ಚಿಕಿತ್ಸೆ ನೀಡದೆ ವೈದ್ಯರ ನಿರ್ಲಕ್ಷ: ಚಿಕಿತ್ಸೆಗಾಗಿ ಮೂರು ಗಂಟೆ ಓಮ್ನಿಯಲ್ಲೇ ನರಳಾಡಿದ ರೋಗಿ
Team Udayavani, May 11, 2021, 3:51 PM IST
ಚಿಂತಾಮಣಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿ ವೈದ್ಯರು ನಿರ್ಲಕ್ಷದಿಂದ ಮೂರು ಗಂಟೆಗಳ ಕಾಲ ಆಸ್ಪತ್ರೆಯ ಆವರಣದಲ್ಲಿ ಒಮ್ನಿಯಲ್ಲೆ ಕುಳಿತು ನರಳಾಡಿರುವ ಘಟನೆ ಚಿಂತಾಮಣಿ ನಗರ ಸಾರ್ವಜನಿಕ ಆಸ್ಪತ್ರೆ ಬಳಿ ನಡೆದಿದೆ.
ಚಿಕಿತ್ಸೆಗೆ ಬಂದ ವ್ಯಕ್ತಿ ತಾಲೂಕಿನ ಸಿದ್ದಿಮಠ ಗ್ರಾಮದ ಅಹಮ್ಮದ್ ಪಾಷಾ ಎಂಬುವರಾಗಿದ್ದು ಇವರು ಮದ್ಯಾಹ್ನ ಒಂದು ಗಂಟೆ ಸಮಯ ಕ್ಕೆ ಸರಿಯಾಗಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದಾರೆ ಆದರೆ ವೈದ್ಯರು ಹೊಟ್ಟೆನೋವಿಗೆ ಚಿಕಿತ್ಸೆ ನೀಡದೆ ಕೋವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದರಿಂದ ಚಿಕಿತ್ಸೆ ದೊರೆಯದೆ ಸುಮಾರು ಮೂರು ಗಂಟೆಗಳ ಕಾಲ ಕಾದು ಕುಳಿತ ಪ್ರಸಂಗ ನಡೆದಿದೆ.
ಇದನ್ನೂ ಓದಿ : ಗಂಗಾವತಿ : ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ
ಇನ್ನು ವೈದ್ಯರ ನಿರ್ಲಕ್ಷ್ಯ ಬೇಸತ್ತ ರೋಗಿಯ ಸಂಬಂದಿ ಪತ್ರಕರ್ತರ ಗಮನಕ್ಕೆ ತಂದಿದ್ದಾರೆ ಇದಕ್ಕೆ ಸ್ಪಂದಿಸಿದ ಪತ್ರಕರ್ತರು ಸ್ಥಳಕ್ಕೆ ಬೇಟಿ ನೀಡಿ ವೈದ್ಯರನ್ನು ಪ್ರಶ್ನಿಸಿದಾಗ ರೋಗಿಗೆ ಚಿಕಿತ್ಸೆ ನೀಡಿದ್ದಾರೆ.
ಸರ್ಕಾರಿ ವೈದ್ಯರು ಜನಸಾಮಾನ್ಯರಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದರೆ ಜನ ಸಾಮಾನ್ಯರ ಗತಿ ಏನಾಗಬೇಕು ಎಂದು ವೈದ್ಯರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.