ಗಾಳಿಯಲ್ಲೂ ಬಹುದೂರ ಪ್ರಯಾಣಿಸುವ ಕೋವಿಡ್ !
Team Udayavani, May 27, 2021, 7:10 AM IST
ಹೊಸದಿಲ್ಲಿ : ದೇಶದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿ ಎರಡು-ಮೂರು ತಿಂಗಳುಗಳು ಕಳೆಯುವಷ್ಟರಲ್ಲಿ ಕೊರೊನಾ ವೈರಾಣು ಹಲವಾರು ಬಾರಿ ರೂಪಾಂತರಗೊಂಡಿದ್ದು, ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೊರೊನಾ ನಿರ್ವಹಣೆಯ ಮಾರ್ಗ ಸೂಚಿ ಗಳನ್ನು ಕೇಂದ್ರ ಆರೋಗ್ಯ ಇಲಾಖೆ ಪರಿಷ್ಕರಿಸಿದೆ.
ಹೊಸ ವಿಚಾರಗಳು
ಸೋಂಕಿತನ ಎಂಜಲು, ಮೂಗಿನ ಮ್ಯೂಕಸ್ ದ್ರವದಿಂದ ಕೊರೊನಾ ಹರಡುತ್ತದೆ. ಮಾತನಾಡುವಾಗ ಹೊರ ಬೀಳುವ ಎಂಜಲಿನ ಸಣ್ಣ ಹನಿಗಳಲ್ಲೂ ವೈರಸ್ ಗಳು ಇದ್ದು, ವಾತಾವರಣದಲ್ಲಿ ಸೇರಿಕೊಳ್ಳುತ್ತವೆ. ಒಮ್ಮೆ ಗಾಳಿಯನ್ನು ಸೇರಿದರೆ ಸಾಕಷ್ಟು ದೂರ ಪ್ರಯಾಣ ಮಾಡಬಲ್ಲವು. ಯಾವುದೇ ವಸ್ತುಗಳ ಮೇಲೆ ಇವು ಬಿದ್ದರೆ, ಅಲ್ಲಿಯೇ ಬಹುದಿನಗಳವರೆಗೆ ಇರಬಲ್ಲವು.
ಎಂಜಲು ಹನಿಗಳಿಂದ ಬರುವ ವೈರಾಣುಗಳು ನೆಲಕ್ಕೆ ಬಿದ್ದ ಮೇಲೆ 2 ಮೀ. ದೂರಕ್ಕೆ ಹರಡಬಲ್ಲವು. ಕೆಮ್ಮು, ಉಸಿರಾಟದಿಂದ ಬರುವ ವೈರಾಣುಗಳು ಗಾಳಿಯಲ್ಲಿ 10 ಮೀ. ವರೆಗೆ ಸಾಗಬಲ್ಲವು ಎಂದು ಹೇಳಲಾಗಿದೆ.
ಪರಿಷ್ಕೃತ ನಿಯಮಗಳು
– ಯಾವಾಗಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ.
– ಕೊರೊನಾ ಹರಡುವಿಕೆಗೆ ಕಡ್ಡಾಯ ತಡೆ ಹಾಕಲೇಬೇಕು.
– ಸಾಮಾಜಿಕ ಅಂತರ ಮತ್ತಷ್ಟು ಬಿಗಿಗೊಳ್ಳಬೇಕು.
– ನೈರ್ಮಲ್ಯ ಹಾಗೂ ಮುಕ್ತ ಗಾಳಿ ಸಂಚಾರಕ್ಕೆ ಎಲ್ಲೆಡೆ ಅನುವು ಮಾಡಿಕೊಡಬೇಕು.
– ಯಾರೂ ಕೂಡ ಸಾರ್ವಜನಿಕ ಜಾಗಗಳಲ್ಲಿ ಉಗುಳುವುದು, ಸಿಂಬಳ ಇತ್ಯಾದಿಯನ್ನು ಎಸೆ ಯುವುದು ಮಾಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!
ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
Loksabha; ಮಂದಿರಕ್ಕೆ ಬಾಬರಿ ಲಾಕ್ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ
Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್ ವಿವಾದ
MUST WATCH
ಹೊಸ ಸೇರ್ಪಡೆ
Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Malpe: ತೊಟ್ಟಂ ಬೀಚ್ನಲ್ಲಿ ಮುಳುಗುತ್ತಿದ್ದವರ ರಕ್ಷಣೆ
Gujarat ; ದಟ್ಟಾರಣ್ಯದಲ್ಲಿ ಒಬ್ಬ ಮತದಾರನಿಗಾಗಿ ಮತಗಟ್ಟೆ ಸ್ಥಾಪನೆ!
ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!