ಸಣ್ಣಪುಟ್ಟ ವ್ಯಾಪಾರ, ಉದ್ಯಮಕ್ಕೆ ಕೊರೊನಾ ಕಂಟಕ!


Team Udayavani, Apr 26, 2021, 7:29 PM IST

Corona Context

ಕುಣಿಗಲ್: ಕೋವಿಡ್ ಮಾರ್ಗಸೂಚಿ ಹಾಗೂವೀಕೆಂಡ್‌ ಕರ್ಫ್ಯೂ ತಾಲೂಕಿನ ಜನ ಸಾಮಾನ್ಯರಮೇಲೆ ದುಷ್ಟಪರಿಣಾಮ ಬೀರಿದೆ. ದಿನನಿತ್ಯದುಡಿದು ತಿನ್ನುವವರ ಬದುಕು ತೀವ್ರ ಸಂಕಷ್ಟಕ್ಕೆಸಿಲುಕಿದ್ದು, ಅವರ ನೆರವಿಗೆ ಸರ್ಕಾರ,ಜನಪ್ರತಿನಿಧಿಗಳು, ಪ್ರಗತಿ ಪರ ಸಂಘಟನೆಗಳುಬಾರದಿರುವುದು ದುರಾದೃಷ್ಟಕರ ಸಂಗತಿ.

ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರಹೊರಡಿಸಿದ ಕೊರೊನಾ ಮಾರ್ಗಸೂಚಿ, ಕರ್ಫ್ಯೂಜಾರಿಯಿಂದ ಬೀದಿ ಬದಿ ವ್ಯಾಪಾರಿಗಳ ಬದುಕುಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಕೊರೊನಾ ಅಬ್ಬರ,ಮತ್ತೂಂದೆಡೆ ವ್ಯಾಪಾರ ಇಲ್ಲ.

ಸಂಕಷ್ಟಗಳನ್ನುಎದರಿಸುತ್ತಾ ದಿನದೂಡುವಂತಹ ಪರಿಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದಾಗಿದೆ. ಕೊರೊನಾ ಅಲೆಗೆ ಬೆಚ್ಚಿಬಿದ್ದಿರುವ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಕರ್ಫ್ಯೂ ಹೀಗೆ ಮುಂದುವರಿದರೆ ಮುಂದೇನುಎಂಬ ಆತಂಕದಲ್ಲಿ ದಿನದ ದುಡಿಮೆಯನ್ನೇ ನಂಬಿಜೀವನ ನಡೆಸುವ ಜನರನ್ನು ಕಾಡುತ್ತಿದೆ.

ಕಳೆದ ವರ್ಷ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ಈಗಾಗಲೇ ಹೈರಾಣರಾಗಿರುವಜನತೆಗೆ ಇನ್ನೇನು ಕೊರೊನಾ ಹೋಯಿತ್ತು ಎಂದುನಿಟ್ಟುಸಿರುವ ಬಿಡುವ ಮುನ್ನವೇ ಕೋವಿಡ್‌ 2ನೇಅಲೆ ವಕ್ಕರಿಸಿ ನಾಗರಿಕರನ್ನು ಮತ್ತೆ ಭಯಭೀತಿಗೊಳಿಸಿದ್ದು, ಹಂತ-ಹಂತವಾಗಿ ಚೇತರಿಕೆ ಕಂಡರೂ,ಸಂಪೂರ್ಣ ಸುಧಾರಿಸಿಕೊಳ್ಳುವ ಮುನ್ನವೇ 2ನೇಅಲೆ ಶಾಕ್‌ ನೀಡಿದೆ.

ಅದರಲ್ಲೂ ಬೀದಿ ಬದಿವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟೀಅಂಗಡಿ, ಹೋಟೆಲ್‌ ಹಾಗೂ ಗ್ಯಾರೇಜ್‌,ಶೋರೂಂನಲ್ಲಿ ಕೆಲಸ ಮಾಡುವ ಉದ್ಯೋಗಿಗಳುಮತ್ತು ಸಣ್ಣಪುಟ್ಟ ವ್ಯಾಪಾರ, ಉದ್ಯಮ ಕೊರೊನಾಕೆಂಗಣ್ಣಿಗೆ ಗುರಿಯಾಗಿವೆ.

