ಎಲ್ಲರಿಗೂ ಓಪನ್ ಚಾಲೆಂಜ್ ಹಾಕಿದ ನಟ ಉಪೇಂದ್ರ
Team Udayavani, May 28, 2021, 6:45 PM IST
ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜ ಸೇವೆ ಮಾಡುತ್ತಿರುವ ನಟ ನಟ ಉಪೇಂದ್ರ ಅವರ ವಿರುದ್ಧ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದೆಲ್ಲಾ ಮಾತಾಡುತ್ತಿದ್ದಾರೆ.
ತಮ್ಮ ಕೆಸಲ ಹಾಗೂ ಪ್ರಜಾಕೀಯದ ವಿರುದ್ಧ ಕೊಂಕು ನುಡಿಗಳನ್ನಾಡುತ್ತಿರುವ ಜನರಿಗೆ ಉಪ್ಪಿ ಅವರು ಸರಿಯಾದ ಉತ್ತರವನ್ನೇ ನೀಡುತ್ತಿದ್ದಾರೆ. ಅವರು ಇದೀಗ ಎಲ್ಲರಿಗೂ ಓಪನ್ ಚಾಲೆಂಜ್ ಒಂದನ್ನು ಹಾಕಿದ್ದಾರೆ.
ಆ ಚಾಲೆಂಜ್ ಏನು ?
ಕರ್ನಾಟಕದ ಜನರೇ.. ನಿಮ್ಮದೇ ಒಂದು ಪಕ್ಷ ಇದೆ. ಪ್ರಜಾಕೀಯ ವಿಚಾರದಂತೆ ನಿಮ್ಮ ಪಕ್ಷಕ್ಕೆ ನೀವೇ ನಿಮ್ಮ ಕ್ಷೇತ್ರದ ಮತದಾರರ ಶಿಫಾರಸ್ಸು ಪಡೆದು ಚುನಾಣೆಯಲ್ಲಿ ಭಾಗವಹಿಸಿ ಅಥವಾ ನಿಮ್ಮ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಸೂಚಿಸಿ, ನೀವೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಪ್ರತಿನಿಧಿಯು ಪ್ರಜಾಕೀಯ ಸಿದ್ದಾಂತದಂತೆ ನಡೆಯದಿದ್ದರೆ ಆತ/ ಆಕೆಯನ್ನು ನೀವೇ ಹೋರಾಟ ಮಾಡಿ ಕೆಳಗಿಳಿಸಿ, ನೀವು ಕರೆದರೆ ಹೋರಾಟದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ( ಅದು ಕಾನೂನಾಗುವಂತೆ ಮಾಡಿ)
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವೇ ರಾಜರಾಗಬೇಕು. ಉತ್ತಮ ಪ್ರಜಾಕೀಯ ಪಕ್ಷ ನೀವೇ ಮುನ್ನಡೆಸಬೇಕು. ವ್ಯಕ್ತಿಯನ್ನು ಗುರಿಯಾಗಿಸಿ ವಿಚಾರಗಳನ್ನು ಕೊಲ್ಲುವ ರಾಜಕೀಯವನ್ನು ಈ ರೀತಿ ಮುಗಿಸಬೇಕು.
ನೀವೇ ಯುಪಿಪಿ ಹೈಕಮಾಂಡ್… ಪ್ರಜಾಕೀಯ ಸಿದ್ಧಾಂತಡಿಯಲ್ಲಿ ನೀವು ಹೇಳಿದಂತೆ ಕೇಳುವ ಪಕ್ಷದ ಸಂಸ್ಥಾಪಕ ಅಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಅಷ್ಟೆ.
ಇನ್ನು ಮುಂದೆ ಪ್ರಜಾಕೀಯದ ವಿಚಾರಗಳು ಮಾತ್ರ ಪ್ರಚಾರವಾಗಲಿ. ಉಪೇಂದ್ರ ಹೆಸರು ಎಲ್ಲಿಯೂ ಬೇಡ… ಓಕೆ ?
ಹೀಗೆ ಹೇಳಿರುವ ಉಪೇಂದ್ರ ಅವರು ನೀವು ಹಿಂದಿನಿಂದ ಎಂದೂ ಬಿಡಿಸಿಕೊಳ್ಳಲಾಗದ ಸರಪಳಿಯಿಂದ ಬಿಡಿಸಿಕೊಂಡು ಹೊರಗೆ ಬರಬಲ್ಲಿರಾ ? ಎಂದು ಸವಾಲು ಹಾಕಿದ್ದಾರೆ.
ನೀವು ಹಿಂದಿನಿಂದ ಎಂದೂ ಬಿಡಿಸಿಕೊಳ್ಳಲಾಗದ ಈ ಸರಪಳಿಯಿಂದ ಬಿಡಿಸಿಕೊಂಡು ಹೊರಗೆ ಬರಬಲ್ಲಿರಾ ? pic.twitter.com/LEmbiGgVyW
— Upendra (@nimmaupendra) May 28, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