟ್ಟು ಕಳಿಸಿದ್ದಾರೆ ಬಿಟ್ಟು ಕಳಿಸಲಾಗಿದೆ ಎಂದು ಪ್ರಾಣಿ ದಯಾ ಸಂಘದವರು ಬೇಸರ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