ಎರಡಿದ್ದ ಎಸ್‌ಟಿ ಮೀಸಲು ಈ ಬಾರಿ 3ಕ್ಕೇರಿಕೆ

40 ಸ್ಥಾನಗಳಲ್ಲಿ 20 ಮಹಿಳೆಯರಿಗೆ ಮೀಸಲು ­!110 ತಾಪಂನಲ್ಲೂ 58 ಸ್ಥಾನ ಮಹಿಳೆಯರಿಗೆ

Team Udayavani, May 2, 2021, 7:04 PM IST

gjyhfyrt

ವರದಿ : ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸಲು ರಾಜ್ಯ ಚುನಾವಣೆ ಆಯೋಗ, ಮೀಸಲಾತಿ ಪ್ರಮಾಣ ನಿಗದಿಯ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನಗಳು ಈ ಬಾರಿ 3ಕ್ಕೆ ಏರಿಕೆಯಾಗಲಿವೆ.

ಹೌದು. ಕಳೆದ ಬಾರಿ 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. 36 ಸದಸ್ಯ ಬಲದ ಜಿಪಂನಲ್ಲಿ ಎಸ್‌ಟಿ ವರ್ಗಕ್ಕೆ ತಲಾ ಒಂದು ಮಹಿಳೆ ಮತ್ತು ಒಂದು ಪುರುಷ ಸ್ಥಾನಕ್ಕೆ ಮಾತ್ರ ಅವಕಾಶವಿತ್ತು. ಈ ಬಾರಿ ಎಸ್‌ಟಿ ವರ್ಗಕ್ಕೆ ಮೂರು ಸ್ಥಾನ ನೀಡಿದ್ದು, ಅದರಲ್ಲಿ 2 ಮಹಿಳೆಯರಿಗೆ, 1 ಪುರುಷರಿಗೆ ಮೀಸಲಾಗಲಿದೆ. ಪುರುಷ ಸದಸ್ಯ ಸ್ಥಾನ ಬಾಗಲಕೋಟೆ ತಾಲೂಕಿಗೆ ದೊರೆಯುವ ಸಾಧ್ಯತೆ ಇದೆ.

ಶೇ. 50 ಮಹಿಳೆಯರಿಗೆ ಮೀಸಲು:

ಜಿಪಂನ ಒಟ್ಟು 40 ಸ್ಥಾನಗಳಲ್ಲಿ 20 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಅದರಲ್ಲಿ ಎಸ್‌ಸಿ ವರ್ಗಕ್ಕೆ 4, ಎಸ್‌ಟಿ ವರ್ಗಕ್ಕೆ 2, ಹಿಂದುಳಿದ ಅ ವರ್ಗಕ್ಕೆ 6 ಹಾಗೂ ಹಿಂದುಳಿದ ವರ್ಗ ಬಕ್ಕೆ 1, ಸಾಮಾನ್ಯ ವರ್ಗಕ್ಕೆ 9 ಸೇರಿ ಒಟ್ಟು 20 ಸ್ಥಾನಗಳಲ್ಲಿ ಮಹಿಳೆಯರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಈ 20 ಸ್ಥಾನಗಳಲ್ಲಿ ಮಹಿಳೆಯರೇ ಸ್ಪರ್ಧಿಸಬೇಕು. ಅಲ್ಲದೇ ಜಿಪಂನ 40 ಸ್ಥಾನಗಳಲ್ಲಿ ಎಸ್‌ಸಿ (ಮಹಿಳೆ-4), ಎಸ್‌ಟಿ-3 (ಮಹಿಳೆ-2), ಹಿಂದುಳಿದ ಅ ವರ್ಗ (ಮಹಿಳೆ-6), ಹಿಂದುಳಿದ ಬ ವರ್ಗ 2 (1), ಸಾಮಾನ್ಯ 20 (ಮಹಿಳೆ) ವರ್ಗಕ್ಕೆ ಮೀಸಲಿಡಲಾಗುತ್ತಿದೆ.

