ಹಾಕಿ ಮಾಂತ್ರಿಕ ಧ್ಯಾನ್ಚಂದ್ ಸಾಕ್ಷ್ಯಚಿತ್ರ ; ಜೂನ್ನಲ್ಲಿ ಚಿತ್ರೀಕರಣ ಆರಂಭ
Team Udayavani, May 19, 2021, 7:00 AM IST
ಹೊಸದಿಲ್ಲಿ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರ ಬದುಕು ಹಾಗೂ ಸಾಧನೆ ಕುರಿತ ಸಾಕ್ಷ್ಯಚಿತ್ರವೊಂದು ರೂಪುಗೊಳ್ಳುತ್ತಿದ್ದು, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ.
ಧ್ಯಾನ್ಚಂದ್ಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಡಿಜಿಟಲ್ ಅಭಿಯಾನ ರಂಭಿಸಿದ ಜೋಯೀತಾ ರಾಯ್ ಮತ್ತು ಪ್ರತೀಕ್ ಕುಮಾರ್ ಮಿಶ್ರಾ ಅವರು ಈಗಾಗಲೇ ಇದರ ನಿರ್ಮಾಣದಲ್ಲಿ ತೊಡಗಿದ್ದಾರೆ.
ಧ್ಯಾನ್ಚಂದ್ ಅವರ ಪುತ್ರ ಅಶೋಕ್ ಅವರನ್ನು ಸಂಪರ್ಕಿಸಿ ಜಾನ್ಸಿ, ಅಲಹಾಬಾದ್ ಸುತ್ತಮುತ್ತ 2020ರಲ್ಲೇ ಚಿತ್ರೀಕರಣ ನಡೆಸುವುದು ಇವರ ಉದ್ದೇಶವಾಗಿತ್ತು. ಆದರೆ ಕೋವಿಡ್ ಕಾರಣದಿಂದ ಇದು ಸಾಧ್ಯವಾಗಲಿಲ್ಲ. ಇದೀಗ ಜೂನ್ನಲ್ಲಿ ಆರಂಭವಾಗಲಿದೆ. ಡಿ. 3ರಂದು, ಅಂದರೆ ಧ್ಯಾನ್ಚಂದ್ ಅವರ 42ನೇ ಪುಣ್ಯತಿಥಿಯಂದು ಇದನ್ನು ಬಿಡುಗಡೆ ಮಾಡುವ ಯೋಜನೆ ಇವರದಾಗಿದೆ.
ಇದನ್ನೂ ಓದಿ :ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್ ಸೌತ್ ಆಫ್ರಿಕಾ ಸ್ಪಷ್ಟನೆ