ಭಾರತದಲ್ಲಿ ನೌಕಾಯಾನ ಬೆಳೆದುಬಂದ ಹಾದಿ : ಇಂದು ರಾಷ್ಟ್ರೀಯ ಕಡಲ ದಿನ


Team Udayavani, Apr 5, 2021, 6:20 AM IST

ಭಾರತದಲ್ಲಿ ನೌಕಾಯಾನ ಬೆಳೆದುಬಂದ ಹಾದಿ : ಇಂದು ರಾಷ್ಟ್ರೀಯ ಕಡಲ ದಿನ

ದೇಶದ ಆರ್ಥಿಕ ಅಭಿವೃದ್ಧಿಗೆ ನೌಕಾಯಾನದ ಕೊಡುಗೆ ಅಪಾರ. ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡುವುದು, ಬೇರೆ ದೇಶದಿಂದ ಅಗತ್ಯವಿರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮೊದಲಾದ ವಾಣಿಜ್ಯ ಚಟುವಟಿಕೆಗಳಿಗೆ ನೌಕಾಯಾನವೇ ಆಧಾರ. ಭಾರತೀಯ ಹಡಗು 1919ರ ಎಪ್ರಿಲ್‌ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಈ ದಿನದ ನೆನಪಿಗೆ ಪ್ರತೀ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.

ಎಲ್ಲಿಂದ ಎಲ್ಲಿಗೆ: ಸ್ಥಳೀಯ ಭಾರತೀಯ ಉದ್ಯಮಿಗಳ ಒಡೆತನದ ಮೊದಲ ಅತೀ ದೊಡ್ಡ ಹಡಗು ಕಂಪೆನಿಯಾದ ದಿ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಲಿ.ನ ಮೊದಲ ಹಡಗು ಎಸ್‌ಎಸ್‌ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್‌ ಕಿಂಗ್‌ಡಮ್‌ (ಲಂಡನ್‌)ಗೆ ಪ್ರಯಾಣಿಸಿದ ದಿನವಾಗಿದೆ. ಈ ದಿನವನ್ನು 1964ರಿಂದ ಆಚರಿಸಲಾಗುತ್ತಿದೆ.

ಏನು ಕಳುಹಿಸಲಾಗುತ್ತಿತ್ತು?
ಭಾರತೀಯ ಮಸಾಲೆಗಳು, ಧೂಪದ್ರವ್ಯ ಮತ್ತು ಜವಳಿ ತುಂಬಿದ ದೋಣಿಗಳು ಪಾಶ್ಚಿಮಾತ್ಯ ದೇಶಗಳ‌ತ್ತ ಸಾಗಿದವು.

ಸಮುದ್ರ ಸಾರಿಗೆ ಪ್ರಯೋಜನ: ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿದರೆ ಹಡಗುಗಳ ಮುಖಾಂತರ ಸರುಕುಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರ ಮುಖ್ಯ ಎಂಬುದನ್ನು ಮರೆಯುವ ಹಾಗಿಲ್ಲ.

ನೇವಿಗೇಶನ್‌ ಹೇಗೆ?: ಇಂದಿನಂತೆ ಆ ಕಾಲದಲ್ಲಿ ಗೂಗಲ್‌ ಮ್ಯಾಪ್‌ಗ್ಳಿರಲಿಲ್ಲ. ಹೀಗಾಗಿ ನಕ್ಷೆಗಳು, ಧ್ರುವ ನಕ್ಷತ್ರ ಮತ್ತು ನಕ್ಷತ್ರ ಪುಂಜವನ್ನು ಆಧರಿಸಿ ಸಂಚರಿಸಲಾಗುತ್ತಿತ್ತು. ಇದು ನೈಜ ಸವಾಲಾಗಿತ್ತು.

