ಚಿತ್ರದುರ್ಗ: ಸೋನು ಸೂದ್ ಭರವಸೆ ನೀಡಿ ವಾರವಾದರೂ ಇನ್ನೂ ತಲುಪಿಲ್ಲ ಚುಚ್ಚುಮದ್ದು!
Team Udayavani, May 18, 2021, 8:56 AM IST
ಚಿತ್ರದುರ್ಗ: ಇಲ್ಲಿನ ಕೋವಿಡ್ ಸೋಂಕಿತ ವಿನಯ್ ಎಂಬುವವರಿಗೆ ರೆಮ್ಡೆಸಿವಿಯರ್ ಚುಚ್ಚುಮದ್ದು ತಲುಪಿಸುವುದಾಗಿ ಬಾಲಿವುಡ್ ನಟ ಸೋನು ಸೂದ್ ಟ್ವಿಟರ್ನಲ್ಲಿ ಭರವಸೆ ನೀಡಿ ವಾರವಾದರೂ ತಲುಪದ ಕಾರಣ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
“ರೆಮ್ಡೆಸಿವಿಯರ್ ಪೂರೈಕೆ ಬಗ್ಗೆ ಕಾಳಜಿ ತೋರಿಸಿದ ಹರ್ಭಜನ್ ಸಿಂಗ್ ಹಾಗೂ ಸೋನು ಸೂದ್ ಅವರಿಗೆ ಧನ್ಯವಾದ ಹೇಳುತ್ತೇನೆ. ಆದರೆ ಈವರೆಗೆ ಸೋನು ಸೂದ್ ಕಡೆಯವರಿಂದ ಫೋನ್ ಕಾಲ್ ಬಂದಿಲ್ಲ. ಚುಚ್ಚುಮದ್ದೂ ತಲುಪಿಲ್ಲ. ನಮಗೆ ಸಮಸ್ಯೆ ಆಗಿತ್ತು. ಈಗ ಆಸ್ಪತ್ರೆಯವರು ಹಾಗೂ ಸಂಬಂಧಿಕರು ಸೇರಿ ವ್ಯವಸ್ಥೆ ಮಾಡಿದ್ದಾರೆ’ ಎಂದು ವಿನಯ್ ಪತ್ನಿ ಪೂಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಾವು ಯಶಸ್ಸು ಕಾಣಬೇಕಾದರೆ ಬಿಜೆಪಿಯಂತೆ ದೊಡ್ಡದಾಗಿ ಯೋಚಿಸಬೇಕು: ಹಿರಿಯ ಕಾಂಗ್ರೆಸ್ ನಾಯಕ
ಕಳೆದ ವಾರ ವಿನಯ್ಗೆ ಚುಚ್ಚುಮದ್ದು ಅಗತ್ಯವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಲಾಗಿತ್ತು. ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಸೋನು ಸೂದ್ ಚುಚ್ಚುಮದ್ದು ತಲುಪಲಿದೆ ಭಜಿ ಎಂದಿದ್ದರು. ಇದರಿಂದ ವಿನಯ್ ಹಾಗೂ ಅವರ ಪತ್ನಿ ಸಂತಸಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್