ನೆಲಕಚ್ಚಿದ ವ್ಯಾಪಾರ ವಹಿವಾಟು: ಮೊದಲೇಸಾರಿಗೆ ಮುಷ್ಕರದ ಬಿಸಿ ವ್ಯಾಪಾರಿಗಳ ಮೇಲೆಬಿದ್ದಿದ್ದು, ಜನರು ಗ್ರಾಮೀಣ ಪ್ರದೇಶದಿಂದಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಮಧ್ಯೆ ಕೊರೊನಾ ಉಲ್ಬಣದಿಂದ ಜನರು ಪಟ್ಟಣಕ್ಕೆಬರುತ್ತಿಲ್ಲ. ಹಾಗಾಗಿ ವ್ಯಾಪಾರ ವಹಿವಾಟುಸಂಪೂರ್ಣ ನೆಲಕಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.ಕಳೆದ ವರ್ಷ ಕೊರೊನಾ, ಲಾಕ್‌ಡೌನ್‌ಗೆತುತ್ತಾದ ಜನರಿಗೆ ಸಂಸದ ಡಿ.ಕೆ.ಸುರೇಶ್‌, ಶಾಸಕಡಾ.ರಂಗನಾಥ್‌ ಡಿ.ಕೆ.ಚಾರಿಟಬಲ್‌ ಟ್ರಸ್ಟ್‌ನಿಂದಧವಸ, ಧಾನ್ಯ, ಹಣ್ಣು, ತರಕಾರಿ, ವಿಟಮಿನ್‌ಮಾತ್ರೆಗಳು ನೀಡಿದ್ದರು.

ಅಲ್ಲದೆ ಮಾಜಿ ಸಚಿವಡಿ.ನಾಗರಾಜಯ್ಯ ಹಾಗೂ ಬಿಜೆಪಿಯಕಾರ್ಯಕರ್ತರು ಸಂತ್ರಸ್ತರಿಗೆ ನೆರವಾದರೂ ಇತ್ತಾಸರ್ಕಾರ ಕಾರ್ಮಿಕ ಇಲಾಖೆಯಿಂದ ದಿನಸಿ ಕಿಟ್‌ವಿತರಿಸಿತ್ತು. ತಾಲೂಕು ಆಡಳಿತ ನಿರಾಶ್ರಿತ ಕೇಂದ್ರಪ್ರಾರಂಭಿಸಿ ಸಂತ್ರಸ್ತರ ನೆರವಿಗೆ ಮುಂದಾಗಿತ್ತು.

ಆದರೆ, ಕಳೆದ ಬಾರಿಗಿಂತ ಈಗ ಕೊರೊನಾಎರಡನೇ ಅಲೆ ವ್ಯಾಪಾಕವಾಗಿ ಹರಡಿದ್ದು,ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕಡಾ.ಎಚ್‌.ಡಿ.ರಂಗನಾಥ್‌ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವಕಾರ್ಯದಲ್ಲಿ ತೋಡಗಿರುವುದು ಜನರ ಪ್ರಶಂಸೆಗೆಕಾರಣವಾಗಿದೆ.

ನೆರವಿಗೆ ಧಾವಿಸಲಿ: ಕಳೆದ ಬಾರಿ ಕೊರೊನಾಹಾಗೂ ಲಾಕ್‌ಡೌನ್‌ ವೇಳೆ ಸಂತ್ರಸ್ತರಿಗೆ ಸಹಾಯಮಾಡಲು ತಾ ಮುಂದು, ನಾ ಮುಂದು ಎಂದುರಾಜಕೀಯ ಪಕ್ಷಗಳು, ವಿವಿಧ ಸಂಘಟನೆ ಸಹಾಯಹಸ್ತಕ್ಕೆ ಮುಂದಾಗಿದ್ದವು. ಆದರೆ, ಈಗ ಯಾರುಮುಂದೆ ಬಾರದಿರುವುದು ದುರಾದೃಷ್ಟಕರ. ಈಗಾಲಾದರೂ ನೊಂದ ಜನರ ನೆರವಿಗೆ ಸರ್ಕಾರ,ಜನಪ್ರತಿನಿಧಿಗಳು, ಸಂಘಟನೆಗಳು ಮುಂದಾಗಲುಮನಸ್ಸು ಮಾಡಿ ಮಾನವೀಯತೆಮೆರೆಯಬೇಕಾಗಿದೆ.

ಕೆ.ಎನ್‌.ಲೋಕೇಶ್

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.