ಈ ರಾಶಿಯವರಿಂದು ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ
Team Udayavani, May 17, 2021, 7:13 AM IST
17-5-2021
ಮೇಷ: ಐಷಾರಾಮದಿಂದ ದೈಹಿಕ ಹಾಗೂ ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಿದರೆ ಉತ್ತಮ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕು. ಕಾಳಜಿ ವಹಿಸುವುದು.
ವೃಷಭ: ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಾಪ್ತಿಯಾಗಲಿದೆ. ಸಾಮಾಜಿಕವಾಗಿ ಇತರರ ಕಷ್ಟಗಳಿಗೆ ನೆರವಾಗುವ ಸಂದರ್ಭ ಒದಗಿ ಬಂದೀತು. ತಾತ್ಕಾಲಿಕ ಉದ್ಯೋಗದಿಂದ ತುಸು ಸಮಾಧಾನವಾಗುವ ಸಮಯ ನಿಮ್ಮದು.
ಮಿಥುನ: ವಿದ್ಯಾರ್ಥಿಗಳ ಕ್ರಿಯಾಶೀಲತೆ ಶುಭದಾಯಕ ಫಲಿತಾಂಶ ನೀಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಅದೃಷ್ಟಬಲ ಹಾಗೂ ದೈವಾನುಗ್ರಹವು ನಿಮ್ಮನ್ನು ಕಾಪಾಡಲಿದೆ. ಶುಭವಿದೆ.
ಕರ್ಕ: ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ. ತೀರ್ಥಯಾತ್ರಾ ಅಪೇಕ್ಷೆಯನ್ನು ಸ್ವಲ್ಪ ಮುಂದೂಡಿದರೆ ಉತ್ತಮ. ತಾರುಣ್ಯದ ಮಂದಿಗೆ ಉತ್ತಮ ಬಾಳ ಸಂಗಾತಿಯು ದೊರೆತು ಸಂತಸವಾದೀತು. ಮುನ್ನಡೆಯಿರಿ.
ಸಿಂಹ: ವಿದ್ಯಾರ್ಥಿಗಳ ಅಭ್ಯಾಸ ಬಲಕ್ಕೆ ನಿಶ್ಚಿತ ರೂಪದಲ್ಲಿ ಉತ್ತಮ ಫಲಿತಾಂಶ ದೊರಕಲಿದೆ. ರಾಹುವು ಆಗಾಗ ಮನೋವಿಕಾರಕ್ಕೆ ಕಾರಣನಾದಾನು. ಆರ್ಥಿಕವಾಗಿ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಲೆಕ್ಕಾಚಾರವಿದ್ದರೆ ಒಳ್ಳೆಯದು.
ಕನ್ಯಾ: ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಆತಂಕ ತಂದೀತು. ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ತಜ್ಞರಿಗೆ, ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಪ್ರಾಪ್ತವಾಗಲಿದೆ. ಹಿರಿಯರ ಮಾತನ್ನು ಸಮಾಧಾನದಿಂದ ಆಲಿಸುವುದು.
ತುಲಾ: ಗೃಹದಲ್ಲಿ ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗುವ ಸಮಯವಿದು. ಸಾಮಾಜಿಕ ಸ್ತರದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಗೃಹಗಳ ಲಾಭಸ್ಥಾನದ ಫಲದಿಂದ ಆರ್ಥಿಕ ಅಭಿವೃದ್ಧಿಯು ಕಂಡುಬರುವುದು.
ವೃಶ್ಚಿಕ: ಆರ್ಥಿಕ ಸ್ಥಿತಿಯು ಉನ್ನತಿಗೇರಿದರೂ ಆಕಸ್ಮಿಕಖರ್ಚುವೆಚ್ಚಗಳು ಅಧಿಕವಾಗಲಿದೆ. ಹಿಡಿದ ಕೆಲಸವನ್ನು ನಾಳೆಗೆ ಎನ್ನದೆ ಇಂದೇ ಕಾರ್ಯಪ್ರವೃತ್ತರಾಗಿರಿ. ಉನ್ನತ ಫಲಿತಾಂಶವು ಪ್ರಾಪ್ತವಾಗಲಿದೆ. ದೈಹಿಕ ಆರೋಗ್ಯ ಉತ್ತಮ.
ಧನು: ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆಗಳು ಮಹಿಳೆಯರ ಮನಸ್ಸನ್ನು ಕೆಡಿಸಲಿದೆ. ಧನಾತ್ಮಕವಾಗಿ ಚಿಂತಿಸಿ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ, ಪ್ರತಿಭೆ, ಸಾರ್ಥಕವಾದರೂ ಹಿತಶತ್ರುಗಳು ಗಮನಿಸಲಿದ್ದಾರೆ.
ಮಕರ: ಯಾವುದೇ ಕೆಲಸ ಕಾರ್ಯಗಳು ಅಡೆತಡೆ ವಿಳಂಬ ಗತಿಯಲ್ಲಿ ನಡೆದು ಪೂರ್ಣವಾಗಲಿದೆ. ಬದಲಾವಣೆ ಜೀವನ ನಿಯಮ. ಬದಲಾಗುತ್ತಿರುವ ಬಾಳಿನೊಡನೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಶುಭ ವಾರ್ತಾ ಶ್ರವಣ.
ಕುಂಭ: ರಾಜಕೀಯ ಭವಿಷ್ಯವು ಮುಸುಕಾದೀತು. ಆಸ್ತಿ, ನಿವೇಶನ, ಫ್ಲ್ಯಾಟ್ ಖರೀದಿಗಾಗಿ ಧನವ್ಯಯ ಉಂಟಾದೀತು. ವಿದ್ಯಾರ್ಥಿಗಳಿಗೆ ಸತತ ಓದು ಉತ್ತಮ ಫಲಿತಾಂಶಕ್ಕೆಕಾರಣವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿ.
ಮೀನ: ಆರೋಗ್ಯ ಭಾಗ್ಯವನ್ನು ವರ್ಧಿಸಿಕೊಳ್ಳುವುದು ನಿಮ್ಮ ಕೈಯಲ್ಲಿರುತ್ತದೆ. ಧರ್ಮಪತ್ನಿ ಯೊಂದಿಗೆ ಸಹಮತವಿರಲಿ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ಬದಲಾವಣೆಯ ಸೂಚನೆಗಳೂ ಗೋಚಾರಕ್ಕೆ ಬಂದಾವು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
MUST WATCH
ಹೊಸ ಸೇರ್ಪಡೆ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?