ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಇಂದು ಮತದಾನ : ಮತ ಸಮರದಲ್ಲಿ ಭವಿಷ್ಯದ ಹುಡುಕಾಟ
Team Udayavani, Apr 6, 2021, 7:30 AM IST
ಹೊಸದಿಲ್ಲಿ: ಹಲವು ವಾರಗಳ ಹೈವೋಲ್ಟೆàಜ್ ರ್ಯಾಲಿಗಳು, ಮ್ಯಾರಥಾನ್ ರೋಡ್ ಶೋಗಳು, ರಾಜಕೀಯ ನಾಯಕರ ಅಬ್ಬರವು ತಣ್ಣಗಾಗಿ, ದಕ್ಷಿಣದ ಮೂರು ರಾಜ್ಯಗಳು “ಹಕ್ಕು ಚಲಾವಣೆಯ ದಿನ’ಕ್ಕೆ ಕಾಲಿರಿಸಿವೆ. ಮಂಗಳವಾರ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದ್ದು, ಅಸ್ಸಾಂ ಕೊನೆಯ ಹಂತ ಹಾಗೂ ಪ. ಬಂಗಾಲ 3ನೇ ಹಂತದ ಮತದಾನವನ್ನು ಕಾಣಲಿದೆ.
ತಮಿಳುನಾಡು ಎಐಎಡಿಎಂಕೆ ಡಿಎಂಕೆ
– ಪಳನಿಸ್ವಾಮಿಗೆ ಈಗ ಸಿಎಂ ಕಿರೀಟ ಉಳಿಸಿಕೊಳ್ಳಬೇಕಾದ ಅನಿ ವಾರ್ಯ ಇದೆ.
– ಜಯಾ ಅನುಪಸ್ಥಿತಿ ಯಲ್ಲಿ ಎಐಎಡಿಎಂಕೆ ಯನ್ನು ಜನರು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂಬುದು ಸ್ಪಷ್ಟವಾಗಲಿದೆ.
– ಎಐಎಡಿಎಂಕೆ ಈ ಚುನಾವಣೆಯ ಗೆಲುವಿಗೆ ಎಲ್ಲ ರೀತಿಯ ಕಸರತ್ತುಗಳನ್ನು ನಡೆಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಕರೆಸಿ ರ್ಯಾಲಿ, ರೋಡ್ ಶೋ ನಡೆಸಿದೆ.
– ಶಶಿಕಲಾ ಕಣದಿಂದ ದೂರವುಳಿದಿದ್ದರಿಂದ ಎಐಎಡಿಎಂಕೆ ನಿಟ್ಟುಸಿರು ಬಿಟ್ಟಿದೆ. ಆದರೆ ಎಎಂಎಂಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರು ವುದರಿಂದ ಮತ ವಿಭಜನೆ ಖಚಿತ.
– ಪಕ್ಷ ಸೋಲುಂಡರೆ ಎಐಎಡಿಎಂಕೆ ಪಕ್ಷ ಹೋಳಾಗುವ ಸಾಧ್ಯತೆ ಅಧಿಕ.
ಕೇರಳ : ಎಲ್ಡಿಎಫ್ ಯುಡಿಎಫ್
– ಪ್ರತೀ ಬಾರಿಯೂ ಪರ್ಯಾಯ ಪಕ್ಷವನ್ನೇ ಆಯ್ಕೆ ಮಾಡುವ ಕೇರಳಿಗರು ಈ ಬಾರಿ ಸಂಪ್ರದಾಯ ಮುರಿದು ಎಲ್ಡಿಎಫ್ ಅನ್ನೇ ಮತ್ತೆ ಅಧಿಕಾರಕ್ಕೆ ತರ ಲಿದ್ದಾರೆ ಎಂಬ ಸಮೀಕ್ಷಾ ವರದಿಗಳು ಚಿನ್ನ ಕಳ್ಳಸಾಗಾಟ ಆರೋಪಗಳ ನಡುವೆಯೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಲ ತಂದುಕೊಟ್ಟಿವೆ.
– ಇದು ಎಡಪಕ್ಷಕ್ಕೆ ಅತ್ಯಂತ ನಿರ್ಣಾಯಕ ಚುನಾವಣೆ. ಎಲ್ಲ ರಾಜ್ಯಗಳಲ್ಲೂ ಬಲ ಕಳೆದುಕೊಂಡಿರುವ ಸಿಪಿಎಂ, ಸದ್ಯಕ್ಕೆ ಕೇರಳದಲ್ಲಿ ಮಾತ್ರ ಜೀವಂತಿಕೆ ಕಾದುಕೊಂಡಿದೆ. ಹೀಗಾಗಿ, ಇದು ಸಿಪಿಎಂಗೂ ಮಾಡು ಇಲ್ಲವೇ ಮಡಿ ಚುನಾವಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು