ಪುರಸಭೆ: 36.90 ಲಕ್ಷ ರೂ. ಉಳಿತಾಯ ಬಜೆಟ್‌


Team Udayavani, Apr 7, 2021, 2:50 PM IST

ಪುರಸಭೆ: 36.90 ಲಕ್ಷ ರೂ. ಉಳಿತಾಯ ಬಜೆಟ್‌

ಕುಣಿಗಲ್: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಮಂಗಳವಾರ ಇಲ್ಲಿನ ಪುರಸಭೆಯಲ್ಲಿ ನಡೆದ2021-22ನೇ ಸಾಲಿನ ಅಯವ್ಯಯವು ಬಜೆಟ್‌ ಅನುಮೋದನೆಗೊಂಡಿತು.

ಪುರಸಭೆ ಅಧ್ಯಕ್ಷ ಎಸ್‌.ಕೆ.ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 36.90 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿತು. ಅಂತೇಯೇ ಸರ್ಕಾರ ಸೇರಿದಂತೆ ವಿವಿಧ ಬಾಬ್ತುಗಳಿಂದ 18.47 ಕೋಟಿಆದಾಯ ನಿರೀಕ್ಷಿಸಿದೆ. ಈ ಪೈಕಿ 31.39 ಕೋಟಿ ರೂ.ಗಳನ್ನು ಪಟ್ಟಣದ ಅಭಿವೃದ್ಧಿಗಾಗಿ ವಿನಿಯೋಗಿಸಲು ತಿರ್ಮಾನಿಸಲಾಗಿದೆ. ಆಯವ್ಯಯದ ಪಟ್ಟಿಯನ್ನು ಅಧ್ಯಕ್ಷ ಎಸ್‌.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೆಮಿಉಲ್ಲಾ, ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್‌ ಬಿಡುಗಡೆ ಮಾಡಿದರು.

ಅದಾಯ ಮೂಲಗಳು: ಸ್ವಯಂ ಘೋಷಿತ ಆಸ್ತಿತೆರಿಗೆಯಿಂದ 1.80 ಕೋಟಿ, ನೀರು ಸರಬರಾಜು ಸಂಪರ್ಕಗಳಿಂದ 66 ಲಕ್ಷ, ಪುರಸಭೆ ಬಸ್‌ ನಿಲ್ದಾಣಸುಂಕ, ದಿನವಹಿ ನೆಲವಳಿ ಶುಲ್ಕ, ಸಂತೆ ನೆಲವಳಿಸುಂಕ, ಬೀದಿ ವ್ಯಾಪಾರಿಗಳ ನೋಂದಣಿ ಸುಂಕ33.92 ಲಕ್ಷ, ಪುರಸಭೆ ಸೇರಿದ ಅಂಗಡಿ ಮಳಿಗೆ,ಮಾರುಕಟ್ಟೆ ಮಳಿಗೆಗಳಿಂದ 30 ಲಕ್ಷ, ಪುರಸಭೆ ಪರಿ ವೀಕ್ಷಣಾ ಶುಲ್ಕ, ಉದ್ದಿಮೆ ಪರವಾನಗೆ, ಖಾತಾ ನಕಲು, ಬದಲಾವಣೆ, ಇತರೆ ಫೀಗಳಿಂದ 85 ಲಕ್ಷ, ರಾಜ್ಯ ಹಕಾಸು ಆಯೋಗದ ವೇತನ ಅನುದಾನ,ವಿದ್ಯುತ್‌ ವೆಚ್ಚ, ಕುಡಿಯುವ ನೀರು, ಅನುದಾನಗಳಿಗೆ ಸಂಬಂಧಿಸಿದಂತೆ 6 ಕೋಟಿ, 15 ನೇ ಹಣ ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ 2 ಕೋಟಿ, ಎಸ್‌ಎಫ್‌ಸಿ ವೇತನ ಅನುದಾನ 3 ಕೋಟಿ, ಎಸ್‌.ಎಫ್‌.ಸಿ ವಿದ್ಯುತ್‌ ಅನುದಾನ 2 ಕೋಟಿ, ಬ್ಯಾಂಕ್‌ ಬಡ್ಡಿ 80 ಲಕ್ಷ ರೂ. ಸೇರಿದಂತೆ ಇತರೆ ವಿವಿಧ ಮೂಲಗಳಿಂದ18,47,97,000 ರೂ. ಅದಾಯ ನಿರೀಕ್ಷಿಸಲಾಗಿದೆ.

