ಹುನಗುಂದದಲ್ಲಿ ಬಡವರ ಫ್ರಿಡ್ಜ್ ಗೆ ಭಾರೀ ಬೇಡಿಕೆ

ದೊಡ್ಡ ಮಡಿಕೆ 350-450 ರೂ., ಸಣ್ಣ ಮಡಿಕೆ 150-250 ರೂ. ವರೆಗೆ ಮಾರಾಟ

Team Udayavani, Apr 2, 2021, 3:34 PM IST

ಹುನಗುಂದದಲ್ಲಿ ಬಡವರ ಫ್ರಿಡ್ಜ್ ಗೆ ಭಾರೀ ಬೇಡಿಕೆ

ಹುನಗುಂದ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರುಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ.ಬಾಯಾರಿಕೆ ತಣಿಸಿಕೊಳ್ಳಲು ಪರದಾಡುತ್ತಿದ್ದು, ಸದ್ಯ ಬಡವರ ಫ್ರಿಡ್ಜ್ ಮಡಿಕೆಗೆ ಭಾರಿ ಬೇಡಿಕೆ ಬಂದಿದೆ. ಕುಂಬಾರರು ತಯಾರಿಸಿದ ಮಣ್ಣಿನ ಮಡಿಕೆಗೆ ತಾಲೂಕಿನಲ್ಲಿ ಬೇಡಿಕೆಯಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೆ ಖರೀದಿಸುತ್ತಿದ್ದಾರೆ.

ಹೌದು. ಈ ಹಿಂದೆ ಮಡಿಕೆಯಿಲ್ಲದೇ ಮಾನವನ ಜೀವನವೇ ಇಲ್ಲಎನ್ನುವ ಪರಿಸ್ಥಿತಿ ಇತ್ತು. ಆದರೆ,ಆಧುನಿಕ ಭರಾಟೆಯಿಂದ ಸ್ಟೀಲ್‌,ಅಲ್ಯೂಮಿನಿಯಂ, ಪ್ಲಾಸ್ಟಿಕ್‌ ಅಬ್ಬರಕ್ಕೆಸಿಲುಕಿ ಮಣ್ಣಿನ ಮಡಿಕೆಗಳುಮಾಯವಾಗಿದ್ದವು. ಬೇಸಿಗೆ ಸಮಯ ಬಂದರೇ ಸಾಕು ಬಿಸಿಲಿನ ತಾಪದಿಂದ ಬಾಯರಿಕೆ ತಣಿಸಿಕೊಳ್ಳಲು ಶ್ರೀಮಂತರುಆಧುನಿಕ ಫ್ರಿಡ್ಜ್ ಖರೀದಿಸುತ್ತಿದ್ದರು. ಬಡಜನರು ಮಡಿಕೆಯಿಂದ ಬಾಯಾರಿಕೆ ತಣಿಸಿಕೊಳ್ಳುತ್ತಿದ್ದಾರೆ. ಮಡಿಕೆಗಳು ತಂಪುನೀರು ಒದಗಿಸುವುದರಿಂದ ಇವುಗಳನ್ನು ಬಡವರ ಫ್ರಿಡ್ಜ್ ಎಂದೇ ಕರೆಯುವುದು ವಾಡಿಕೆ.

