ನಮ್ಮ ಕಣ್ಣಿಗೆ ಕಂಡ ನಮ್ಮ ಸತ್ಯ


Team Udayavani, Apr 28, 2021, 5:00 AM IST

ನಮ್ಮ ಕಣ್ಣಿಗೆ ಕಂಡ ನಮ್ಮ ಸತ್ಯ

ಸತ್ಯ ಮತ್ತು ಸುಳ್ಳಿಗೆ ಏನು ಅಂತರ – ಒಬ್ಬ ಸಂತನನ್ನು ಯಾರೋ ಕೇಳಿದರಂತೆ.
“ನಾಲ್ಕು ಇಂಚುಗಳು’ ಎಂದು ಉತ್ತರಿಸಿದ ಆತ. ಕೇಳಿದವನಿಗೆ ಗೊಂದಲವೂ ಆಶ್ಚರ್ಯವೂ ಆಯಿತು. “ಹಾಗೆಂದರೇನು’ ಎಂದು ಕೇಳಿದನಾತ.

“ಕಿವಿ ಮತ್ತು ಕಣ್ಣುಗಳ ನಡುವೆ ನಾಲ್ಕಿಂಚು ಅಂತರ ಇದೆಯಲ್ಲ! ಸತ್ಯ ಮತ್ತು ಸುಳ್ಳಿಗೂ ಅಷ್ಟೇ ದೂರ. ಕಿವಿಯಿಂದ ಕೇಳುವಂಥದ್ದು ಸುಳ್ಳು. ಕಣ್ಣಿ ನಿಂದ ಕಂಡದ್ದು ಮಾತ್ರ ಸತ್ಯ’ ಎಂದು ಸಂತ ವಿವರಿಸಿದ.

ನಮ್ಮ ಅನುಭವಕ್ಕೆ ಬಂದದ್ದು, ನಮ್ಮ ಕಣ್ಣಿಗೆ ಕಂಡದ್ದು ಮಾತ್ರ ನಿಜ. ನಾವು ನಿಜವನ್ನು ಕಂಡು ಅದನ್ನು ಇನ್ನೊಬ್ಬರಿಗೆ ಹೇಳಿದರೆ ಆಗ ಅದು ಕೂಡ ಸುಳ್ಳಾಗಬಲ್ಲುದು. ಯಾಕೆಂದರೆ ಅದು ಕಂಡದ್ದು ನಮಗೆ, ನಾವು ಯಾರಿಗೆ ಹೇಳಿದ್ದೇವೋ ಅವರಿಗಲ್ಲ. ಯಾಕೆಂದರೆ ಅವರಿಗೆ ಅದು ಕಿವಿಯ ಮೂಲಕ ತಿಳಿದದ್ದು. ತಪ್ಪಾದ ದಾರಿಯಲ್ಲಿ ಒಳಬರುವ ಸತ್ಯವೂ ಸುಳ್ಳಾಗಬಲ್ಲುದು. ಸತ್ಯ ಎದುರು ಬಾಗಿಲಿನಿಂದ, ಕಣ್ಣುಗಳ ಮೂಲಕ ಒಳಬರಬೇಕು. ಕಣ್ಣಿಗೆ ಕಾಣಿ ಸುವ ಕಾಣ್ಕೆಯಷ್ಟೇ ನಿಜ.
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಒಬ್ಬನಿದ್ದನಂತೆ. ಸರಳ, ಮುಗ್ಧ ಹಳ್ಳಿಗ ಅವನು. ಆತ ಎಂದೂ ಸುಳ್ಳು ಹೇಳುತ್ತಿರಲಿಲ್ಲ. ಈ ಸತ್ಯವಂತನ ಬಗ್ಗೆ ನಾಲ್ಕೂರಿನವರಿಗೆ ಗೊತ್ತಿತ್ತು – ಎಂದೂ ಸುಳ್ಳಾಡದವನು ಎಂದು.

ಆ ದೇಶದ ಅರಸನ ಕಿವಿಗೂ ಸತ್ಯವಂತನ ವಿಚಾರ ಬಿತ್ತು. ಆತ ತನ್ನ ಸೇವಕರನ್ನು ಕಳುಹಿಸಿ ಸತ್ಯವಂತನನ್ನು ಕರೆಯಿಸಿದ.
“ಹೇಳು, ನೀನು ಯಾವಾಗಲೂ ಸತ್ಯವನ್ನೇ ಆಡುವವನಂತೆ, ನಿಜವೇ?’ ಎಂದು ದೊರೆ ಪ್ರಶ್ನಿಸಿದ. “ಹೌದು’ ಎಂದು ಉತ್ತರಿಸಿದ ಹಳ್ಳಿಗ. “ಮುಂದೆಯೂ ಇದನ್ನೇ ಮುಂದು ವರಿಸುವವನೇ?’ -ದೊರೆಯ ಪ್ರಶ್ನೆ. ಹಳ್ಳಿಗ, “ನಿಜ’ ಎಂದ.

