ನಟಿ ಊರ್ವಶಿಗೆ ಮರೆತು ಹೋಯಿತೆ ರಿಷಭ್ ಪಂತ್ ಹೆಸರು ?
Team Udayavani, Apr 14, 2021, 6:39 PM IST
ಬಾಲಿವುಡ್ ನಟಿ ಊರ್ವಶಿ ರೌಟೆಲಾ ಹಾಗೂ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ರಿಲೆಷನ್ಶಿಪ್ನಲ್ಲಿದ್ದದ್ದು ಈಗ ಹಳೇಯ ವಿಚಾರ. ಹೊಸ ಮ್ಯಾಟರ್ ಏನಪ್ಪಾ ಅಂದ್ರೆ ಬಿಟೌನ್ನ ಈ ಚೆಂದುಳ್ಳಿ ಚೆಲುವೆಗೆ ಯಾವ ಕ್ರಿಕೆಟಿಗರ ಬಗ್ಗೆಯೂ ಗೊತ್ತಿಲ್ಲವಂತೆ.
ಹೌದು, ಅದು 2018ರ ಸಮಯ. ಪಂತ್ ಹಾಗೂ ಊರ್ವಶಿ ಕುರಿತು ರೂಮರೊಂದು ದಟ್ಟವಾಗಿ ಹಬ್ಬಿತ್ತು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಟಾಕ್ ಕೇಳಿ ಬಂದಿತ್ತು. ಒಬ್ಬರ ಕಿವಿಯಿಂದ ಮತ್ತೊಬ್ಬರ ಕಿವಿಗೆ ಈ ಗುಸುಗುಸು ಗುಟ್ಟು ಹರಡುತ್ತಿರುವಾಗಲೇ ಪಂತ್, ಊರ್ವಶಿಯಿಂದ ಅಂತರ ಕಾಯ್ದುಕೊಂಡು ಬಿಟ್ಟರು. ವಾಟ್ಸಾಪ್ನಲ್ಲಿ ತನ್ನಾಕೆಯನ್ನು ಬ್ಲಾಕ್ ಮಾಡಿಬಿಟ್ಟರು. ‘They are in love’ ಎನ್ನುವ ಸದ್ದಿನ ನಡುವೆಯೇ ಇಶಾ ನೆಗಿ ಜತೆಗಿನ ತಮ್ಮ ಪ್ರೀತಿಯನ್ನು ರಿಷಭ ಅಧಿಕೃತವಾಗಿ ಘೋಷಿಸಿಬಿಟ್ಟರು.
ಪಂತ್ ಹಾಗೂ ಊರ್ವಶಿಯ ಈ ಓಲ್ಡ್ ಲವ್ ಕಹಾನಿ ಈಗೇಕೆ ಮುನ್ನೆಲೆಗೆ ಬಂತು ಎನ್ನುವ ಪ್ರಶ್ನೆಗೆ ಕಾರಣ, ಆಕೆ ನೀಡಿರುವ ಒಂದು ಸ್ಟೇಟ್ಮೆಂಟ್.
ಇತ್ತೀಚಿಗೆ ಸೋಷಿಯಲ್ ಮೀಡಿಯಾ ಲೈವ್ನಲ್ಲಿ ‘ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು’ ಎಂದು ಊರ್ವಶಿಗೆ ಆಕೆಯ ಅಭಿಮಾನಿಯೋರ್ವ ಪ್ರಶ್ನೆ ಹಾಕಿದ್ದ. ಇದಕ್ಕೆ ಉತ್ತರಿಸಿದ ಆಕೆ, ನನಗೆ ಯಾವ ಕ್ರಿಕೆಟರ್ ಬಗ್ಗೆಯೂ ಗೊತ್ತಿಲ್ಲ,ಯಾಕಂದರೆ ನಾನು ಕ್ರಿಕೆಟ್ ನೋಡುವುದಿಲ್ಲ ಎಂದಿದ್ದಾರೆ. ಮುಂದುವರೆದು ಮಾತಾಡಿದ ಆಕೆ, ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ತುಂಬಾ ಗೌರವ ಇದೆ ಎಂದು ಹೇಳಿದ್ದಾರೆ.
ಊರ್ವಶಿಯ ಈ ಉತ್ತರದಿಂದ ಗೊಂದಲಕ್ಕೆ ಒಳಗಾದ ಅಭಿಮಾನಿಗಳು, ಯಾವ ಕ್ರಿಕೆಟರ್ ಗಳ ಬಗ್ಗೆಯೂ ಗೊತ್ತಿಲ್ಲವೆಂದ ಮೇಲೆ ವಿರಾಟ್ ಹಾಗೂ ತೆಂಡೊಲ್ಕರ್ ಕುರಿತು ಗೌರವ ಹೇಗೆ ಬಂತು ? ಬಹುಶಃ ರಿಷಭ್ ಪಂತ್ ಮೇಲಿನ ಕೋಪಕ್ಕೆ ಹಾಗೆ ಹೇಳಿರಬಹುದೆಂದು ತಮ್ಮಲ್ಲೆ ಪ್ರಶ್ನೆ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
MUST WATCH
ಹೊಸ ಸೇರ್ಪಡೆ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್