ತಾಪಂನಲ್ಲೂ ಮಹಿಳೆಯರ ಮೇಲುಗೈ:

ಜಿಲ್ಲೆಯ 9 ತಾಪಂ ವ್ಯಾಪ್ತಿಯಲ್ಲಿ ಒಟ್ಟು 110 ಕ್ಷೇತ್ರಗಳಿದ್ದು, ಇದರಲ್ಲಿ 58 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಹೀಗಾಗಿ ಜಿಪಂನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಸಮಬಲವಾಗಲಿದ್ದರೆ, ತಾಪಂಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಲಿದೆ. ಬಾಗಲಕೋಟೆ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಅದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ವರ್ಗ ಅ-2 (ಮಹಿಳೆ-1), ಸಾಮಾನ್ಯ-7 (3) ಸ್ಥಾನ ಮೀಸಲಾಗಲಿವೆ. ತಾಪಂಗೆ ಹಿಂದುಳಿದ ವರ್ಗ ಬ ವರ್ಗಕ್ಕೆ ಒಂದೂ ಸ್ಥಾನ ಮೀಸಲಾಗಿಲ್ಲ. ಹುನಗುಂದ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಮಹಿಳೆಯರಿಗೆ ಮೀಸಲು ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ ಒಂದು ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಲಿವೆ. ಇನ್ನು ಸಾಮಾನ್ಯ-5 (ಮಹಿಳೆ-2) ನಿಗದಿಯಾಗಲಿವೆ. ಬಾದಾಮಿ ತಾಪಂನಲ್ಲಿ ಒಟ್ಟು 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮೀಸಲಾಗಲಿವೆ. ಎಸ್‌ಸಿ-2 (ಮಹಿಳೆ-1), ಎಸ್‌ಟಿ-2 (ಮಹಿಳೆ-1), ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-4). ಇಳಕಲ್ಲ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ 1 ಸ್ಥಾನಗಳಿದ್ದು ಅವೂ ಮಹಿಳೆಯರಿಗೆ ಮೀಸಲಾಗಲಿವೆ.

ಅಲ್ಲದೇ ಸಾಮಾನ್ಯ-5(ಮಹಿಳೆ-2). ಗುಳೇದಗುಡ್ಡ ಹೊಸ ತಾಲೂಕಿಗೆ 6 ಮಹಿಳೆಯರು: ಗುಳೇದಗುಡ್ಡ ಹೊಸ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಲಿದ್ದು ಅದರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ-1 ಸ್ಥಾನ ಇದ್ದು, ಅದು ಮಹಿಳೆಗೆ ಮೀಸಲು. ಹಿಂದುಳಿದ ಅ ವರ್ಗ-2(ಮಹಿಳೆ-1), ಸಾಮಾನ್ಯ-6 (ಮಹಿಳೆ-3). ಜಮಖಂಡಿ ತಾಪಂನಲ್ಲಿ 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮಹಿಳೆಯರಿಗೆ. ಎಸ್‌ಸಿ-3 (ಮಹಿಳೆ-2), ಎಸ್‌ಟಿಗೆ ಒಂದು ಸ್ಥಾನವಿದ್ದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-3). ಮುಧೋಳ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾ ನ್ಯ-7 (ಮಹಿಳೆ-3). ಬೀಳಗಿ ತಾಪಂನಲ್ಲಿ 12 ಸದಸ್ಯರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಬ ವರ್ಗಕ್ಕೆ ತಲಾ ಒಂದು ಸ್ಥಾನ ಮೀಸಲಿದ್ದು, ಅವು ಮಹಿಳೆಯರಿಗೆ ಮೀಸಲಿವೆ. ರಬಕವಿ-ಬನಹಟ್ಟಿ ಹೊಸ ತಾಲೂಕಿನಲ್ಲಿ 11 ಸ್ಥಾನಗಳಿದ್ದು, 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಒಂದು ಸ್ಥಾನವಿದ್ದು, ಅದೂ ಮಹಿಳೆಗೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾನ್ಯ 6 (ಮಹಿಳೆ-3) ಸ್ಥಾನ ಮೀಸಲಿವೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.