Loksabha; ಮಂದಿರಕ್ಕೆ ಬಾಬರಿ ಲಾಕ್ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ
Team Udayavani, May 8, 2024, 7:00 AM IST
ಭೋಪಾಲ್: ಕಾಶ್ಮೀರದಲ್ಲಿ 370ನೇ ವಿಧಿಯನ್ನು ಕಾಂಗ್ರೆಸ್ ಮರುಸ್ಥಾಪಿಸದಂತೆ ತಡೆಯಲು, ಅಯೋಧ್ಯೆಯ ರಾಮ ಮಂದಿರದ ಮೇಲೆ “ಬಾಬರಿ ಬೀಗ’ವನ್ನು ಹಾಕದಂತೆ ತಡೆಯವುದಕ್ಕಾಗಿ ಎನ್ಡಿಎಗೆ 400 ಕ್ಷೇತ್ರಗಳಲ್ಲಿ ಜಯ ಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಧಾರ್ನಲ್ಲಿ ಚುನಾವಣೆ ರ್ಯಾಲಿಯನ್ನುದ್ದೇಶಿಸಿ ಪಿಎಂ ಮಾತನಾಡಿದ್ದಾರೆ. ಈ ವೇಳೆ ಮೋದಿಗೆ ಕೇಂದ್ರದಲ್ಲಿ 400 ಸೀಟು ಸಿಕ್ಕರೆ ಅವರು ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ ಹಬ್ಬಿಸುತ್ತಿದೆ. ಆದರೆ ಮೋದಿ ಈ ಜಯ ಬಯಸುತ್ತಿರುವುದು ಬೇರೆಯದ್ದೇ ಕಾರಣಗಳಿಗೆ ಎಂದು ತಮ್ಮ ಉದ್ದೇಶಗಳನ್ನು ಪಟ್ಟಿ ಮಾಡಿದ್ದಾರೆ.
ಕಾಂಗ್ರೆಸ್ ಒಬಿಸಿಗಳ ಮತವನ್ನು ದೋಚಿ, ವೋಟ್ಬ್ಯಾಂಕ್ಗೆ ಬಳಸದಂತೆ ತಡೆಯಲು. ದೇಶದ ದ್ವೀಪ ಪ್ರದೇಶಗಳನ್ನು, ಖಾಲಿ ಪ್ರದೇಶಗಳನ್ನು ವಿದೇಶಗಳಿಗೆ ಮಾರದಂತೆ ಕಾಯಲು. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲನ್ನು ಕಿತ್ತು ವೋಟ್ ಬ್ಯಾಂಕ್ಗೆ ನೀಡದಿರಲು ಮತ್ತು ಕಾಂಗ್ರೆಸ್ನ ವೋಟ್ಬ್ಯಾಂಕ್ನ ಎಲ್ಲ ಜಾತಿಗಳನ್ನೂ ರಾತೋರಾತ್ರಿ ಒಬಿಸಿ ಎಂದು ಘೋಷಿಸದಂತೆ ತಡೆಯಲು ನನಗೆ 400 ಸೀಟುಗಳಲ್ಲಿ ಗೆಲುವು ಬೇಕಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