ಬಡವರ ಫ್ರಿಡ್ಜ್  ಗೆ ಭಾರಿ ಬೇಡಿಕೆ: ವರ್ಷದ ಏಳೆಂಟು ತಿಂಗಳು ಮಡಿಕೆಗಳನ್ನು ಮಣ್ಣಿನಿಂದ ಮಾಡಲಾಗುತ್ತಿದೆ. ಬೇಡಿಕೆಯಿಲ್ಲದಸಂದರ್ಭದಲ್ಲಿ ಮಡಿಕೆ ತಯಾರಿಸಿಮನೆಯಲ್ಲಿಯೇ ಸಂಗ್ರಹಿಸಿ ಡುತ್ತಾರೆ.ಬೇಸಿಗೆ ಆರಂಭವಾಗುತ್ತಿದ್ದಂತೆಶ್ರೀಮಂತರು ಕೂಡಾ ಮಡಿಕೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕುಂಬಾರಕುಟುಂಬಗಳು ಸದ್ಯ ವಿಭಿನ್ನ ಮಾದರಿಯಮಡಿಕೆಗಳನ್ನು ಮಾರುಕಟ್ಟೆಯಲ್ಲಿ ಮರಾಟ ಮಾಡುತ್ತಿದ್ದಾರೆ. ಬೇಸಿಗೆ ತಾಪಕ್ಕೆ ತಂಪನ್ನುಧಾರೆ ಎರೆಯುವ ಮಡಿಕೆಗಳಿಗೀಗ ಭಾರಿಬೆಲೆಯಿದೆ. ದೊಡ್ಡ ಮಡಿಕೆ 350 ರಿಂದ 450 ರೂ., ಸಣ್ಣ ಮಡಿಕೆ 150ರಿಂದ 250 ರೂ.ವರೆಗೆ ಮಾರಾಟವಾಗುತ್ತಿವೆ.

ಆಧುನಿಕ ರೆಫ್ರಿಜೆಟರ್‌ಗೇನು ಕಡಿಮೆ ಇಲ್ಲದ ಬಡವರ ಫ್ರಿಡ್ಜ್: ಆಧುನಿಕ ರೆಫ್ರಿಜೆಟರ್‌ಗಳು ವಿದ್ಯುತ್‌ ಇದ್ದರೇ ಮಾತ್ರ ತಂಪು ಪಾನೀಯ ನೀಡುತ್ತವೆ. ಆದರೆ, ಮಡಿಕೆ ವಿದ್ಯುತ್‌ ಇಲ್ಲದೇದಿನದ 24 ಗಂಟೆ ತಂಪಾದ ನೀರನ್ನು ಒದಗಿಸುವ ಆಧುನಿಕ  ಫ್ರಿಡ್ಜ್ ಗಳಿಗೇನುಕಡಿಮೆಯಿಲ್ಲದಂತೆ ಮನುಷ್ಯನ ದೇಹಕ್ಕೆತಣ್ಣನೆಯ ನೀರು ಕೊಡುತ್ತಿವೆ.

ಮಡಿಕೆಯ ನೀರು ಆರೋಗ್ಯಕ್ಕೆ ಯೋಗ್ಯ: ಆಧುನಿಕ ಫ್ರಿಡ್ಜ್ ನಲ್ಲಿಯ ನೀರು ಸ್ವಲ್ಪ ಆರೋಗ್ಯಕ್ಕೆ ಮನುಷ್ಯನವ್ಯತಿರಿಕ್ತ ಪರಿಣಾಮ ಬೀರುವ ಸ್ಥಿತಿಯಿದೆ.ಆದರೆ, ಮಣ್ಣಿನ ಮಡಿಕೆಯಲ್ಲಿನ ನೀರು ಮಾನವನ ಆರೋಗ್ಯಕ್ಕೆ ಉತ್ತಮ.ಇದರಿಂದ ಬೇಸಿಗೆಯಲ್ಲಿ ಶ್ರೀಮಂತರಿಂದಹಿಡಿದು ಬಡವರು ಮಡಿಕೆಯ ಖರೀದಿಗೆ ಮುಂದಾಗುತ್ತಿತ್ತಾರೆ. ವಿವಿಧ ಮಾದರಿ ಮಡಿಕೆಗಳು

ಮಾರುಕಟ್ಟೆಗೆ ಲಗ್ಗೆ: ಬೇಸಿಗೆಯ ಸಮಯದಲ್ಲಿ ಮಣ್ಣಿನ ಮಡಿಕೆಗಳಿಗೆಬೇಡಿಕೆ ಹೆಚ್ಚಾಗುವ ವಿಶ್ವಾಸದಿಂದ ಕುಂಬಾರರು ಜನರನ್ನುಮನಸೂರೆಗೊಳ್ಳುವ ರೀತಿಯಲ್ಲಿ ಮಣ್ಣಿನವಿವಿಧ ಮಾದರಿಯ ಮಡಿಕೆಗಳನ್ನು ತಯಾರಿಸಿದ್ದಾರೆ. ಇದರಿಂದ ಕುಂಬಾರನಮಡಿಕೆ ತಯಾರಿಕೆ ನೈಪುಣ್ಯತೆ ಅಡಗಿದೆ.

