ಬಂದಾರು ಗ್ರಾ.ಪಂ.ಗೆ ಆಜಾದಿಕ ಅಮೃತ್‌ ಮಹೋತ್ಸವ್‌ ಗೌರವ


Team Udayavani, Mar 17, 2021, 4:10 AM IST

ಬಂದಾರು ಗ್ರಾ.ಪಂ.ಗೆ ಆಜಾದಿ ಕ ಅಮೃತ್‌ ಮಹೋತ್ಸವ್‌ ಗೌರವ

ಬೆಳ್ತಂಗಡಿ: ಗ್ರಾಮ ಪಂಚಾಯತ್‌ ಮಿಷನ್‌ ಅಂತ್ಯೋದಯದಡಿ 2015ರಿಂದ 2020ರ ವರೆಗೆ ಗ್ರಾಮ ಮಟ್ಟದ ಜನಜೀವನ ಸುಧಾರಣೆಗೆ ಕೈಗೊಂಡ ಅತ್ಯುತ್ತಮ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ 5 ಗ್ರಾ.ಪಂ.ಗಳ ಪೈಕಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ.ನ್ನು ಆಯ್ಕೆ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ 75 ವಾರಗಳ ಆಜಾದಿಕ ಅಮೃತ್‌ ಮಹೋತ್ಸವ್‌ ಕಾರ್ಯಕ್ರಮದಡಿ ಭಾರತ ಸರಕಾರವು 75 ಗ್ರಾ.ಪಂ.ನ್ನು ವಿಶೇಷವಾಗಿ ಆಯ್ಕೆ ಮಾಡಿರುವುದರಲ್ಲಿ ಬಂದಾರು ಕೂಡಾ ಸ್ಥಾನ ಪಡೆದಿದೆ.

ಬಂದಾರು ಗ್ರಾ.ಪಂ. ಕಾರ್ಯ ಯೋಜನೆೆ
ಬಂದಾರು ಹಾಗೂ ಮೊಗ್ರು ಗ್ರಾ.ಪಂ.ನ್ನು ಒಳಗೊಂಡು 6,163 ಜನಸಂಖ್ಯೆ ಹೊಂದಿರುವ ಗ್ರಾಮವು ಒಂದೊಮ್ಮೆ ಕುಗ್ರಾಮದಂತೆ ಗೋಚರಿಸಿತ್ತು. ಬದಲಾದ ಸನ್ನಿವೇಶದಲ್ಲಿ ಬಂದಾರು ಗ್ರಾ.ಪಂ. ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಉದ್ಯೋಗ ಖಾತರಿ ಹಾಗೂ ವಿವಿಧ ಯೋಜನೆಯಡಿ ಮೂರು ಅಂಗನವಾಡಿಗಳಾದ ಕುಂಟಾಲಪಲ್ಕೆ 12 ಲಕ್ಷ ರೂ., ಪೇರಲ್ದಪಲ್ಕೆ-9 ಲಕ್ಷ ರೂ., ಉಳಿಯ ಅಂಗನವಾಡಿ 3.98 ಲಕ್ಷ ರೂ.ನಲ್ಲಿ ನಿರ್ಮಿಸಲಾಗಿದೆ.

ಬಂದಾರು ಗ್ರಾಮ ಪಂಚಾಯತ್‌, ಬೈಪಾಡಿ, ಪೇರಲ್ದಪಲ್ಕೆ ಒಳಚರಂಡಿ ನಿರ್ಮಾಣ, ಪ್ರತಿ ಶನಿವಾರ ಗ್ರಾಮದ ಶಾಲಾ ವಠಾರ, ಪೇಟೆ, ಪ್ರಮುಖ ಆಯಕಟ್ಟು ಪ್ರದೇಶಗಳಲ್ಲಿ ಶಾಲಾ ಮಕ್ಕಳ ಜತೆಗೂಡಿ ಸ್ವತ್ಛತಾ ಸಪ್ತಾಹ ಹಮ್ಮಿಕೊಳ್ಳುತ್ತಾ ಬಂದಿದೆ. ಇನ್ನುಳಿದಂತೆ ರಕ್ತದಾನ ಶಿಬಿರ, ಆರೋಗ್ಯ ಮೇಳ, ಸರಕಾರಿ ಯೋಜನೆ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಮಾಹಿತಿ ಕಾರ್ಯಾಗಾರ ನಡೆಸಿ ಸವಲತ್ತು ಮನೆ ಮನೆಗೆ ತಲುಪಿಸವಲ್ಲಿ ಮಹತ್ತರ ಶ್ರಮ ವಹಿಸಿದೆ.

14, 15ನೇ ಹಣಕಾಸು ಯೋಜನೆಯಡಿ 5 ಪ್ರಯಾಣಿಕರ ತಂಗುದಾಣ, ಪ.ಜಾತಿ/ಪಂಗಡದ ಮಂದಿಗೆ ನೀರಿನ ಟ್ಯಾಂಕ್‌ ವಿತರಣೆ, ಅಂಗವಿಕಲರಿಗೆ ಸಲಕರಣೆ, 30 ಕುಟುಂಬಗಳಿಗೆ ಶೌಚಾಲಯ, ಮುಗೇರಡ್ಕ ಸಮೀಪ ನೀರಿನ ಟ್ಯಾಂಕ್‌ ನಿರ್ಮಿಸಿ 40 ಮನೆಗಳ ನೀರಿನ ದಾಹ ತಣಿಸಿದೆ.