ಸ್ವದೇಶಿ ಕಿಚ್ಚು: ಬ್ರಿಟಿಷ್‌ ಕಂಪೆನಿಗಳು ಹಡಗು ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದವು. ಈ ಸಮಯದಲ್ಲಿ ಗುಜರಾತ್‌ನ ಕೈಗಾರಿಕೋದ್ಯಮಿ ವಾಲ್ಚಂದ್‌ ಹಿರಾಚಂದ್‌ ಅವರು ಬಲಿಷ್ಠ ದೇಶಿಯ, ಹಡಗು ಉದ್ಯಮವನ್ನು ತೆರೆಯಲು ಯೋಚಿಸುತ್ತಾರೆ. ಅವರ ಸ್ನೇಹಿತರಾದ ನರೋತ್ತಮ್‌ ಮೊರಾರ್ಜಿ, ಕಿಲಚಂದ್‌ ದೇವcಂದ್‌ ಮತ್ತು ಲಲ್ಲುಭಾಯ್‌ ಸಮಲ್ದಾಸ್‌ ಅವ ರೊಂದಿಗೆ ಗ್ವಾಲಿಯರ್‌ನ ಸಿಂಧಿಯಾಸ್‌ನಿಂದ ಆರ್‌ಎಂಎಸ್‌ ಎಂಪ್ರಸ್‌ ಎಂಬ ಸ್ಟೀಮರ್‌ ಅನ್ನು ಖರೀದಿಸಿದರು. ಇದನ್ನು ಮೊದಲು 1890ರಲ್ಲಿ ಗ್ವಾಲಿಯರ್‌ನ ರಾಜಮನೆತನ ಕೆನಡಾದ ಪೆಸಿಫಿಕ್‌ ರೈಲ್ವೇಯಿಂದ ಖರೀದಿಸಿತ್ತು. ಬಳಿಕ ಮೊದಲ ವಿಶ್ವಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರಿಗೆ ಆಸ್ಪತ್ರೆಯಾಗಿ ಬಳಸಲಾಯಿತು. ನಾಲ್ಕು ಭಾರತೀಯರು ತಮ್ಮ ಕಂಪೆನಿಗೆ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಕಂಪೆನಿ ಲಿ. ಎಂದು ಹೆಸರಿಟ್ಟರು. ಇದನ್ನು ಮೊದಲ ಸ್ವದೇಶಿ ಹಡಗು ಉದ್ಯಮ ಎಂದು ಕರೆಯಲಾಯಿತು.

ಭಾರತದ ಕಡಲ ಇತಿಹಾಸ
ವರದಿಗಳ ಪ್ರಕಾರ ನೌಕಾಯಾನದ ಇತಿಹಾಸವು ಸಹಸ್ರಮಾನಗಳ ಹಿಂದೆ ಪ್ರಾರಂಭವಾಗಿದೆ. ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ, ಸಿಂಧೂ ಕಣಿವೆಯ ಜನರು ಮೆಸಪಟೋಮಿಯಾದೊಂದಿಗೆ ತಮ್ಮ ಸಮುದ್ರ ವ್ಯಾಪಾರವನ್ನು ಪ್ರಾರಂಭಿಸಿದ್ದರು. ರೋಮನ್‌ ಸಾಮ್ರಾಜ್ಯದಿಂದ ಈಜಿಪ್ಟ್ ಅನ್ನು ಸ್ವಾಧೀನಪಡಿಸಿಕೊಂಡಾಗ, ವ್ಯಾಪಾರವು ರೋಮನ್ನರರೊಂದಿಗೆ ಪ್ರಾರಂಭವಾಯಿತು.

ಮರುನಾಮಕರಣ!
ಆರ್‌ಎಂಎಸ್‌ ಎಂಪ್ರಸ್‌ ಅನ್ನು ಎಸ್‌ಎಸ್‌ ಲಾಯಲ್ಟಿ ಎಂದು ಮರುನಾಮಕರಣ ಮಾಡಲಾಯಿತು. 1919ರ ಎಪ್ರಿಲ್‌ 5ರಂದು ಲಂಡನ್‌ಗೆ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಿತು. ಬ್ರಿಟಿಷ್‌ ಕಂಪೆನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಶುಲ್ಕಗಳ ವಿಚಾರದಲ್ಲಿಯೂ ಬ್ರಿಟಿಷರು ಅಂದು ತುಂಬಾ ಸಮಸ್ಯೆಕೊಟ್ಟಿದ್ದರು. ಅವೆಲ್ಲವನ್ನು ಮೆಟ್ಟಿನಿಂತು ಸಂಸ್ಥೆ ಬೆಳೆಯಿತು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.