ಖರ್ಚಿನ ವಿವರ: ಪುರಸಭೆ ಸಿಬ್ಬಂದಿ ವೇತನಕ್ಕೆ 3 ಕೋಟಿ, ಪುರಸಭೆ ವ್ಯಾಪ್ತಿಯ ಬೀದಿ ದೀಪಗಳ ಮತ್ತು ನೀರಿನ ಸರಬರಾಜು ವ್ಯವಸ್ಥೆ, ವಿದ್ಯುತ್‌ ವೆಚ್ಚಕ್ಕೆ 2 ಕೋಟಿ, ಪುರಸಭಾ ಆಡಳಿತ ವೆಚ್ಚಕ್ಕೆ 1.80 ಕೋಟಿ,ಘನತಾಜ್ಯ ವಸ್ತು ವಿಲೇವಾರಿ ನಿರ್ವಹಣೆಗೆ 1.5 ಕೋಟಿ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 2 ಕೋಟಿ, ಪುರಸಭೆ ನೀರು ಸರಬರಾಜುನಿರ್ವಹಣೆಗೆ 50 ಲಕ್ಷ, ಆಟೋ, ಟ್ಯಾಕ್ಸಿ ನಿಲ್ದಾಣಅಭಿವೃದ್ಧಿಗೆ 15 ಲಕ್ಷ, ಪಟ್ಟಣದಲ್ಲಿ ಹೊಸದಾಗಿ ಬಸ್‌ ನಿಲ್ದಾಣ ಕಾಮಗಾರಿಗೆ 3 ಕೋಟಿ, ಪುರಸಭೆ ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗೆ 2.5 ಕೋಟಿ, ಉದ್ಯಾನವನಗಳ ಅಭಿವೃದ್ಧಿಗೆ 65 ಲಕ್ಷ, ಪ.ಜಾತಿ, ಪಂಗಡ, ಇತರೆಬಡ ಜನರ ಕಲ್ಯಾಣ, ವಿಚೇತನರ ಶ್ರೇಯೋಭಿವೃದ್ಧಿ, ಶುದ್ಧ ಕುಡಿಯುವ ನೀರು ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿ ಹಾಗೂ ಮೂಲ ಸೌಲಭ್ಯಕ್ಕೆ 43.20 ಲಕ್ಷರೂ. ಸೇರಿದಂತೆ ಇತರೆ ಅಭಿವೃದ್ಧಿಗಾಗಿ 31,03,95,000 ಹಣ ಕಾಯ್ದಿರಿಸಲಾಗಿದೆ.

ಪುರಸಭೆ ಸದಸ್ಯ ರಂಗಸ್ವಾಮಿ ಮಾತನಾಡಿ, 2019-20ನೇ ಸಾಲಿನಲ್ಲಿ ಪಟ್ಟಣದ ಸೌಂದರೀಕಣಕ್ಕೆ ಲಕ್ಷ, ಶವ ಸಂಸ್ಕಾರದ ವಾಹನ ಖರೀದಿಗೆ 25 ಲಕ್ಷ,ದಲಿತರ ಶವ ಸಂಸ್ಕಾರ ಸಹಾಯ ಧನಕ್ಕೆ 5 ಲಕ್ಷ,ಆಟೋ ಚಾಲಕರ ಕುಡಿಯುವ ನೀರಿಗೆ 1.5 ಲಕ್ಷ, ಕೊಳಚೆ ಪ್ರದೇಶದ ಅಭಿವೃದ್ಧಿಗೆ 25 ಲಕ್ಷ, ಬಯಲು ರಂಗ ಮಂದಿರ ಅಭಿವೃದ್ಧಿಗೆ 5 ಲಕ್ಷ ಸೇರಿದಂತೆ ವಿವಿಧ

