ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ
Team Udayavani, Apr 18, 2021, 7:44 AM IST
18-04-2021
ಮೇಷ: ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಜವಾಬ್ದಾರಿಯುತ ನಡೆಯು ನಿಮ್ಮದಾಗಲಿ. ಜನರಿಂದ ಹಲವು ತರದ ಮಾತನ್ನು ಅನ್ನಿಸಿಕೊಂಡು ಬೇಸರವಾದೀತು.
ವೃಷಭ: ಮಹಿಳೆಯರಿಗೆ ಬೆಳ್ಳಿ, ಚಿನ್ನದ ಅಲಂಕಾರಿಕ ವಸ್ತುಗಳ ಖರೀದಿ ತೋರಿಬರಲಿದೆ. ಮನೆ ರಿಪೇರಿಯಂತಹ ಕೆಲಸಗಳು ನಡೆದಾವು. ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸು ಹಂತ ಹಂತವಾಗಿ ತೋರಿಬಂದೀತು.
ಮಿಥುನ: ವೈದ್ಯಕೀಯ ವೃತ್ತಿ ನಿರತರಿಗೆ ಈ ಸಮಯವು ಉತ್ತಮವಲ್ಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ತುಂಬಾ ಗಮನಹರಿಸಬೇಕು. ದೇವತಾ ಕಾರ್ಯಗಳು ವಿಘ್ನಗಳಿಂದಲೇ ನಡೆಯಲಿದೆ.
ಕರ್ಕ: ಕೋಪಗೊಂಡರೂ ಮರುಕ್ಷಣದಲ್ಲಿ ಶಾಂತಚಿತ್ತರು. ಯೋಚಿಸಿ ಮಾತನಾಡುವ ನಿಮಗೆ ಈ ವರ್ಷದ ಕೊನೆ ತನಕ ಅಷ್ಟಕಷ್ಟೇ. ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವು ತೋರಿಬರುತ್ತದೆ.
ಸಿಂಹ: ಅಸಹನೆ, ಸ್ವಾರ್ಥಕ್ಕಾಗಿ ಕಾರ್ಯಸಾಧನೆ, ಆರ್ಥಿಕವಾಗಿ ಲೆಕ್ಕಾಚಾರದ ನಿಮಗೆ ಈ ವರ್ಷದ ಕೊನೆ ತನಕ ಪ್ರತಿಕೂಲತೆ ಆಗಾಗ ತೋರಿ ಬಂದರೂ ನಿಮ್ಮ ಮನಸ್ಸಿನ ಇಚ್ಛೆ ನೆರವೇರಲಿದೆ. ಮುನ್ನಡೆಯಿರಿ.
ಕನ್ಯಾ: ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಜಾಗ್ರತೆಯಾಗಿರಿ. ಪಿತ್ತ ಕೋಶದಲ್ಲಿ ಸಮಸ್ಯೆಯು ಕಂಡು ಬರಬಹುದು. ಆರೋಗ್ಯ ಸುಧಾರಿಸಲಿದೆ.
ತುಲಾ: ವೃತ್ತಿರಂಗದಲ್ಲಿ ಸನ್ಮಿತ್ರರ ಸಮಾಗಮದಿಂದ ಕೆಲಸವು ಪೂರ್ಣಗೊಳ್ಳಲಿದೆ. ಸಲಹೆಗಳು ಮುನ್ನಡೆಗೆ ಸಾಧಕವಾಗಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಕಂಕಣಬಲವನ್ನು ತಂದಾವು. ವ್ಯಾಪಾರದಲ್ಲಿ ಲಾಭವಿದೆ.
ವೃಶ್ಚಿಕ: ಭೂ ಖರೀದಿಗೆ ಸಕಾಲವಿದು. ಸದುಪಯೋಗಿಸಿಕೊಳ್ಳಿ. ವಾಹನ ಖರೀದಿಗೆ ಸಕಾಲವಲ್ಲ. ಮನೆಯಲ್ಲಿ ಪತ್ನಿಗೆ ಪ್ರಾಮುಖ್ಯತೆ ನೀಡಿರಿ. ವೈದ್ಯಕೀಯ ವೃತ್ತಿಯವರಿಗೆ ಪ್ರಶಂಸೆ ದೊರಕಲಿದೆ.
ಧನು: ನೀವು ಧೈರ್ಯಪಟ್ಟು ಹೆಜ್ಜೆ ಇಟ್ಟಲ್ಲಿ ಮುನ್ನಡೆಯು ಕಂಡುಬರಲಿದೆ. ಅಸಹನೆ, ಸ್ವಾರ್ಥ ದಿಂದ ಕಾರ್ಯ ಸಾಧನೆಯಾಗದು. ಆರ್ಥಿಕವಾಗಿ ಲೆಕ್ಕಚಾರ ಇಟ್ಟುಕೊಳ್ಳಿರಿ. ಗ್ರಹಗಳ ಪ್ರತಿಕೂಲತೆಯಿಂದ ಕೆಲಸವು ನಿಧಾನವಾಗಲಿದೆ.
ಮಕರ: ಉದ್ಯೋಗ ಸ್ಥಿತಿಯಲ್ಲಿ ಆರ್ಥಿಕವಾಗಿ ಲಾಭ ಕಂಡುಬರಲಿದೆ. ಮನೆಯಲ್ಲಿ ಪತ್ನಿಯ ಸಿಡುಕಿನಿಂದ ಬೇಸರವಾಗಲಿದೆ. ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ. ದೇಹದಂಡನೆ ಅಗತ್ಯವಿದೆ.
ಕುಂಭ:ಅವಿವಾಹಿತರ ವಿವಾಹ ಪ್ರಸ್ತಾವಗಳಲ್ಲಿ ಅಡಚಣೆಗಳು ಕಂಡುಬರುವುದು. ಹಿರಿಯರ ಕ್ಲೇಶದಿಂದ ದುಃಖವು ಕಂಡುಬರುವುದು. ದಾಯಾದಿಗಳ ವಿವಾದ ನ್ಯಾಯಾಲಯ ಮೆಟ್ಟಿಲನ್ನು ಹತ್ತಿಸೀತು. ಯಶಸ್ಸು ಸಿಗಲಿದೆ.
ಮೀನ: ವ್ಯಾಪಾರ ವಹಿವಾಟಿನಲ್ಲಿ ಅಧಿಕ ಲಾಭವಿದೆ. ಗೆಳೆಯರ ಹಾಗೂ ಬಂಧುಗಳ ಸೂಕ್ತ ಸಲಹೆಗಳು ನಿಮ್ಮ ಉಪಯೋಗಕ್ಕೆ ಬರಲಿದೆ. ಆದಾಯವೃದ್ಧಿಯ ಸೂಚನೆ ಕಂಡು ಬರುವುದು. ಕಂಕಣಬಲವು ಕೂಡಿ ಬಂದು ಸಂತಸವಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
MUST WATCH
ಹೊಸ ಸೇರ್ಪಡೆ
Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ
Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ
Gayatri Siddeshwar: “ರಾಹುಲ್ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’