ಶಹಪುರ ಟೋಲ್ಗೇಟ್ನಲ್ಲಿ ಅಧಿಕಾರಿ ಮೇಲೆ ಹಲ್ಲೆ: 14 ಮಂದಿ ಬಂಧನ
Team Udayavani, Mar 27, 2021, 12:10 AM IST
ಕೊಪ್ಪಳ: ತಾಲೂಕಿನ ಶಹಪುರ ಟೋಲ್ಗೇಟ್ನಲ್ಲಿ ಗಂಗಾವತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಚಿದಾನಂದ ಹಾಗೂ ಸ್ನೇಹಿತರ ಮೇಲೆ ಟೋಲ್ ಸಿಬಂದಿ ಮತ್ತು ಸ್ಥಳೀಯರು ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ 14 ಮಂದಿಯನ್ನು ಬಂಧಿ ಸಲಾಗಿದೆ.
ಚಿದಾನಂದ ಹಾಗೂ ಸ್ನೇಹಿತರು ಖಾಸಗಿ ವಾಹನದಲ್ಲಿ ಗಂಗಾವತಿಗೆ ತೆರಳುತ್ತಿದ್ದು, ಸರಕಾರಿ ಕರ್ತವ್ಯದಲ್ಲಿ ತೆರಳುತ್ತಿರುವ ಕಾರಣ ಟೋಲ್ ಶುಲ್ಕ ನೀಡುವುದಿಲ್ಲ ಕಟ್ಟುವುದಿಲ್ಲ ಎಂದಿದ್ದಾರೆ. ಆಗ ಟೋಲ್ ಸಿಬಂದಿಯು ನೀವು ಖಾಸಗಿ ವಾಹನದಲ್ಲಿ ಸಂಚರಿಸುತ್ತಿದ್ದೀರಿ ಎಂದು ಹೇಳಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಟೋಲ್ ಸಿಬಂದಿಯ ಪರವಾಗಿ ಗ್ರಾಮಸ್ಥರೂ ಆಗಮಿಸಿ ಚಿದಾನಂದ ಹಾಗೂ ಸ್ನೇಹಿತರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತಲೆಬಾಗಿ ನಿಂತ ಅಧಿಕಾರಿ!
ಹಲ್ಲೆಕೋರರು ಅಧಿಕಾರಿ ಚಿದಾನಂದರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಚಿದಾನಂದರು ತಲೆ ಬಗ್ಗಿಸಿ ನಿಂತು, “ಎಷ್ಟು ಬೇಕಾದರೂ ಹೊಡೆಯಿರಿ’ ಎಂದು ಹೇಳಿದ್ದರು. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಆಗಮಿಸಿದರೂ ಕಿಡಿಗೇಡಿಗಳು ಲೆಕ್ಕಿಸದೆ ಥಳಿಸಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಶನಿವಾರ ಇನ್ನಷ್ಟು ಮಾಹಿತಿ ಬಹಿರಂಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
14 ಜನರ ಬಂಧನ
ಎಇಇ ಕರ್ತವ್ಯದಲ್ಲಿದ್ದು, ಅವರಿದ್ದ ಖಾಸಗಿ ವಾಹನವನ್ನೂ ಸರಕಾರಿ ಸೇವೆಗೆ ಪಡೆಯಲಾಗಿತ್ತು. ಅವರು ಗುರುತಿನ ಚೀಟಿ ತೋರಿಸಿದರೂ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಟೋಲ್ ಮ್ಯಾನೇಜರ್ ಸಹಿತ 14 ಜನರನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