ಸೇನೆ ಸೇರಿದ ಹುತಾತ್ಮ ಮೇಜರ್‌ನ ಪತ್ನಿ : ಮೇ| ದೌಂಡಿಯಾಲ್‌ ಮಡದಿ ನಿಕಿತಾ ಸಾಹಸ


Team Udayavani, May 30, 2021, 7:00 AM IST

ಸೇನೆ ಸೇರಿದ ಹುತಾತ್ಮ ಮೇಜರ್‌ನ ಪತ್ನಿ : ಮೇ| ದೌಂಡಿಯಾಲ್‌ ಮಡದಿ ನಿಕಿತಾ ಸಾಹಸ

ಹೊಸದಿಲ್ಲಿ: ಅವರು ಸೇನೆಯ ಸಮರ್ಥ ಅಧಿಕಾರಿ. 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದರು. ಅದೇ ವರ್ಷ ಅವರಿಗೆ ದೇಶವು ಮರಣೋತ್ತರ ಶೌರ್ಯಚಕ್ರ ನೀಡಿ ಗೌರವಿಸಿತು. ತಮ್ಮ ಪತಿಯ ಸಾವಿನ ಬೆನ್ನಲ್ಲೇ ಹುತಾತ್ಮ ಮೇಜರ್‌ ಅವರಷ್ಟೇ ದೇಶಭಕ್ತೆ, ಧೈರ್ಯಶಾಲಿಯಾಗಿರುವ ಪತ್ನಿ ಸೇನಾ ಪರೀಕ್ಷೆಗಳಿಗೆ ತಯಾರಿ ನಡೆಸಿ, ಉತ್ತೀರ್ಣರಾಗಿ ಈಗ ಸೇನೆಗೆ ಸೇರ್ಪಡೆಯಾಗಿದ್ದಾರೆ.

ಇದು ಮೇ| ವಿಭೂತಿ ಶಂಕರ್‌ ದೌಂಡಿಯಾಲ್‌ ಅವರ ಪತ್ನಿ ನಿಕಿತಾ ಕೌಲ್‌ ಅವರ ಸಾಹಸಗಾಥೆ.

ಅಧಿಕೃತ ಸೇರ್ಪಡೆ
ದೇಶ ಸೇವೆಯ ಮೂಲಕವೇ ತಮ್ಮ ಪತಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯ ಎಂಬ ದೃಢ ನಿಶ್ಚಯದೊಂದಿಗೆ ಶಾರ್ಟ್‌ ಸರ್ವೀಸ್‌ ಕಮಿಷನ್‌ (ಎಸ್‌ಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಿದ 28 ವರ್ಷದ ನಿಕಿತಾ, 2020ರಲ್ಲಿ ಸೇನಾ ನೇಮಕಾತಿಯ ಸಂದರ್ಶನವನ್ನು ಎದುರಿಸಿದ್ದರು. ಎರಡೂ ಹಂತಗಳನ್ನು ಪೂರೈಸಿದ ಅನಂತರ ಮೇ 26ರಂದು ಸೇನಾ ತರಬೇತಿಗೆ ದಾಖಲಾದರು. ಭಾರತೀಯ ಸೇನೆಯ ನಾದರ್ನ್ ಕಮಾಂಡರ್‌ ಲೆ|ಜ| ವೈ.ಕೆ. ಜೋಷಿಯವರು ಮೇ 29ರಂದು ನಿಕಿತಾ ಅವರನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

ಅಂದು ಮಾಡಿದ್ದ ಪ್ರತಿಜ್ಞೆ
ಪತಿಯ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಬೀಳ್ಕೊಡುವ ಮುನ್ನವೇ ನಿಕಿತಾ ಸೇನೆ ಸೇರುವ ಪ್ರತಿಜ್ಞೆ ಮಾಡಿದ್ದರು. ಪತಿ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತ, “ನೀವು ಯಾವಾಗಲೂ ನನ್ನನ್ನು ತುಂಬಾ ಪ್ರೀತಿಸುವುದಾಗಿ ಹೇಳುತ್ತಿದ್ದಿರಿ. ನಿಜ ಹೇಳಬೇಕೆಂದರೆ, ನೀವು ನನಗಿಂತ ಹೆಚ್ಚು ದೇಶವನ್ನು ಪ್ರೀತಿಸಿದಿರಿ. ಇಂದು ದೇಶಕ್ಕಾಗಿ ನೀವು ಬಲಿದಾನಗೈದಿದ್ದೀರಿ. ನಿಮ್ಮಂಥ ಶೂರ ಯೋಧನನ್ನು ಪತಿಯಾಗಿ ಪಡೆದ ನಾನು ಧನ್ಯ. ನಿಮ್ಮ ದೇಶಸೇವೆಯನ್ನು ಪೂರ್ಣಗೊಳಿಸುವ ಸಲುವಾಗಿ ನಾನೂ ಸೇನೆ ಸೇರುತ್ತೇನೆ’ ಎಂದಿದ್ದರು. ಆ ಪ್ರತಿಜ್ಞೆ ಯನ್ನು ನಿಕಿತಾ ನೆರವೇರಿಸಿದ್ದಾರೆ, ತಮ್ಮ ಪ್ರೀತಿಯ ಪತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.