ನಿಷೇಧವಾದರೂ ಮಾರುವೇಷದಲ್ಲಿ ಬಂದಿದೆ ಪಬ್‌ಜಿ!


Team Udayavani, Apr 5, 2021, 1:50 AM IST

ನಿಷೇಧವಾದರೂ ಮಾರುವೇಷದಲ್ಲಿ ಬಂದಿದೆ ಪಬ್‌ಜಿ!

ಮಂಗಳೂರು: ಆನ್‌ಲೈನ್‌ ಗೇಮ್‌ಗಳಲ್ಲಿ ಬಹುತೇಕ ಗೇಮ್‌ಗಳು ಮಕ್ಕಳಲ್ಲಿ ಕ್ರೂರ ಸ್ವಭಾವವನ್ನು ಹುಟ್ಟಿಸಿ ಮಾರಣಾಂತಿಕವಾಗಿ ಪರಿಣಮಿಸುತ್ತವೆ. ಇಂತಹ ಗೇಮ್‌ಗಳಿಗೆ ಮಕ್ಕಳು “ಎಡಿಕ್ಷನ್‌’ (ವ್ಯಸನ)ಆಗುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತಾರೆ ಸೈಬರ್‌ ತಜ್ಞರು.

ಅನೇಕ ಮಕ್ಕಳಲ್ಲಿ ಕೋಪ, ಉದ್ವೇಗ ಹಾಗೂ ಖನ್ನತೆ (ಡಿಪ್ರಶನ್‌) ಕೂಡ ಇಂತಹ ಗೇಮ್‌ಗಳಿಂದಲೇ ಹುಟ್ಟಿಕೊಳ್ಳುತ್ತವೆ. ಇಂತಹ ಆಟಗಳನ್ನು ಆಡುತ್ತಾ ಹೋದಂತೆ ಮಿದುಳಿನಲ್ಲಿ ಡೊಪಮಿನ್‌ (ಫೀಲ್‌ ಗುಡ್‌ ಹಾರ್ಮೋನ್‌) ಬಿಡುಗಡೆಯಾಗುತ್ತದೆ. ಇದು ಆ ಗೇಮ್‌ ಆಡುವವರಲ್ಲಿ ಗೆಲುವಿನ ವಿಶೇಷ ಅನುಭವ ಹಾಗೂ ಮತ್ತೆ ಮತ್ತೆ ಗೆಲ್ಲಬೇಕು ಎಂಬ ಆಸೆಯನ್ನು ಹೆಚ್ಚಿಸುತ್ತದೆ. ಆಗ ಇದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಪ್ರೌಢ ಶಾಲೆ ಹಂತದ ಮಕ್ಕಳಲ್ಲಿ ಇದರ ಪ್ರಭಾವ ಹೆಚ್ಚು. ಪಬ್‌ಜಿ ಸೇರಿದಂತೆ ಹಲವು ರೀತಿಯ ಆನ್‌ಲೈನ್‌ ಗೇಮ್‌ಗಳು ಕೊಲ್ಲುವುದನ್ನು ಪ್ರೇರೇಪಿಸುತ್ತವೆ. ಕೊಲ್ಲುವುದು ಒಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಬಿಂಬಿಸುತ್ತವೆ. ಇದು ಕೂಡ ಮಕ್ಕಳಲ್ಲಿ ಕ್ರೂರತನ ಬೆಳೆಸಲು ಕಾರಣವಾಗುತ್ತದೆ ಎನ್ನುತ್ತಾರೆ ಮಂಗಳೂರಿನ ಸೈಬರ್‌ ತಜ್ಞ ಡಾ| ಅನಂತ ಪ್ರಭು ಜಿ. ಅವರು.

ಪಬ್‌ಜಿಗೂ ಸರ್ಕಂವೆಂಟ್‌ ದಾರಿ
ಪಬ್‌ಜಿ ಆನ್‌ಲೈನ್‌ ಗೇಮ್‌ನಿಂದ ಆಗಿರುವ ಅನಾಹುತಗಳನ್ನು ಮನಗಂಡು ಸರಕಾರ ಕಳೆದ ವರ್ಷವೇ ಇದನ್ನು ನಿಷೇಧಿಸಿತ್ತು. ಈ ಗೇಮ್ಸ್‌ ಈಗ ಮೂಲ ಸ್ವರೂಪದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಆದರೆ ಆನ್‌ಲೈನ್‌ನಲ್ಲಿ ಸರ್ಕಂವೆಂಟ್‌(ಪರ್ಯಾಯ ಮಾರ್ಗ) ದಾರಿಯಲ್ಲಿ ಇದೇ ಗೇಮ್‌ ಹೋಲುವ ಗೇಮ್‌ಗಳು ಇವೆ. ಇದು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಗೂಗಲ್‌ ಬ್ರೌಸರ್‌ ಆಧಾರಿತವಾಗಿ ನೇರವಾಗಿ ಇದು ಲಭ್ಯವಾಗುತ್ತಿರುವುದೇ ಈಗ ಎದುರಾಗಿರುವ ದೊಡ್ಡ ಸಮಸ್ಯೆ ಎನ್ನುತ್ತಾರೆ ತಜ್ಞರು.

