Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!


Team Udayavani, Apr 28, 2024, 4:05 PM IST

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾ ಮತದಾನ ಶುಕ್ರವಾರ ಶಾಂತವಾಗಿ ತೆರೆ ಕಂಡಿದೆ. ಆದರೆ ರಾಜಕೀ ಯ ಪಕ್ಷಗಳು ಮತದಾರರಿಗೆ ಅಖಾಡದಲ್ಲಿ ಹಣ, ಮದ್ಯದಹೊಳೆ ಹರಿಸಿದ್ದು ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೌದು, ಕಳೆದ ಮಾ.16 ರಿಂದ ಏ.26 ರ ವರೆಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಮದ್ಯ ಸಾಗಾಟ ಪ್ರಕರಣಗಳ ಸಂಪೂರ್ಣ ವಿವರ  ಉದಯವಾಣಿಗೆ ಲಭ್ಯವಾಗಿದ್ದು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 16.91ಕೋಟಿ ರೂ. ಮೌಲ್ಯದ ಅಬಕಾರಿ ಅಕ್ರಮಗಳು ಬೆಳಕಿಗೆ ಬಂದಿವೆ.

ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಾ.16 ರಿಂದ 26ರ ವರೆಗೂ ಬರೋಬ್ಬರಿ 1,93,427.99 ಲೀಟರ್‌ ಭಾರತೀಯ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ  11,22,44,940 ರೂಗಳಾಗಿವೆ. ಅದೇ ರೀತಿ ಬಿಯರ್‌ ಒಟ್ಟು  1,05,688.592 ಲೀಟರ್‌ ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ 2,39,82,973 ರೂ,ಗಳಾಗಿವೆ. ಇನ್ನೂ ಸೇಂದಿ ಒಟ್ಟು 984 ಲೀಟರ್‌ನಷ್ಟು ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 86,540 ರೂ,ಗಳಾಗಿವೆ. ಚುನಾವಣಾ ಕಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಒಟ್ಟು 10.495 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು,  ಅದರ ಒಟ್ಟು ಮೌಲ್ಯ 4,19,600 ರೂಗಳಾಗಿವೆ.

103 ವಾಹನಗಳ ವಶ: 2.44 ಕೋಟಿ ಮೌಲ್ಯ: ಅಕ್ರಮ ಮದ್ಯ ಮಾರಾಟಕ್ಕೆ ಬಳಸಲಾಗಿದ್ದ ದ್ವಿಚಕ್ರ ವಾಹನ, ತ್ರಿಚಕ್ರದ ಆಟೋಗಳು ಸೇರಿ ಒಟ್ಟು 82 ವಾಹನಗಳನ್ನು ಇಡೀ ಕ್ಷೇತ್ರದಲ್ಲಿ ವಶಕ್ಕೆ ಪಡೆಯಲಾಗಿದ್ದು ಅವುಗಳ ಒಟ್ಟು ಮೌಲ್ಯ 48,75,000 ರೂಗಳಾಗಿವೆ. ಇನ್ನೂ 4 ಚಕ್ರದ ಒಟ್ಟು 7 ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು ಅವುಗಳ ಒಟ್ಟು ಮೌಲ್ಯ 31,80,000 ರೂಗಳಾಗಿದೆ. ಅಲ್ಲದೇ  ಮದ್ಯ ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ 14  ಬೃಹತ್‌ ವಾಹನಗಳನ್ನು ಜಪ್ತಿ ಮಾಡಲಾಗಿದ್ದು ಅವುಗಳ ಒಟ್ಟು ಮೌಲ್ಯ 2,44,00000 ಕೋಟಿ ರೂ,ಗಳಾಗಿವೆ. ಒಟ್ಟು 103 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 3 ಕೋಟಿಗೂ ಅಧಿಕವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2.68 ಕೋಟಿ ಮೌಲ್ಯದ ಅಕ್ರಮ :

ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತವಾಗಿ ಬರೋಬ್ಬರಿ 2.68 ಕೋಟಿ ಮೌಲ್ಯದ ಅಬಕಾರಿ ಅಕ್ರಮಗಳು ನಡೆದಿವೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 30,195.790 ಲೀಟರ್‌ ಭಾರತೀಯ ಮದ್ಯ ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲು 1.66,52,428 ರೂಗಳಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 60,17.780 ಬಿಯರ್‌ ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 13,81,893 ರೂಗಳಾಗಿದೆ. ಸೇಂದಿ 941 ಲೀಟರ್‌ ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ 81,760 ರೂಗಳಾಗಿದೆ. ಜಿಲ್ಲೆಯಲ್ಲಿ 38 ಆಟೋ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 3 ಕಾರು, 4 ಭಾರೀ ಗಾತ್ರದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1.68,51,081 ರೂ, ಮೌಲ್ಯದ ಅಬಾರಿ ಅಕ್ರಮಗಳು ಬೆಳಕಿಗೆ ಬಂದಿದೆ.

ನೆಲಮಂಗಲ, ಚಿಕ್ಕಬಳ್ಳಾಪುರ, ಯಲಹಂಕ ಟಾಪ್‌

ಇಡೀ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಮದ್ಯ ಸಾಗಾಟ ಪ್ರಕರಣಗಳಲ್ಲಿ ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ  ಹಾಗೂ ಬೆಂಗಳೂರು ನಗರ ಜಿಲ್ಲೆಯ ಯಲ ಹಂಕ ಮುಂಚೂಣಿಯಲ್ಲಿವೆ. ಹೊಸಕೋಟೆ ಕೊನೆ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾ.16 ರಿಮದ ಏ.26 ರ ರವರೆಗೂ ಒಟ್ಟು 2.68 ಕೋಟಿ ಮೌಲ್ಯದ ಅಕ್ರಮ ಮದ್ಯ ಹಾಗೂ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಮಾರು 1.80 ಕೋಟಿ ಮೌಲ್ಯದಷ್ಟು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮದ್ಯ ಹಾಗೂ ಬಿಯರ್‌ನ್ನು ವಶಕ್ಕೆ ಪಡೆಯಲಾಗಿದೆ.-ಕೆ.ಅಶಾಲತ, ಉಪ ಆಯುಕ್ತೆ, ಅಬಕಾರಿ ಇಲಾಖೆ, ಚಿಕ್ಕಬಳ್ಳಾಪುರ

– ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Bantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶBantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶ

Bantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶ

Kasaragod ಆ್ಯಸಿಡ್‌ ಬಾಲ್‌ ಎಸೆತ: ಆರೋಪಿ ಬಂಧನ

Kasaragod ಆ್ಯಸಿಡ್‌ ಬಾಲ್‌ ಎಸೆತ: ಆರೋಪಿ ಬಂಧನ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Mangaluru ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Mangaluru ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

1-qwewwqqwe

MS Dhoni ಕೊನೆ ಪಂದ್ಯ ಸುದ್ದಿ; ಖಂಡಿತವಾಗಿಯೂ…ಸುರೇಶ್ ರೈನಾ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

10

Drought relief: ಕೇಂದ್ರದ ಬರ ಪರಿಹಾರಕ್ಕೆ ಕಾದು ಕುಳಿತ ರೈತರು

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

1-wewwqe

KKR ವೇಗಿ ರಮಣ್‌ದೀಪ್‌ಗೆ ದಂಡ

1-qwe-ewqe

IPL ಸೀಸನ್‌ನಲ್ಲಿ ಸಾವಿರ ಸಿಕ್ಸರ್‌ಗಳ ಹ್ಯಾಟ್ರಿಕ್‌

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Bantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶBantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶ

Bantwal ಬಿ.ಸಿ.ರೋಡು: ಅಕ್ರಮ ಮರಳು ಸಾಗಾಟ ವಶ

Kasaragod ಆ್ಯಸಿಡ್‌ ಬಾಲ್‌ ಎಸೆತ: ಆರೋಪಿ ಬಂಧನ

Kasaragod ಆ್ಯಸಿಡ್‌ ಬಾಲ್‌ ಎಸೆತ: ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.