ಅಭಿವೃದ್ಧಿಗೆ ಕಳೆದ ಬಾರಿ ಬಜೆಟ್‌ನಲ್ಲಿ ಹಣ ಕಾಯ್ದಿರಿಸಲಾಗಿತ್ತು. ಆದರೆ, ಆ ಹಣ ಒಂದು ನಯಾಪೈಸೆ ಖರ್ಚು ಮಾಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಆವಿಚಾರವನ್ನೇ ಪ್ರಸ್ತಾಪ ಮಾಡಿಲ್ಲ ಎಂದು ಅಸಮಾಧಾನವ್ಯಕ್ತ ಪಡಿಸಿದ ಅವರು, ಕೈ ಬಿಟ್ಟಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬಜೆಟ್‌ಗೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭಾ ತ್ಯಾಗ: ಬಜೆಟ್‌ ಮಂಡನೆ ಮುನ್ನ ಪೂರ್ವಭಾವಿ ಸಭೆ ನಡೆಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೃಷ್ಣ, ಇದು ನಮಗೆ ಒಪ್ಪಿಗೆ ಇಲ್ಲ ಎಂದು ಸಭೆಯಿಂದ ಹೊರ ನಡೆದರು.ಬಿಜೆಪಿಯ ಇತರೆ ಸದಸ್ಯರು ಅವರನ್ನುಹಿಂಬಾಲಿಸಿದರು. ಆದರೆ ಕಾಂಗ್ರೆಸ್‌ ಅತ್ಯಧಿಕಬಹುಮತ ಇದ್ದ ಕಾರಣ ಬಜೆಟ್‌ ಮಂಡನೆಯಾಯಿತು.

ಸ್ಟಡ್ ಫಾರಂಗೆ ಬೀಗ ಹಾಕಿ: ಸದಸ್ಯರ ತಾಕೀತು :

ಸದಸ್ಯರಾದ ಬಿ.ಎನ್‌. ಅರುಣ್‌ಕುಮಾರ್‌, ಕೋಟೆ ನಾಗಣ್ಣ, ಕೆ.ಎಸ್‌.ಕೃಷ್ಣ ಮಾತನಾಡಿ, 2019-20ನೇ ಸಾಲಿಗೆ ಕುಣಿಗಲ್‌ ಸ್ಟಡ್‌ ಫಾರಂನಿಂದ 1.59 ಕೋಟಿ ಕಂದಾಯ ಬಾಕಿ ಇದೆ. ಏಕೆ ಕಂದಾಯ ವಸೂಲಿ ಮಾಡಿಲ್ಲ ಎಂದು ಕಂದಾಯ ಅಧಿಕಾರಿ ಜಗರೆಡ್ಡಿ ಅವರನ್ನು ತರಾಟೆ ತೆಗೆದುಕೊಂಡರು. ಬಡವರು ಕಂದಾಯ ಕಟ್ಟಲಿಲ್ಲ ಎಂದರೇ ಟಾಮ್‌, ಟಾಮ್‌ ಹೊಡೆದು ಹಣ ವಸೂಲಿ ಮಾಡುತ್ತೀರಾ, ಬಡವರಿಗೆ ಒಂದು ನ್ಯಾಯ, ಶ್ರೀ ಮಂತರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದ ಅವರು, 2021-22ನೇ ಸಾಲಿಗೆ ಸ್ಟಡ್‌ ಫಾರಂ ಗುತ್ತಿಗೆಅವಧಿ ಮುಗಿಯಲಿದೆ. ಯಾರಿಂದ ಬಾಕಿ ವಸೂಲಿ ಮಾಡುತ್ತೀರಾ ಎಂದರು. ನಾಳೆಯೇ ಸ್ಟಡ್‌ ಫಾರಂಗೆ ಬೀಗ ಹಾಕಿ ಬಾಕಿ ಕಂದಾಯದ ಹಣ ವಸೂಲಿ ಮಾಡಬೇಕೆಂದು ತಾಕೀತು ಪಡಿಸಿದರು.

ಪ್ರಸಕ್ತ ಸಾಲಿನ ಬಜೆಟ್‌ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇದೊಂದುಜನಪರ ಬಜೆಟ್‌ ಆಗಿದೆ. ಆದರೆ,ಯಾವುದೋ ಒಂದು ಕಾರಣ ಇಟ್ಟುಕೊಂಡುಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದು ವಿಷಾದನೀಯ.  ಎಸ್.ಕೆ.ನಾಗೇಂದ್ರ, ಪುರಸಭಾ ಅಧ್ಯಕ್ಷ

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.