ಕೆಲಸದಿಂದ ವಜಾಗೊಳಿಸದಿರಲು ಒತ್ತಾಯ
Team Udayavani, Apr 16, 2021, 6:55 PM IST
ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಮ್ಯಾನ್ಯುಯಲ್ ಟೆಂಡರ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಗಂಟೆ ಗಾಡಿಯವರನ್ನು ಬದಲಾಯಿಸದೆ ಮುಂದುವರೆಸಬೇಕೆಂದು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅನೇಕ ವರ್ಷಗಳಿಂದ ಪಾಲಿಕೆ ಗಂಟೆ ಗಾಡಿಗಳಲ್ಲಿ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಈ ಹಿಂದೆ ನಾವು ಹಂದಿ ಸಾಕುತ್ತಿದ್ದು, ಸಾಕಷ್ಟು ಕೊಳಕು ಪ್ರದೇಶ ಸೃಷ್ಟಿಯಾದ ಕಾರಣ ಪಾಲಿಕೆಯಿಂದ ಹಂದಿ ಸಾಕಾಣಿಕೆ ಬಿಡಿಸಿ ಗಂಟೆ ಗಾಡಿಯಲ್ಲಿ ಕೆಲಸ ಮಾಡಲು ಮ್ಯಾನ್ಯುಯಲ್ ಟೆಂಡರ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಈಗ ಗಂಟೆ ಗಾಡಿಯವರನ್ನು ತೆಗೆದುಹಾಕುವ ಪ್ರಸ್ತಾಪವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಉದ್ಯೋಗವಿಲ್ಲದಂತಾಗಿ ಪುನಃ ಹಂದಿ ಸಾಕುವುದು ಅನಿವಾರ್ಯವಾಗುತ್ತದೆ. ಅದರಿಂದ ಮತ್ತೂಮ್ಮೆ ನಗರ ಮಲೀನವಾಗುತ್ತದೆ. ಪ್ರಸ್ತುತ ಕೊರೊನಾ ಸಾಂಕ್ರಾಮಿಕ ರೋಗವಿದ್ದರೂ ಜೀವದ ಹಂಗುತೊರೆದು ಕೆಲಸ ಮಾಡಿದ್ದೇವೆ. 2 ಬಾರಿ ತುಂಗಾ ನದಿ ಪ್ರವಾಹದ ಸಂದರ್ಭದಲ್ಲಿ ಜನ ಸಂಕಷ್ಟಕ್ಕೀಡಾದಾಗ ಸ್ವಚ್ಚತಾ ಕೆಲಸ ಮಾಡಿದ್ದೇವೆ.
ಇಷ್ಟು ದಿನ ಗಂಟೆ ಗಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮಗೆ ಹೆಚ್ಚುವರಿಯಾಗಿ ಹಣ ಪಾವತಿಸಿಲ್ಲ. ದಯಮಾಡಿ ಹಣ ಸಂದಾಯ ಮಾಡಬೇಕು. ವಾಹನಗಳಿಗೆ ಲೋನ್ ಇದ್ದು, ಅದನ್ನು ಪಾವತಿಸಲು ಅವಕಾಶ ಕೊಡಬೇಕು. ಗಂಟೆ ಗಾಡಿ ಸಂಘದ ಸಮಸ್ಯೆ ಇತ್ಯರ್ಥವಾಗದ ವರೆಗೆ ಪಾಲಿಕೆ ವಾಹನ ಬಿಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಲಸ ಮುಂದುವರೆಸಲು 2 ವರ್ಷ ಕಾಲಾವಕಾಶ ನೀಡಬೇಕು. ಮ್ಯಾನ್ಯುಯಲ್ ಟೆಂಡರ್ನಿಂದ ತೆಗೆದು ಹಾಕದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗಂಟೆ ಗಾಡಿಗಳ ಸಂಘದ ಪ್ರಮುಖರಾದ ಲೋಕೇಶ, ಅಬ್ಬಯ್ಯ, ಸುರೇಶ್, ಪುಟ್ಟರಾಜು, ಮಂಜುನಾಥ, ರಮೇಶ, ದುಗ್ಗೇಶ, ಕುಟೂರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Shimoga; ಕಾಡಾನೆ ದಾಳಿಗೆ ವ್ಯಕ್ತಿ ಬಲಿ
MUST WATCH
ಹೊಸ ಸೇರ್ಪಡೆ
Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?