ಹೆತ್ತವರ ಖಾತೆಗೂ ಕನ್ನ!
ಕೆಲವು ಗೇಮ್ಸ್‌ಗಳು ಉಚಿತವಾಗಿರುತ್ತವೆ, ಇನ್ನು ಕೆಲವು ಗೇಮ್ಸ್‌ಗಳಿಗೆ ಮೊದಲೇ ಹಣ ಪಾವತಿ ಮಾಡಬೇಕಾಗಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಹೆತ್ತವರಿಗೆ ತಿಳಿಯದೇ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ನಿಂದ ಹಣ ಪಾವತಿಸಿರುವುದು ಗೊತ್ತಾಗಿದೆ ಎನ್ನುತ್ತಾರೆ ಅನಂತ ಪ್ರಭು ಅವರು.

ಪೋಷಕರೇ ಎಚ್ಚೆತ್ತುಕೊಳ್ಳಿ…
ಮಕ್ಕಳ ಕೈಗೆ ಮೊಬೈಲ್‌ ನೀಡುವುದು ಸಾಮಾನ್ಯ ಎಂಬಂತಾಗಿದೆ. ಈ ರೀತಿ ನೀಡುವಾಗ ಮೊಬೈಲ್‌ನಲ್ಲಿ ಯಾವುದನ್ನು ಮಾತ್ರ ಬಳಸಬೇಕು ಎಂಬ ವಿವೇಚನೆ ಹೆತ್ತವರಲ್ಲಿ ಇರಬೇಕು. ಅನಗತ್ಯ, ಅಪಾಯಕಾರಿಯಾದುದನ್ನು ನೋಡಲು, ಬಳಕೆ ಮಾಡಲು ಸಾಧ್ಯವಾಗದಂತೆ ಬ್ಲಾಕ್‌ ಮಾಡಬೇಕು. ಗೊತ್ತಿಲ್ಲವಾದರೆ ತಿಳಿದವರಿಂದ ಅರಿತುಕೊಳ್ಳಬೇಕು. ಹೆತ್ತವರು ಮತ್ತು ಶಿಕ್ಷಕರ ಪಾತ್ರ ಇದರಲ್ಲಿ ದೊಡ್ಡದು ಎನ್ನುವುದು ತಜ್ಞರ ಸಲಹೆ.

ಇಂಟರ್‌ನೆಟ್‌ ಬ್ರೌಸಿಂಗ್‌: ಮಕ್ಕಳ ಮೇಲೆ ಸಿಐಡಿ ನಿಗಾ?
ಅಂತರ್ಜಾಲದಲ್ಲಿ ಅಪಾಯಕಾರಿ ಯಾಗಿರುವ, ನಿಷೇಧಿಸಲ್ಪಟ್ಟ ಕೆಲವು ಸೈಟ್‌ಗಳನ್ನು ಬ್ರೌಸ್‌ ಮಾಡುತ್ತಿರುವ ನಿರ್ದಿಷ್ಟ ವಯಸ್ಸಿನವರ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದ್ದು ಈ ಸಂಬಂಧವಾಗಿ ಸ್ಥಳೀಯ ಸೈಬರ್‌ ಪೊಲೀಸ್‌ ಠಾಣೆಗಳಿಂದಲೂ ಮಾಹಿತಿ ಕೋರಲಾಗಿದೆ ಎಂದು ತಿಳಿದುಬಂದಿದೆ. ಸೈಬರ್‌ ಪ್ರಕರಣಗಳನ್ನು ಸಿಐಡಿ ನಿಭಾಯಿಸುತ್ತಿದೆ. ಇಂತಹ ಅಪರಾಧಗಳಿಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2020ರಂತೆ 3ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಗೇಮರ್ ಕಮ್ಯುನಿಟಿ’ಯ ಅಪಾಯ
ಪಬ್‌ಜಿಯಂತಹ ಆನ್‌ಲೈನ್‌ ಗೇಮ್‌ಗಳು ಇನ್ನೊಂದು ಕಾರಣಕ್ಕೂ ಅಪಾಯಕಾರಿ. ಒಂದು ವೇಳೆ ಆ ಆಟಕ್ಕೆ ಅಡಿಕ್ಟ್ ಆಗದೇ ಇದ್ದರೂ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಅದರಿಂದ ಹೊರಗೆ ಬರಲಾಗುವುದಿಲ್ಲ. ಅದರಿಂದ ಹೊರಬರಬೇಕು ಅಂದು ಕೊಂಡರೂ “”ಗೇಮರ್ ಕಮ್ಯುನಿಟಿ’ ಮತ್ತೆ ಮತ್ತೆ ಅದರತ್ತ ಸೆಳೆಯುತ್ತದೆ. ಈ ರೀತಿಯ ಗೇಮ್‌ಗಳನ್ನು ಆಡುವವರದ್ದೇ ಗುಂಪಿಗೆ ಗೇಮರ್ ಕಮ್ಯುನಿಟಿ ಎನ್ನಲಾಗುತ್ತದೆ. ಉದಾಹರಣೆಗೆ ಪಬ್‌ಜಿ ಆಟ ಆಡುವವರದ್ದೇ ಒಂದು ಗುಂಪು ಇರುತ್ತದೆ. ಆ ಗುಂಪು ವಾಟ್ಸ್‌  ಆ್ಯಪ್‌ ಅಥವಾ ಇತರ ರೀತಿಯಲ್ಲಿ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಂಡು ತನ್ನ ಸದಸ್ಯರನ್ನು ಸದಾ ಉತ್ತೇಜಿಸುತ್ತಾ ಪ್ರೇರೇಪಿಸುತ್ತಾ ಇರುತ್ತದೆ. ಅಲ್ಲದೆ ಈ ಗುಂಪು ಅಶ್ಲೀಲ ದೃಶ್ಯಗಳು, ಡ್ರಗ್ಸ್‌ ಮೊದಲಾದ ಅಕ್ರಮಗಳ ಬಗ್ಗೆಯೂ ಯುವಜನತೆಯನ್ನು ಆಕರ್ಷಿಸಿ ಅವರು ಆ ಗುಂಪು ಬಿಡದಂತೆ ಮಾಡುವ ಸಾಧ್ಯತೆಗಳು ಇರುತ್ತವೆ ಎನ್ನುತ್ತಾರೆ ಡಾ| ಪ್ರಭು.

