ಸಕ್ಕರೆ ಕಾರ್ಖಾನೆ ಎನ್ಎಸ್ಎಸ್ಕೆ ಮಾರ್ಗ ಅನುಸರಿಸಲಿವೆ : ಸಚಿವ ಚವ್ಹಾ ಣ ವಿಶ್ವಾಸ
Team Udayavani, Jun 7, 2021, 5:21 PM IST
ಬೀದರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಎನ್ಎಸ್ಎಸ್ ಕೆ ಮಾದರಿಯಲ್ಲಿ ರೈತರ ಪರವಾದ ನಿಲುವು ಪ್ರಕಟಿಸುವ ವಿಶ್ವಾಸವಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.
ದಿ| ಗುರುಪಾದಪ್ಪ ನಾಗಮಾರಪಳ್ಳಿಯವರು ಹಾಗೂ ಅವರ ಮಗ ಉಮಾಕಾಂತ್ ನಾಗಮಾರಪಳ್ಳಿ ಅವರು ಯಾವಾಗಲೂ ರೈತರ ಪರವಾದ ನಿಲುವು ಹೊಂದಿದ್ದರು. 2019-20ರಲ್ಲಿ ಉಮಾಕಾಂತ ಅವರು ಎನ್ಎಸ್ ಎಸ್ಕೆ ಅಧ್ಯಕ್ಷರಾಗಿದ್ದ ಅವ ಧಿಯಲ್ಲಿ ಜನಪ್ರತಿನಿ ಧಿಗಳು ಹಾಗೂ ರೈತರ ಅಭಿಪ್ರಾಯದಂತೆ ಪ್ರತಿ ಟನ್ ಕಬ್ಬಿಗೆ 2,250 ನಿಗದಿ ಮಾಡಲಾಗಿತ್ತು. ಅದನ್ನು ತಾವು ಒಪ್ಪಿದರಲ್ಲದೆ ಮುಂದಾಳತ್ವ ವಹಿಸಿ ಎಲ್ಲ ಕಾರ್ಖಾನೆಗಳು ಒಪ್ಪಿಗೆ ನೀಡುವಂತೆ ಮನವೊಲಿಕೆ ಮಾಡಿಸಿದ್ದರು.
ಎಲ್ಲ ಕಾರ್ಖಾನೆಗಳು ಸಭೆಯ ನಿರ್ಣಯದಂತೆ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಿದ್ದವು. 2020-21ನೇ ಸಾಲಿಗೆ 2,400 ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಇದುವೆರೆಗೂ ಯಾವ ಸಕ್ಕರೆ ಕಾರ್ಖಾನೆಯೂ ರೈತರಿಗೆ ಪಾವತಿ ಮಾಡಿರಲಿಲ್ಲ. ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಕರೆದ ಸಭೆಗೂ ಎನ್ಎಸ್ಎಸ್ಕೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ ಅವರನ್ನು ಹೊರತುಪಡಿಸಿ ಇತರೆ ಅಧ್ಯಕ್ಷರು ಖುದ್ದು ಹಾಜರಿರಲಿಲ್ಲ. ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಚಿವರು ಉಮಾಕಾಂತ ನಾಗಮಾರಪಳ್ಳಿಯವರು ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರಂತೆ ರೈತಪರ ತೆಗೆದುಕೊಂಡ ಸಭೆಯ ನಿರ್ಣಯವನ್ನು ಸಾಕಾರಗೊಳಿಸಿ ತಮಗಿರುವ ರೈತಪರ ವ್ಯಕ್ತಪಡಿಸಿದ್ದನ್ನು ಸಚಿವರು ಕೊಂಡಾಡಿದ್ದರು.
2019-20ನೇ ಸಾಲಿನ ಕಬ್ಬಿನ ಬೆಲೆ ನಿಗದಿ ಮಾಡುವ ಸಭೆಯ ನಿರ್ಣಯವನ್ನು ಎತ್ತಿ ಹಿಡಿದು ರೈತರಿಗೆ ಹಣ ಪಾವತಿ ಮಾಡುವಲ್ಲಿ ಉಮಾಕಾಂತ ನಾಗಮಾರಪಳ್ಳಿಯವರ ಪಾತ್ರ ಹಿರಿದೆಂದು ಬಣ್ಣಿಸಿದರು. ಲಾಕ್ಡೌನ್ನಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ರೈತರೊಂದಿಗೆ ನಿಲ್ಲಬೇಕಿದೆ. ನಾನು ಸದಾ ರೈತರೊಂದಿಗೆ ಇದ್ದು, ಸರ್ಕಾರವೂ ರೈತರ ಪರವಾಗಿದೆ ಎಂದು ಹೇಳಿದ್ದು, ಉಳಿದ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಹಣ ಪಾವತಿಸುವ ಬಗ್ಗೆ ಸ್ಪಷ್ಟಪಡಿಸದೇ ಇದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರಿಗೆ ಸಚಿವರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