“ಜಾಗ್ರತೆಯಾಗಿರು. ಸುಳ್ಳು ಬಹಳ ಕುಶಾಗ್ರಮತಿ. ನಾಲಗೆಯ ಎಡೆಯಿಂದ ಹೇಗಾದರೂ ನುಸುಳೀತು’ ಎಂದು ಹೇಳಿ ಅರಸ ಅವನನ್ನು ಬೀಳ್ಕೊಟ್ಟ.

ಸ್ವಲ್ಪ ಸಮಯದ ಬಳಿಕ ದೊರೆ ಮತ್ತೆ ಹಳ್ಳಿಗನನ್ನು ರಾಜಧಾನಿಗೆ ಕರೆಯಿಸಿದ. ಸತ್ಯವಂತ ಅಲ್ಲಿಗೆ ತಲುಪುವಷ್ಟರಲ್ಲಿ ದೊರೆ ಬೇಟೆಗೆ ತೆರಳಲು ಸಿದ್ಧನಾಗಿ ನಿಂತಿದ್ದ. ಅವನ ಒಂದು ಕಾಲು ಕುದುರೆಯ ರಿಕಾಪಿನ ಮೇಲಿತ್ತು, ಕೈಗಳಲ್ಲಿ ಕಡಿವಾಣ ಇತ್ತು.
ದೊರೆ ಸತ್ಯವಂತನಿಗೆ ಆದೇಶಿಸಿದ, “ರಾಣೀ ವಾಸಕ್ಕೆ ಹೋಗಿ ದೊರೆ ಬೇಟೆಗೆ ಹೋಗಿದ್ದಾರೆ, ಮಧ್ಯಾಹ್ನದ ಭೋಜನಕ್ಕೆ ಅಲ್ಲಿರುತ್ತಾರೆ, ಉತ್ತಮ ವಾದ ಭೋಜನವನ್ನು ಸಿದ್ಧಪಡಿಸ ಬೇಕಂತೆ ಎಂದು ಹೇಳು’.

ಸತ್ಯವಂತ ನಮಸ್ಕರಿಸಿ ಹೊರಟು ಹೋದ. ಆತ ಹೋದ ಬಳಿಕ ದೊರೆ ನಗುತ್ತ ತನ್ನ ಸಂಗಡಿಗರಿಗೆ ಹೇಳಿದ, “ನಾನೀ ಬೇಟೆಗೆ ಹೋಗುವುದಿಲ್ಲ. ಸತ್ಯವಂತ ರಾಣಿಗೆ ಹೇಳಿದ್ದು ಸುಳ್ಳಾಗುತ್ತದೆ’.

ಸತ್ಯವಂತ ರಾಣೀವಾಸಕ್ಕೆ ಹೋಗಿ ಬಿನ್ನವಿಸಿಕೊಂಡ, “ದೊರೆ ಮಧ್ಯಾಹ್ನದ ಭೋಜನಕ್ಕೆ ಬರಬಹುದು, ಬಾರದಿ ರಲೂ ಬಹುದು; ನೀವು ಉತ್ತಮವಾದ ಭೋಜನವನ್ನು ಸಿದ್ಧಪಡಿಸಬಹುದು, ಸಿದ್ಧಪಡಿಸದೆಯೂ ಇರಬಹುದು’.

ರಾಣಿಗೆ ಗೊಂದಲವಾಯಿತು, ಆಕೆ, “ದೊರೆ ಬರುತ್ತಾರೆಯೇ ಇಲ್ಲವೇ ಎಂಬುದನ್ನು ಹೇಳು’ ಎಂದಳು.

“ನಾನು ಅಲ್ಲಿಂದ ಇತ್ತ ಹೊರಟ ಬಳಿಕ ದೊರೆ ಕುದುರೆಯ ರಿಕಾಪಿನ ಮೇಲಿ ರಿಸಿದ ಬಲಗಾಲನ್ನು ನೆಲಕ್ಕಿಳಿಸುತ್ತಾರೆಯೇ ಅಥವಾ ನೆಲದಲ್ಲಿದ್ದ ಎಡಗಾಲನ್ನು ಇನ್ನೊಂದು ರಿಕಾಪಿನ ಮೇಲಿರಿಸು ತ್ತಾರೆಯೇ ಎಂಬುದು ನನಗೆ ಗೊತ್ತಿಲ್ಲ’ ಎಂಬ ಜಾಣ ಉತ್ತರ ಕೊಟ್ಟ ಸತ್ಯವಂತ.

ಮರುದಿನ ಮಧ್ಯಾಹ್ನ ದೊರೆ ರಾಣೀವಾಸವನ್ನು ಪ್ರವೇಶಿಸಿದ, “ಸತ್ಯ ವಂತ ಸುಳ್ಳಾಡಿದ ಹಾಗಾಯಿತಲ್ಲ’ ಎಂದು ಕುಚೋದ್ಯದ ನಗು ನಕ್ಕ. ರಾಣಿ ಸತ್ಯವಂತ ಏನು ಹೇಳಿದ್ದ ಎಂಬುದನ್ನು ದೊರೆಗೆ ತಿಳಿಸಿದಳು.
(ಸಾರ ಸಂಗ್ರಹ)

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.