ಯುವ ಸಮುದಾಯ ಕೆಡಿಸುವ ಸಂಚು
ಇಂತಹ ಗೇಮ್‌ಗಳು ಮಕ್ಕಳು, ಯುವ ಸಮುದಾಯಕ್ಕೆ ಸುಲಭವಾಗಿ ದೊರೆಯುವಂತೆ ಮಾಡುವ ಸಂಚು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಕೆಲವು ಗೇಮ್‌ಗಳನ್ನು ಉಚಿತವಾಗಿಯೂ ನೀಡಲಾಗುತ್ತಿದೆ. ಇದರ ಚಟ ಯುವಜನತೆ ಬೆಳೆಸಿಕೊಂಡರೆ ಅವರು ಯಾವುದೇ ರೀತಿಯಲ್ಲಿ ದೇಶದ ಸಂಪನ್ಮೂಲವಾಗುವುದಿಲ್ಲ. ಈ ಮೂಲಕ ಯುವಜನತೆಯನ್ನು ಬಲಿ ತೆಗೆದುಕೊಳ್ಳುವ ಯತ್ನ ನಡೆಯುತ್ತಿದೆ.

ಬೆಳವಣಿಗೆಗೆ ಮಾರಕ
ಆನ್‌ಲೈನ್‌ ಗೇಮ್‌ಗಳು ಮಕ್ಕಳ ಬೆಳವಣಿಗೆಗೆ ಮಾರಕ. ಅದರಲ್ಲಿ ಬರುವ ಹೆಚ್ಚಿನ ಪಾತ್ರಗಳು ಮಕ್ಕಳಲ್ಲಿ ಋಣಾತ್ಮಕ ಮನೋಭಾವ, ಬೆಳೆಸುತ್ತವೆ. ಹೆತ್ತವರು ತಮ್ಮ ಮಕ್ಕಳಿಗೆ ಮೊಬೈಲ್‌ ನೀಡಿ ಸಮಾಧಾನ ಪಡಿಸುವ ಅಭ್ಯಾಸವನ್ನು ಆರಂಭಿಸಬಾರದು. ಬದಲಾಗಿ ಆಟಿಕೆ, ಪುಸ್ತಗಳ ಅಭ್ಯಾಸ ಮಾಡಿಸಿದರೆ ಉತ್ತಮ. ಅನಿವಾರ್ಯ ಸಂದರ್ಭದಲ್ಲಿ ಮೊಬೈಲ್‌ ನೀಡುವಾಗ ಅನಗತ್ಯ ವಿಚಾರಗಳು ತೆರೆದುಕೊಳ್ಳದಂತೆ ಲಾಕ್‌ ಮಾಡಬೇಕು.
– ಡಾ| ಗಿರೀಶ್‌, ಮಕ್ಕಳ ತಜ್ಞರು, ಲೇಡಿಗೋಶನ್‌ ಸರಕಾರಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.