ಶನಿದೇವರ ವಾರದಂದು ನಿಮ್ಮ ಗ್ರಹ ಬಲ ಹೇಗಿದೆ ನೋಡಿ
Team Udayavani, May 8, 2021, 7:30 AM IST
ಮೇಷ: ಆತ್ಮವಿಶ್ವಾಸ, ಪ್ರಯತ್ನಬಲ ಪ್ರಾಮಾಣಿಕ ಯತ್ನಕ್ಕೆ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಹಿರಿಯರ ಹಾರೈಕೆ, ಸೂಕ್ತ ಸಲಹೆ, ಮಾರ್ಗದರ್ಶನವನ್ನು ಪರಿಪಾಲಿಸಿದರೆ ಯಶಸ್ಸು ನಿಮ್ಮದಾಗಲಿದೆ.
ವೃಷಭ: ಮಹತ್ವದ ಕೆಲಸಕಾರ್ಯಗಳಿಗಾಗಿ ಕಾಯು ವಂತಾದೀತು. ಆರ್ಥಿಕವಾಗಿ ಆದಾಯ ವರ್ಧನೆಗೆ ಹಾಗೂ ಸಾಮಾಜಿಕವಾಗಿ ಕೀರ್ತಿ ವೃದ್ಧಿಗೆ ಹಲವಾರು ಅವಕಾಶಗಳು ಒದಗಿ ಬಂದಾವು. ದೂರ ಸಂಚಾರ ಕಂಡುಬರುವುದು.
ಮಿಥುನ: ಆರ್ಥಿಕವಾಗಿ ಭಾಗ್ಯ, ಸಂಪತ್ತು ಪ್ರಕಟ ವಾಗುತ್ತದೆ. ಸಾಂಸಾರಿಕವಾಗಿ ವಿವಾಹಾದಿ ಮಂಗಲ ಕಾರ್ಯಗಳ ಚಿಂತನೆ ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಲಾಭಾಂಶ ಹೆಚ್ಚಿದ್ದರೂ ಆಪತ್ತು ಇರುವುದು.
ಕರ್ಕ: ಲೇವಾದೇವಿ, ಜಾಗ, ನಿವೇಶನ ಮಾರಾಟ ದವರಿಗೆ ಲಾಭಾಂಶವು ಹೆಚ್ಚಾಗಲಿದೆ. ವೃತ್ತಿರಂಗದಲ್ಲಿ ಅಧಿಕಾರ ವರ್ಗದವರ ಪ್ರಭಾವವು ಹೆಚ್ಚಾಗಲಿದೆ. ನಿಮ್ಮ ವಿರೋಧಿಗಳಿಗೆ ಇದು ಅಪಜಯದ ಸಮಯವಾಗಿರುತ್ತದೆ.
ಸಿಂಹ: ಆಕಸ್ಮಿಕ ಧನಸಂಪತ್ತು ಕೈಗೂಡಲಿದೆ. ಆದರೆ ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ನಿಮ್ಮ ನಡೆ, ನುಡಿಗಳು ಒಂದೇ ಆಗಿರಲಿ. ಧನಾಗಮನವು ಸುಗಮವಿದ್ದರೂ ಖರ್ಚಿಗೆ ಹಲವು ಮಾರ್ಗಗಳು ತೆರೆದುಕೊಂಡಾವು.
ಕನ್ಯಾ: ನಿಮ್ಮ ಸಿಡುಕು ನಿಮ್ಮ ಕಾರ್ಯಹಾನಿ ಮಾಡಲಿದೆ. ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ತಂದೀತು. ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆ ದರ್ಶನವಾದೀತು. ಸಾಂಸಾರಿಕವಾಗಿ ಪಾಪಪ್ರಜ್ಞೆ ಆಗಾಗ ಕಾಡಲಿದೆ. ಧನವ್ಯಯವು ಹೆಚ್ಚಾಗಲಿದೆ.
ತುಲಾ: ಸರಕಾರೀ ಕೆಲಸಕಾರ್ಯಗಳು ಅನಾವಶ್ಯಕವಾಗಿ ಧನವ್ಯಯಕ್ಕೆ ಕಾರಣವಾದೀತು. ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿರಿ. ಹಿತೈಷಿಗಳ ಸೂಕ್ತ ಸಲಹೆಗಳನ್ನು ಸ್ವೀಕರಿಸುವುದು. ಹಾಗೇ ಮುನ್ನಡೆದರೆ ಉತ್ತಮ.
ವೃಶ್ಚಿಕ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಅವಕೃಪೆ ತೋರಿಬರುತ್ತದೆ. ವ್ಯಾಪಾರ, ವ್ಯವಹಾರಗಳು ತುಸು ನೆಮ್ಮದಿ ತಂದರೂ ವಂಚಕರ ಕುತಂತ್ರಕ್ಕೆ ಆಸ್ಪದವಿರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಆಗಾಗ ಅನುಭವಕ್ಕೆ ಬರುತ್ತದೆ.
ಧನು: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಸಾರ್ವಜನಿಕ ಕೆಲಸಕಾರ್ಯಗಳು ನಿಮಗೆ ಗೌರವವನ್ನು ತಂದು ಕೊಡಲಿದೆ. ವೈಯಕ್ತಿಕ ಸಮಸ್ಯೆಗಳನ್ನು ನಿಮ್ಮೊಳಗೇ ಬಗೆಹರಿಸಿಕೊಳ್ಳಿರಿ. ಶುಭವಿರುತ್ತದೆ.
ಮಕರ: ಕಾರ್ಯಕ್ಷೇತ್ರದಲ್ಲಿ ಶತ್ರು ನಿವಾರಣೆ ಯಾದರೂ ಭಯಭೀತಿ ತೊಲಗದು. ಆಗಾಗ ಧನ ಚಿಂತೆ ತೋರಿಬಂದು ಆತಂಕ ತಂದೀತು. ಸಂಚಾರದಿಂದ ಮನಃಕ್ಲೇಶ, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವು ಕಾಡಲಿದೆ.
ಕುಂಭ: ನೌಕರ ವರ್ಗಕ್ಕೆ ಮುಂಭಡ್ತಿಯ ಯೋಗವಿದೆ. ನೂತನ ಕಾರ್ಯದ ಒತ್ತಡವು ಮನಃಕ್ಲೇಶ ತಂದರೂ ಆಂತರಿಕವಾಗಿ ಹರುಷ ತಂದೀತು. ಶುಭ ಮಂಗಲ ಕಾರ್ಯಗಳು ಅಡೆತಡೆ ತಂದು ಮುಂದುವರಿಯಲಿದೆ.
ಮೀನ: ಕೌಟುಂಬಿಕವಾಗಿ ಸಹೋದರರ ಸಹಕಾರಕ್ಕೆ ಸಂಚು. ಶತ್ರುಬಾಧೆ ಇರುತ್ತದೆ. ಕಾರ್ಯರಂಗದಲ್ಲಿ ಅತೀ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಧ್ಯಸ್ಥಿಕೆ, ಪಂಚಾತಿಕೆಯಿಂದ ದೂರವಿದ್ದರೆ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
MUST WATCH
ಹೊಸ ಸೇರ್ಪಡೆ
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!