ಸೈಕಲ್ ಕದ್ದ ಹುಡುಗನಿಗೆ ಹೊಸ ಸೈಕಲನ್ನೇ ಉಡುಗೊರೆ ರೂಪದಲ್ಲಿ ಕೊಟ್ಟ ಪೊಲೀಸ್ ಅಧಿಕಾರಿ.!


Team Udayavani, Apr 29, 2021, 9:00 AM IST

Untitled-1

ತಪ್ಪುಗಳನ್ನು ಮಾಡಿದರೆ ಹುಡುಕಿಕೊಂಡು ಶಿಕ್ಷೆಯನ್ನು ನೀಡುವುದು ಪೊಲೀಸರ ಕರ್ತವ್ಯ. ಇಂಥ ಪೊಲೀಸರನ್ನು ನಾವು ಕರುಣೆಯಿಲ್ಲದವರು,ತುಂಬಾ ಜೋರು ಅಂಥ ಅಂದುಕೊಳ್ಳುತ್ತೇವೆ.  ಆದರೆ ಇದನ್ನು ಸುಳ್ಳಾಗಿಸಿ ಮಾನವೀಯತೆ ಸಾರಿದ ಎಷ್ಟೋ ಪೊಲೀಸರು ನಮ್ಮ  ಮುಂದೆ ಇದ್ದರೂ, ಕಣ್ಣ ಮುಂದೆ ಮಾತ್ರ ಅಪರೂಪಕ್ಕೆ ಕಾಣುತ್ತಾರೆ.

ಕೇರಳದ ಶೋಲಾಯೂರು ಪ್ರದೇಶದಲ್ಲಿ ಈ ಘಟನೆ ಲತೀಫ್ ಅತ್ತಪಾಡಿ ಎನ್ನುವ ವ್ಯಾಪಾರಿ ಬರೆದ ಫೇಸ್‌ಬುಕ್‌ ಫೋಸ್ಟ್ ನಿಂದ ವೈರಲ್ ಆಗಿದೆ.

ಬಾಲಕನೊಬ್ಬನ ಹೊಸ ಸೈಕಲ್ ಕಳವು ಆಗಿದೆ‌. ಬಾಲಕನ ಅಪ್ಪ ಅಮ್ಮ ಎಲ್ಲಿ ಎಂದು ಹುಡುಕಿಕೊಂಡು ಹೋಗಿ ಕೊನೆಗೆ ಸೈಕಲ್ ಸಿಕ್ಕದಿದ್ದಾಗ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಬಹುಬೇಗನೆ ಪೊಲೀಸರು ಕಳವುವಾದ ಸೈಕಲ್ ನ್ನು ಪತ್ತೆ ಹಚ್ಚುತ್ತಾರೆ.

ಮನೆಯ ಪಕ್ಕದ ಹುಡುಗನೇ ಕಳ್ಳ.! :

ಬಾಲಕನ ಮನೆಯವರು ದಾಖಲಿಸಿದ ಪ್ರಕರಣದ ಜಾಡು ಹಿಡಿದು ಸಾಗಿದ ಪೊಲೀಸರು, ತನಿಖೆ ನಡೆಸಿದಾಗ ಬಾಲಕನ‌ ಮನೆಯ ಪಕ್ಕದ ಮನೆಯಲ್ಲಿ ಕದ್ದ ಸೈಕಲ್ ಪಾರ್ಕ್ ಮಾಡಿರುತ್ತಾರೆ. ತಕ್ಷಣ ಇದನ್ನು ವಿಚಾರಿಸಿದ ಪೊಲೀಸರು, ಸೈಕಲ್ ನ್ನು ಕಳವು ಮಾಡಿದ ಮೂರನೇ ತರಗತಿಯ ಹುಡುಗನನ್ನು ವಿಚಾರಣೆ ‌ನಡೆಸುತ್ತಾರೆ.