ಬೇಸಿಗೆ ಆಧಾರಸ್ಥಂಭ: ಈ ಹಿಂದಿನ ಜೀವನ ಪದ್ದತಿಯಲ್ಲಿ ಮನುಷ್ಯ ನಿತ್ಯ ಉಪಯೋಗಿಸುವ ವಸ್ತುಗಳಿಂದ ಹಿಡಿದು ಆಹಾರ ಬೇಯಿಸಿ ತಿನ್ನುವ ಪಾತ್ರೆಗಳೆಲ್ಲ ಮಣ್ಣಿನ ವಸ್ತುಗಳಾಗಿದ್ದವು. ತಾಂತ್ರಿಕತೆ ಹೆಚ್ಚಾಗಿ ಗುಡಿ ಕೈಗಾರಿಕೆ ಮುಚ್ಚಿ ಹೊಸಹೊಸ ವಸ್ತುಗಳು ಮಾರುಕಟ್ಟೆಗೆ ಬಂದುಮೂಲವಾಗಿ ಉಪಯೋಗಿಸುತ್ತಿದ್ದ ಮಡಿಕೆಗಳು ಮಾಯವಾಗಿ ಕುಂಬಾರಬದುಕಿನ ಮೇಲೆ ಕರಿನೆರಳು ಆವರಿಸಿದೆ. ಗುಡಿ ಕೈಗಾರಿಕೆ ನೆಲಕಚ್ಚಿದ ಮೇಲೆಕುಂಬಾರ ವೃತ್ತಿ ನಂಬಿಕೊಂಡಅನೇಕ ಕುಟುಂಬಗಳ ಜೀವನನಿರ್ವಹಣೆ ಕಷ್ಟವಾಗಿದೆ. ಮೂಲಕುಲಕಸಬನ್ನೇ ಬಿಟ್ಟು ಬೇರೆ ಬೇರೆ ಉದ್ಯೋಗ ಹುಡುಕಿಕೊಂಡಿದ್ದರೇಇನ್ನು ಕೆಲ ಕುಂಬಾರಿಕೆ ಕುಟುಂಬಗಳುಮೂಲಕಸಬು ಮುಂದುವರಿಸಿಕೊಂಡು ಹೋಗುತ್ತಿವೆ.

ದೀಪಾವಳಿ, ಹಬ್ಬ ಹರಿದಿನ, ಜಾತ್ರೆ, ಮದುವೆ ಸೇರಿದಂತೆ‌ ಶುಭ ಸಂದರ್ಭದಲ್ಲಿ ಮಾತ್ರ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತವೆ. ಅಲ್ಲದೇ ಬೇಸಿಗೆಯ ಸಂದರ್ಭದಲ್ಲಿ ಹೆಚ್ಚು ಮಡಿಕೆಗಳು ಮಾರಾಟವಾಗುವುದು.ಇದರಿಂದ ವರ್ಷದ ಏಳೆಂಟು ತಿಂಗಳ ವ್ಯಾಪಾರವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ವೃತ್ತಿ ಬಿಡಬೇಕೆಂದರೇ ಬೇರೆ ಉದ್ಯೋಗ ಸರಿ ಹೋಗುತ್ತಿಲ್ಲ.  -ಮಲ್ಲು ಕುಂಬಾರ, ಹುನಗುಂದ

 

­-ಮಲ್ಲಿಕಾರ್ಜುನ ಬಂಡರಗಲ್ಲ

ಟಾಪ್ ನ್ಯೂಸ್

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.