ಕೈ ಅಭ್ಯರ್ಥಿ ತುರ್ವಿಹಾಳಗೆ ದೇಣಿಗೆ
ಮ್ಯಾದರಾಳ ಗ್ರಾಮದಲ್ಲಿ ಗ್ರಾಮಸ್ಥರು 21 ಸಾವಿರ ಹಾಗೂ ಬೈಲಗುಡ್ಡ ಗ್ರಾಮದಲ್ಲಿ 10 ಸಾವಿರ ರೂ. ನಗದು ರೂಪದಲ್ಲಿ ನೀಡಿದರು.
Team Udayavani, Apr 3, 2021, 6:30 PM IST
ಮುದಗಲ್ಲ: ಮಸ್ಕಿ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಅವರಿಗೆ ಪ್ರಚಾರ ವೇಳೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ದೇಣಿಗೆ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ತಲೇಖಾನ ಗ್ರಾಮದಲ್ಲಿ ಯುವಕರು, ಗ್ರಾಮದ ಮುಖಂಡರು ಸೇರಿ 25 ಸಾವಿರ ರೂ. ನೀಡಿದರೆ, ಮ್ಯಾದರಾಳ ಗ್ರಾಮದಲ್ಲಿ ಗ್ರಾಮಸ್ಥರು 21 ಸಾವಿರ ಹಾಗೂ ಬೈಲಗುಡ್ಡ ಗ್ರಾಮದಲ್ಲಿ 10 ಸಾವಿರ ರೂ. ನಗದು ರೂಪದಲ್ಲಿ ನೀಡಿದರು.
ದೇಣಿಗೆ ಸ್ವೀಕರಿಸಿ ಮಾತನಾಡಿದ ಆರ್. ಬಸನಗೌಡ ತುರ್ವಿಹಾಳ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ದುಡ್ಡು ಕೊಟ್ಟು ಓಟು ಪಡದರೆ ನನಗೆ ಜನರೇ ಹಣ ನೀಡುವ ಮೂಲಕ ಓಟು ಕೊಡುವ ಭರವಸೆ ನೀಡುತ್ತಿದ್ದಾರೆ. ಇದನ್ನೇ ಬಿಜೆಪಿಯವರು ಬಸನಗೌಡ ಜನರಿಗೆ ದುಡ್ಡು ನೀಡಿ ದೇಣಿಗೆ ಎಂದು ಸ್ವೀಕರಿಸುತ್ತಿದ್ದಾರೆಂದು ಬಡಬಡಾಯಿಸುತ್ತಿದ್ದಾರೆ. ಅವರಿಗೆ ಮತದಾರರೇ ಮೇ 2ರಂದು ಉತ್ತರ ಕೊಡಲಿದ್ದಾರೆ ಎಂದರು.
ಮತದಾರರ ಋಣ ತೀರಿಸಲು ಏಳು ಜನ್ಮವಿದ್ದರೂ ಸಾಲದು. ನಾನು ಅವರ ಪಾದದ ಧೂಳಿಗೆ ಸಮನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ನಾಪುರ ಮಾತನಾಡಿ, ವಿಧಾನಸಭೆ ಉಪ ಚುನಾವಣೆಗಳಲ್ಲಿ ಜನರು ಈ ರೀತಿಯಾಗಿ ದುಡ್ಡು ನೀಡುತ್ತಿರುವುದು ನಾನು ನೋಡಿಯೇ ಇಲ್ಲ. ಪ್ರತಾಪಗೌಡರ ಆಡಳಿತದಿಂದ ಜನ ರೋಸಿ ಹೋಗಿ ಈ ರೀತಿಯ ದೇಣಿಗೆ ನೀಡುತ್ತಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ
ಪಾಟೀಲ್, ಸಿದ್ದನಗೌಡ ಹೂವಿನಬಾವಿ, ಪಾಮಯ್ಯ ಮುರಾರಿ, ತಾಪಂ ಅಧ್ಯಕ್ಷ ಶಿವಣ್ಣ ನಾಯಕ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