ಪೊಲೀಸರ ಮಾತಿಗೆ ಉತ್ತರಿಸಿದ ಹುಡುಗ ತನಗೆ ಸೈಕಲ್ ಅಂದರೆ ತುಂಬಾ ಇಷ್ಟ, ಸೈಕಲ್ ನಲ್ಲಿ ತಿರುಗಾಟ ನಡೆಸುವುದು ಅಂದರೆ ಪಂಚಪ್ರಾಣ ಅದಕ್ಕಾಗಿ, ಹೊಸ ಸೈಕಲ್ ನ ಪಯಣದ ಅನುಭವ ಪಡೆಯಲು ಸೈಕಲ್ ನಲ್ಲಿ ಸುತ್ತಾಟ ನಡೆಸಿ‌ ಮನೆಯಲ್ಲಿ ನಿಲ್ಲಿಸಿದೆ ಎಂದು ಹೇಳಿದ್ದಾನೆ.

ಪೊಲೀಸರು ಸೈಕಲ್ ಕದ್ದ ಹುಡುಗನನ್ನು ವಿಚಾರಣೆ ನಡೆಸಿ ಹಾಗೆಯೇ ಬಿಡಲಿಲ್ಲ. ಮುಖ್ಯ ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ ಎಂಬುವವರು ಹುಡುಗನ ಮಾತು ಕೇಳಿ ಈ ಘಟನೆಯಿಂದ ತುಂಬಾ ಭಾವುಕರಾಗುತ್ತಾರೆ. ಸೈಕಲ್ ನ್ನು ಪಂಚಪ್ರಾಣ ಅಂಥ ಅಂದುಕೊಂಡಿದ್ದ ಹುಡುಗನಿಗೆ ಪೊಲೀಸ್ ಅಧಿಕಾರಿ ಒಂದು ಉಡುಗೊರೆ ಕೊಡಲು ನಿರ್ಧರಿಸುತ್ತಾರೆ. ಅದುವೇ ಹುಡುಗನ ಮೆಚ್ಚಿನ ಸೈಕಲ್.!

ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ. ಸೈಕಲ್ ಕದ್ದ ಹುಡುಗನಿಗೆ ಲತೀಫ್ ಅವರ ಸೈಕಲ್ ಅಂಗಡಿಯಿಂದ ಸೈಕಲ್ ಕೊಂಡು ನೀಡುತ್ತಾರೆ. ಈ ಎಲ್ಲಾ ಘಟನೆಯನ್ನು ಕೇಳಿದ ಲತೀಫ್ ತಮ್ಮ ಬಾಲ್ಯದ ದಿನಗಳನ್ನು ‌ಮೆಲುಕು ಹಾಕುತ್ತಾ, ಪೊಲೀಸ್ ಅಧಿಕಾರಿಯ ಹೃದಯವಂತಿಕೆಯನ್ನು ಫೇಸ್‌ಬುಕ್‌ ನಲ್ಲಿ ಬರೆಯುತ್ತಾರೆ.

ಲತೀಫ್ ಅವರ ಈ ಫೇಸ್‌ಬುಕ್‌ ಪೋಸ್ಟ್ ಕೆಲವೇ ದಿನಗಳಲ್ಲಿ 13 ಸಾವಿರಕ್ಕೂ ಹೆಚ್ಚು ಶೇರ್ ಆಗುತ್ತದೆ.‌ ಹುಡುಗನ ಖುಷಿಗೆ ಸೈಕಲ್ ಕೊಟ್ಟ‌ ಪೊಲೀಸ್ ಅಧಿಕಾರಿಯ ಮಾನವೀಯತೆಯ ಮನಸ್ಸಿಗೆ ಎಲ್ಲೆಡೆಯಿಂದ  ಪ್ರಶಂಸೆ ವ್ಯಕ್ತವಾಗುತ್ತಿದೆ.

 

– ಸುಹಾನ್ ಶೇಕ್

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.