ಉಪ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
Team Udayavani, Mar 26, 2021, 5:14 PM IST
ಕೊರಟಗೆರೆ: ನಮಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಕೇವಲ ಚುನಾವಣೆಬಂದಾಗ ನಮ್ಮ ನೆನಪು ಮಾಡಿಕೊಳ್ಳುತ್ತಾರೆ. ಇದು ಯಾವ ನ್ಯಾಯ? ನಮಗೆ ಸೌಕರ್ಯಗಳನ್ನು ಕಲ್ಪಿಸದಿರುವ ಪಟ್ಟಣ ಪಂಚಾಯತಿಗೆ ನಾವೇಕೆ ಮತ ಹಾಕಬೇಕುಎಂದು ಧ್ವನಿ ಎತ್ತಿರುವ ಕಾವಲಬೀಳು 20 ಕುಟುಂಬ 4ನೇ ವಾರ್ಡ್ ಉಪಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಹಲವು ದಶಕಗಳಿಂದಲೂ ನಾವುಕಾವಲಬೀಳು ಗ್ರಾಮದಲ್ಲಿ ವಾಸವಿದ್ದೇವೆ.ಆದರೆ, ಸಾರ್ವತ್ರಿಕ ಚುನಾವಣೆಗಳುಬಂದಾಗಷ್ಟೇ ನಮಗೆ ಭರವಸೆಗಳಮಹಾಪೂರವನ್ನೇ ಹರಿಸಿ ನಂತರಕಣ್ಮರೆಯಾಗುವ ಜನಪ್ರತಿನಿಧಿಗಳಅವಶ್ಯಕತೆಯಿಲ್ಲ. ಯಾರೊಬ್ಬರೂ ನಮ್ಮ ಗ್ರಾಮಕ್ಕೆ ಭೇಟಿ ನೀಡ ಬೇಡಿ. ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಹೇಳಿ ಭಿತ್ತಿಪತ್ರವನ್ನು ಹಾಕಿ ಇಲ್ಲಿನ ಸ್ಥಳೀಯರು ಪಪಂ ಉಪಚುನಾವಣೆ ಬಹಿಷ್ಕರಿಸಿದ್ದಾರೆ.
ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 1,283 ಮತದಾರರುಇದ್ದು, ಇದರಲ್ಲಿ ಕಾವಬೀಳು ವಾಸಿಗಳು100ಕ್ಕೂ ಅಧಿಕ ಮತದಾರರಿದ್ದಾರೆ. ಅಗತ್ಯಕುಡಿಯುವ ನೀರು, ಬೀದಿ ದೀಪ ಸೇರಿಬಹುಮುಖ್ಯವಾಗಿ ಗ್ರಾಮಕ್ಕೆ ಸೂಕ್ತ ರಸ್ತೆಯನ್ನುಕಲ್ಪಿಸದಿರುವುದರ ವಿರುದ್ಧ ಘೋಷಣೆ ಕೂಗಿದರು. ಗ್ರಾಮದ ಮುಖಂಡ ಕೃಷ್ಣಪ್ಪ, ತಿಮ್ಮಣ್ಣ, ಇಸ್ಮಾಯಿಲ್, ಮುಖಂಡ ರಮೇಶ್, ಸೋಮನಾಥ್, ಕೆ.ಆರ್.ಮಂಜುನಾಥ್ ಲಕ್ಷ್ಮೀ ನಾರಾಯಣ್ ಇದ್ದರು.
ಕಾವಲಬೀಳು ರಸ್ತೆ ಅಭಿವೃದ್ಧಿಗೆ ಈ ಹಿಂದೆ ಇದ್ದ ಮೈತ್ರಿ ಸರ್ಕಾರದಲ್ಲಿ ಶಾಸಕ ಡಾ.ಜಿ ಪರಮೇಶ್ವರ ನೀಡಿದ್ದ 5 ಕೋಟಿ ರೂ.ಅನುದಾನದಲ್ಲಿ 1 ಕೋಟಿ ಮೀಸಲಿಡಲಾಗಿತ್ತು. ಕೋವಿಡ್ ಕಾರಣದಿಂದ ಅನುದಾನವನ್ನು ವಾಪಸ್ ಪಡೆಯಲಾಗಿತ್ತು. ಈಗ ನಾನು ಸ್ಥಳಕ್ಕೆ ಭೇಟಿ ನೀಡಿದ್ದು, ವರದಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ. –ಲಕ್ಷ್ಮಣ್ ಕುಮಾರ್, ಪಪಂ ಮುಖ್ಯಾಧಿಕಾರಿ
ಕಾವಲಬೀಳು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ತೆಗ್ಗು-ದಿಣ್ಣೆಗಳಿಂದ ಕೂಡಿದ್ದು,ವಾಹನಗಳ ಓಡಾಡುವುದಕ್ಕೂ ತುಂಬಾ ಕಷ್ಟಕರವಾಗಿದೆ. ಮುಂದಿನದಿನಗಳಲ್ಲಿ ಮೂಲಭೂತ ಸೌಕರ್ಯ ನೀಡುವುದರ ಮೂಲಕ ಗಮನ ಹರಿಸುತ್ತೇವೆ. –ಭಾರತಿ, ಪಪಂ ಉಪಾಧ್ಯಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು