ಕಾಡುವ ಮಳೆಗಾಲದ ಸಂಭ್ರಮ


Team Udayavani, Jun 8, 2021, 11:00 AM IST

ಕಾಡುವ ಮಳೆಗಾಲದ ಸಂಭ್ರಮ

ಮಳೆ ಎಂದರೆ ಸಾಕು ಹೆಣ್ಮಕ್ಕಳಿಗೆ ಏನೂ ಒಂದು ಸಂತಸ. ಯಾರು ಕಾಣದ ಲೋಕವನ್ನು ಅವರು ಮಳೆಯಲ್ಲಿ ಕಾಣುತ್ತಾರೆ.

ಹೆಣ್ಣು ಮಕ್ಕಳು ಹಾಗೆ ತಾನೇ ತಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಖುಷಿ ಕಾಣುವುದು ಸಹಜ. ಮಳೆ ಎಂದಾಗ ನಮ್ಮ ಬಾಲ್ಯ, ಕಾಲೇಜು ದಿನಗಳು ನೆನಪಿಗೆ ಬರುವುದು. ಮೋಡದ ಅಲೆಗಳು, ಮಿಂಚಿನ ಓಟಗಳು, ಸಿಡಿಲಿನ ಭಯಾನಕ ಸದ್ದು ಇವೆಲ್ಲವೂ ಮಳೆ ಆಗಮನದ ಮುನ್ಸೂಚನೆಗಳು. ಆಗ ನೋಡಿ ಜಿಟಿ ಜಿಟಿ ಮಳೆ ಹಾನಿಗಳು ನಮ್ಮ ಮನೆ ಅಂಗಳಕ್ಕೆ ಬೀಳಲು ಶುರುವಾಯಿತು. “ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು’ ಎಂಬ ಗಾಯನದ ಸ್ವರ ಹೊರಹೊಮ್ಮಿತು. ಮನಸ್ಸಿನಲ್ಲಿ ಏನೋ ಒಂದು ಮೌನ, ಸಂತಸ, ಬೆಚ್ಚಗಿನ ಕನಸುಗಳು.

ಮಳೆ ನಿಂತ ಅನಂತರ ಕಾಮನ ಬಿಲ್ಲಿನ ಸೊಗಸನ್ನು ನೋಡಲು ಕಣ್ಣಿಗೆ ಇಂಪು. ಜತೆಗೆ ಬಾಲ್ಯದ ನೆನಪುಗಳು ತುಂಬಿ ತುಂಬಿವೆ. ನೀರಿನಲ್ಲಿ ಆಟವಾಡಿ ದೋಣಿ ಬಿಡುವುದೆಂದರೆ ಎಲ್ಲಿಲ್ಲದ ತವಕ. ಮಳೆಗಾಲವನ್ನು ರೈತರ ಹಬ್ಬವೆಂದೇ ಹೇಳಬಹುದು. ಇದರ ಆಗಮನದಿಂದ ರೈತನ ಮುಖದಲ್ಲಿ ಮಂದಹಾಸ ಜತೆಗೆ ಉತ್ತಮ ಫಲ ಪಡೆಯುವ ಭವಿಷ್ಯದ ಕನಸು, ಇವೆಲ್ಲವನ್ನು ನನಸಾಗಿಸುವ ಈ ದಿನ ಅವರ ಬಾಳಿಗೆ ಸುದಿನ. ಅದೇ ರೀತಿ ಅತೀ ಹೆಚ್ಚು ಮಳೆ ಸುರಿದರು ನೆರೆಗೆ ಬೆಳೆ ಹಾನಿ ಆಗುವ ಸಂಭವ ಅತೀ ಹೆಚ್ಚು. ಮತ್ತೂಂದು ಕಡೆ ಮಕ್ಕಳಿಗೆ ಕೊಂಚ ಖುಷಿ, ವರುಣನ ಆರ್ಭಟದಿಂದ ಎಲ್ಲಿ ಶಾಲೆಗೆ ರಜೆ ಸಿಗುತ್ತದೆ ಎನ್ನುವ ಕಾತರ.

ಮತ್ತೂಂದೆಡೆ ಕೆರೆ, ಬಾವಿ ಇವೆಲ್ಲವೂ ಕೂಡ ತುಂಬಿ ತುಳುಕುತ್ತಿರುತ್ತವೆ. ಈ ಸಮಯದಲ್ಲಿ ಮೀನು, ಸಿಗಡಿ, ಇದನ್ನೆಲ್ಲ ಹಿಡಿಯುವ ಮಜಾನೇ ಬೇರೆ. ಅದರಲ್ಲಿ ಸಿಗುವ ಖುಷಿ ಮತ್ತೆ ಯಾವುದರಲ್ಲೂ ಪಡೆಯಲು ಅಸಾಧ್ಯ. ಜೋರಾಗಿ ಗಾಳಿಯ ಸದ್ದು ಕೇಳಿದರೆ ಸಾಕು ಎಲ್ಲರೂ ಮಾವಿನ ಹಣ್ಣಿನ ಬುಡದಲ್ಲಿ ತಾ ಮುಂದು ನಾ ಮುಂದು ಎಂದು ಓಡಿ ಹೋಗಿ ಜಗಳವಾಡುವ ಸಂಭ್ರಮ.

ವರ್ಷದಲ್ಲಿ ಒಂದು ಬಾರಿ ಮಳೆಯನ್ನು ಸಂಭ್ರಮವನ್ನು ಅನುಭವಿಸದಿದ್ದರೆ ಆ ವರ್ಷಕ್ಕೆ ಹರುಷವೇ ಇಲ್ಲ. ಈ ರೀತಿಯಾಗಿ ಮಳೆಯಲ್ಲಿ ಪಡೆದ ಅನುಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರು ಮಳೆ ಖುಷಿಯನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಹೀಗೆ ಮಳೆಗಾಲದ ಪ್ರತಿಯೊಂದು ಅನುಭವ ಹೊಸ ತನದ ಜತೆಗೆ ಮನಸ್ಸಿಗೆ ಉಲ್ಲಾಸವನ್ನು ಮತ್ತು ಮುದವನ್ನು ನೀಡುತ್ತದೆ. ಪತ್ರಿಯೊಂದು ಸಣ್ಣ ಪುಟ್ಟ ವಿಷಯದಲ್ಲಿಯೂ ಸಂಭ್ರಮಿಸಲು ಮಳೆರಾಯ ಮುಖ್ಯ ಕಾರಣನಾಗಿರುತ್ತಾನೆ.

 

 ಚೈತನ್ಯ ಕೊಟ್ಟಾರಿ

ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.