ಪ್ಲೀಸ್ ನಮ್ಮ ಜನರ ಹಸಿವು ನೀಗಿಸಿ : ಭಾವುಕರಾದ ನಟಿ ಶಿಲ್ಪಾ ಶೆಟ್ಟಿ
Team Udayavani, Apr 27, 2021, 8:41 PM IST
ಮುಂಬೈ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಜನರು ಎದುರಿಸುತ್ತಿರುವ ಕಷ್ಟದ ಕುರಿತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾವುಕರಾಗಿ ಮಾತನಾಡಿದ್ದಾರೆ.
ಸೋಮವಾರ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಜನರ ಕಷ್ಟವನ್ನು ನೆನೆದು ದುಃಖ ಪಟ್ಟಿದ್ದಾರೆ.
ಕೋವಿಡ್ ಪರಿಸ್ಥಿತಿ ಬಿಡಿಸಿ ಹೇಳಲಾರದಷ್ಟು ಕಠೋರವಾಗಿದೆ. ಪುಟ್ಟ ಮಕ್ಕಳು ತಂದೆ-ತಾಯಿ ಕಳೆದುಕೊಂಡು ಅನಾಥವಾಗುತ್ತಿರುವ ಹಾಗೂ ಅದೆಷ್ಟೊ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿರುವ ದೃಶ್ಯಗಳನ್ನು ನೋಡಲು ಆಗುತ್ತಿಲ್ಲ. ಕೊನೆಪಕ್ಷ ನಮ್ಮ ಪ್ರೀತಿ ಪಾತ್ರರ ಅಂತಿಮ ಸಂಸ್ಕಾರಕ್ಕೆ ನಾವು ಹೋಗದಷ್ಟು ಕೆಟ್ಟ ಪರಿಸ್ಥಿತಿ ಬಂದೊದಗಿದೆ ಎಂದು ಶಿಲ್ಪಾ ಶೆಟ್ಟಿ ನೋವನಿಂದ ಹೇಳಿಕೊಂಡಿದ್ದಾರೆ.
ನಾವು ಕೋವಿಡ್ ಕಾರಣವಾಗಿ ಮಾತ್ರ ನಮ್ಮವರನ್ನು ಕಳೆದುಕೊಳ್ಳುತ್ತಿಲ್ಲ. ಹಸಿವಿನಿಂದ ಹಾಗೂ ಆಕ್ಸಿಜನ್ ಕೊರತೆಯಿಂದಲೂ ನಮ್ಮ ಜನ ಸಾವಿಗೆ ಶರಣಾಗುತ್ತಿದ್ದಾರೆ ಎಂದು ಹೇಳುತ್ತಿರುವಾಗ ಶಿಲ್ಪಾ ಶೆಟ್ಟಿಯವರಲ್ಲಿ ದುಃಖ ಉಮ್ಮಳಿಸಿ ಬರುತ್ತಿತ್ತು. ಮಾತನಾಡಲು ಅವರು ಕಷ್ಟ ಪಡುತ್ತಿದ್ದರು.
ದಯವಿಟ್ಟು ಸಹಾಯ ಮಾಡಿ :
ಕೋವಿಡ್ ಪಿಡುಗು ನಮ್ಮ ಜನರನ್ನು ಹಿಂಸಿಸುತ್ತಿದೆ. ಹಸಿವಿನಿಂದ ಸಾಯುವಂತೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಕೈಲಾದ ಸಹಾಯ ಮಾಡಲೇಬೇಕು. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿ, ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿ ಎಂದು ಕೇಳಿಕೊಂಡಿರುವ ಶಿಲ್ಪಾ, ನಾನು ಕೂಡ ನನ್ನ ಚಾರಿಟೇಬಲ್ ಟ್ರಸ್ಟ್ ಮೂಲಕ ಆಹಾರದ ವ್ಯವಸ್ಥೆ ಮಾಡುತ್ತಿದ್ದೇನೆ. ಇದು ನನ್ನ ಅಳಿಲು ಸೇವೆ ಎಂದಿದ್ದಾರೆ.
ಚಿತ್ರರಂಗದ ತನ್ನ ಸ್ನೇಹಿತರಿಗೂ ಕರೆ ನೀಡಿರುವ ಶಿಲ್ಪಾ ಶೆಟ್ಟಿ, ಎಲ್ಲರೂ ಮುಂದೆ ಬಂದು ಸಹಾಯ ಮಾಡಿ. ಈಗಾಗಲೇ ಸಾಕಷ್ಟು ಜನರು ನಮ್ಮ ಜನರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಜೊತೆ ನೀವು ಕೈ ಜೋಡಿಸಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!