ಉದ್ಯೋಗ ಖಾತರಿ ಯೋಜನೆ ಸಾಧನೆ
ಉದ್ಯೋಗ ಖಾತರಿ ಯೋಜನೆಯಡಿ ಹತ್ತರ ಸಾಧನೆ ತೋರಿದ್ದು, ಬಂದಾರು ಪಾನೆಕಲ್ಲು ಎಂಬಲ್ಲಿ ಪ.ಜಾ.ಯ 2 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ, ಶ್ರೀರಾಮನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಿದೆ. 5 ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಮಾತ್ರವಲ್ಲದೆ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡ ಜಲಮರುಪೂರಣ ಚಿಂತನೆಯಡಿ ಗ್ರಾಮ ಪಂಚಾಯತ್‌ ಸೇರಿದಂತೆ 7 ಮನೆಗಳಿಗೆ ಜಲಮರುಪೂರಣ ಘಟಕ ಅಳವಡಿಕೆ, ಅನೇಕ ಶಾಲೆ, ಮನೆಗಳಲ್ಲಿ ಖಾಸಗಿ ಜಲಮರುಪೂರಣ ಘಟಕ, 40ಕ್ಕೂ ಅಧಿಕ ಬಾವಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದೆ. ಕಜೆಕೋಡಿ ಪ.ಜಾತಿ ಕಾಲನಿ, ಮೊಗ್ರು ಗ್ರಾಮದ ಕೊಲಬೆಗೆ ಸಾರ್ವಜನಿಕ ಕೊಳವೆ ಬಾವಿ, ನೀರಿನ ವ್ಯವಸ್ಥೆ ಕಲ್ಪಿಸಿದೆ.

621 ಮಂದಿಗೆ 94ಸಿ ವಿತರಣೆ
ಸರಕಾರದ ವಿವಿಧ ಯೋಜನೆ ಅನುಷ್ಠಾನದ ಜತೆಗೆ 5 ವರ್ಷಗಳಲ್ಲಿ 94ಸಿ ಯೋಜನೆಯಡಿ 621 ಮಂದಿಗೆ ಹಕ್ಕುಪತ್ರ, 9/11ಎ ಮುಖೇನ 189 ಮಂದಿಗೆ ಹಕ್ಕುಪತ್ರ ವಿತರಿಸಿದ ಹೆಗ್ಗಳಿಕೆ ಗ್ರಾ.ಪಂ.ಗೆ ಸಲ್ಲುತ್ತದೆ. ಬಸವ ವಸತಿ ಯೋಜನೆಯಡಿ 75 ಮನೆಗಳ ನಿರ್ಮಾಣ, ಬಂದಾರು ಗ್ರಾಮದಲ್ಲಿ ನಿವೇಶನ ರಹಿತರಿಗೆ 14 ಸೈಟ್‌ ಗುರುತಿಸಲಾಗಿದೆ. 30 ಕಿ.ಮೀ. ನಷ್ಟು ಕಾಂಕ್ರೀಟ್‌ ಸೇರಿದಂತೆ ಒಳರಸ್ತೆಗಳ ಅಭಿವೃದ್ಧಿ, ಉದ್ಯೋಗ ಖಾತರಿ ಯೋಜನೆಯಡಿ ಬಂದಾರು ಗ್ರಾಮದ ಬಂದಾರು, ಬಾಲಂಪಾಡಿ, ಕಜೆ, ಕುಂಬುಡಂಗೆ, ಮೊಗ್ರು ಗ್ರಾಮದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿನ ಆಶ್ರಯ ನೀಡಿದೆ. ಮಾತ್ರವಲ್ಲದೆ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹಾಗೂ ವಾರ್ಡ್‌ ಆಧರಿಸಿದ ಸದಸ್ಯರ ವಾಟ್ಸ್‌ಆ್ಯಪ್‌ ಬಳಗ ರಚಿಸಿ ಪ್ರತಿ ಮನೆಗೆ ಗ್ರಾ.ಪಂ. ಕಾರ್ಯಕ್ರಮದ, ಸರಕಾರದ ಯೋಜನೆ ಮಾಹಿತಿ ನೀಡುತ್ತಿದ್ದು, ಜತೆಗೆ ಫ್ಲೆಕ್ಸ್‌, ಕರಪತ್ರ ಹಂಚುವ ಕೆಲಸ ಮಾಡಿದೆ.

ಅಭಿನಂದನೆ
ಮಾ. 12ರಂದು ಭಾರತ ಸರಕಾರದ ಪಂಚಾಯತ್‌ ರಾಜ್‌ ಸಚಿವಾಲಯದ ಕಾರ್ಯದರ್ಶಿ ಆಯ್ಕೆಯಾದ ರಾಷ್ಟ್ರದ ಎಲ್ಲ ಗ್ರಾ.ಪಂ.ನೊಂದಿಗೆ ವೆಬಿನಾರ್‌ ಮುಖೇನ ಸಭೆ ನಡೆಸಿ ಅಭಿನಂದಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಆಯ್ಕೆಯಾದ ಬಂದಾರು ಗ್ರಾ.ಪಂ. 2015ರಿಂದ 2020ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಉದಯ ಬಿ.ಕೆ., ಉಪಾಧ್ಯಕ್ಷೆಯಾಗಿದ್ದ ಚಂದ್ರಾವತಿ ಕೆ.ವೈ. ಹಾಗೂ ಸದಸ್ಯರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮೋಹನ್‌ ಬಂಗೇರ, ಸಿಬಂದಿ ಪ್ರಸಕ್ತ ಸಾಲಿನ ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷ ಗಂಗಾಧರ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.