ಎಲುಬಿಲ್ಲದ ನಾಲಿಗೆಯಲ್ಲಿ ಏನು ಬೇಕಾದ್ರು ಮಾತನಾಡಬಹುದು: ಕೈ ನಾಯಕರಿಗೆ ಸುಧಾಕರ್ ತಿರುಗೇಟು
Team Udayavani, Apr 22, 2021, 1:34 PM IST
ಮೈಸೂರು: ಕೋವಿಡ್ ಕೇವಲ ಒಬ್ಬ ವ್ಯಕ್ತಿ, ಒಂದು ದೇಶಕ್ಕೆ ಬಂದಿಲ್ಲ. ಇಡೀ ಮನುಕುಲಕ್ಕೆ ಈ ಕೋವಿಡ್ ಆವರಿಸಿದೆ. ಇಂತಹ ಸ್ಥಿತಿಯಲ್ಲಿ ಯಾರಿಗೂ ಪೂರ್ವಸಿದ್ದತೆ ಇರುವುದಿಲ್ಲ. ಆರೋಪ ಪ್ರತ್ಯಾರೋಪ ಎಲ್ಲರೂ ಮಾಡಬಹುದು. ಎಲುಬಿಲ್ಲದ ನಾಲಿಗೆಯಲ್ಲಿ ಏನು ಬೇಕಾದರೂ ಮಾತನಾಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಜಿಂದಾಲ್ ಕಂಪನಿ ಒಪ್ಪಿಕೊಂಡಿದೆ. ಬೆಂಗಳೂರಿಗೆ ಎಲ್ಲಾ ಆಸ್ಪತ್ರೆಗಳಿಗೂ ಜಂಬೂ ಸಿಲಿಂಡರ್ಗಳನ್ನೂ ಪೂರೈಕೆ ಮಾಡಲಾಗಿದೆ. ಲಿಕ್ವಿಡ್ ಆಕ್ಸಿಜನ್ ಕೂಡ ಒದಗಿಸಲಾಗಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲ. ಜಿಲ್ಲಾ ಕೇಂದ್ರಗಳಿಗೆ 1500 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಿದೆ. ಈ ಸಂಬಧ ಪಿಯೂಷ್ ಗೋಯಲ್ಗೆ ಸಿಎಂ ಪತ್ರ ಬರೆದಿದ್ದಾರೆ. ನಾನೂ ಕೂಡ ಅಗತ್ಯ ಆಕ್ಸಿಜನ್ ಪೂರೈಕೆಗೆ ಪತ್ರ ಬರೆದಿದ್ದೇನೆ ಎಂದರು.
ಇದನ್ನೂ ಓದಿ:ಕೋವಿಡ್ ಹೆಚ್ಚಳ: ಕೋಲಾರದಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು
ರೆಮಿಡಿಸಿವಿರ್ ಬಗ್ಗೆ ಜನರಲ್ಲಿ ತಪ್ಪುಗ್ರಹಿಕೆ ಇದೆ. ಈ ಬಗ್ಗೆ ವೈಜ್ಞಾನಿಕವಾಗಿ ತಿಳಿಹೇಳುವ ಜವಾಬ್ದಾರಿ ಸರ್ಕಾರಕ್ಕಿದೆ. ಎಲ್ಲಾ ರಾಜ್ಯಗಳಲ್ಲೂ ರೆಮಿಡಿಸಿವಿರ್ ಕೊರತೆಯೂ ಇದೆ, ಬೇಡಿಕೆಯೂ ಇದೆ. ರೆಮಿಡಿಸಿವುರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ. ಜನಸಾಮಾನ್ಯರಲ್ಲಿ ರೆಮಿಡಿಸಿವಿರ್ ತೆಗೊಂಡರೆ ಕೋವಿಡ್ ಹೋಗುತ್ತದೆ ಎಂಬ ಭಾವನೆ ಬಂದಿದೆ ಎಂದರು.
ಲಾಕ್ಡೌನ್ ಕಾರಣ ಕಾರ್ಖಾನೆಗಳು ತಯಾರಿಕೆ ನಿಲ್ಲಿಸಿದ್ದವು. ಬದಲಾಗಿ ಈ ಲಸಿಕೆಗೆ ಬೇಡಿಕೆ ಇರಲಿಲ್ಲ. ಈಗ ಹೆಚ್ಚಾದ ಕಾರಣ ಸ್ವಾಭಾವಿಕವಾಗಿ ಪ್ರಚಾರ ಹೆಚ್ಚಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