ಕಾಡಿನಲ್ಲಿ ಹರಿವ ಹೊಳೆ ರಕ್ಷಣೆಗೆ ಪ್ರತಿಜ್ಞೆ

ಪರಿಸರ-ಜನಜೀವನಕ್ಕೆ ತೊಂದರೆ ತರುವ ಯಾವುದೇ ಅಣೆಕಟ್ಟು-ಯೋಜನೆ ಜಾರಿಗೆ ತರದಿರಲು ನಿರ್ಧಾರ

Team Udayavani, Jun 7, 2021, 8:51 PM IST

6srs2

ಶಿರಸಿ: ತಾಲೂಕಿನ ಸಾಲ್ಕಣಿ ಹಾಗೂ ವಾನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹರಿದು, ಮುಂದೆ ಬೇಡ್ತಿನದಿ ಸೇರುವ ಪಟ್ಟಣ ಹೊಳೆಯ ಸಮೃದ್ಧ ಕಣಿವೆಯ ಪರಿಸರದ ಸಂರಕ್ಷಣೆಗೆ ಸದಾ ಬದ್ಧವಾಗಿರಲು ಒಮ್ಮತದ ನಿರ್ಧಾರವನ್ನು ಸ್ಥಳೀಯ ಗ್ರಾಮಸ್ಥರು ಕೈಗೊಂಡರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಲ್ಕಣಿ ಪಂಚಾಯತವು ಹಮ್ಮಿಕೊಂಡ ಸಾಂಕೇತಿಕ ಕಾರ್ಯಕ್ರಮದಲ್ಲಿ ಈ ಪ್ರದೇಶದ ಪರಿಸರ ಹಾಗೂ ಜನಜೀವನಕ್ಕೆ ತೊಂದರೆ ತರುವ ಯಾವುದೇ ಅಣೆಕಟ್ಟು ಅಥವಾ ನದಿತಿರುವು ಯೋಜನೆಗಳನ್ನು ಹಮ್ಮಿಕೊಳ್ಳಬಾರದಾಗಿ ಒಮ್ಮತದ ಪಂಚಾಯತ ನಿರ್ಣಯವನ್ನು ಕೂಡ ಮಾಡಲಾಯಿತು.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಈ ಪ್ರದೇಶದ ಸಮೃದ್ಧ ಕೃಷಿ ಪರಂಪರೆ ಹಾಗೂ ಜನರ ಪರಿಸರ ಜ್ಞಾನವನ್ನು ಮುಂಬರುವ ತಲೆಮಾರಿಗೂ ಈ ಕಾಳಜಿಯನ್ನು ತಲುಪಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ತಿಮ್ಮಣ್ಣ ಹೆಗಡೆ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ, ಸ್ವತ್ಛತೆ ಇತ್ಯಾದಿ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತು ಮುಂಬರುವ ದಿನಗಳಲ್ಲಿ ಗ್ರಾಪಂ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸುಮಾ ಸತೀಶ ಹೆಗಡೆ, ಸದಸ್ಯರಾದ ಶ್ರೀಧರ ಹೆಗಡೆ, ಗಜಾನನ ನಾಯ್ಕ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶಿಗೇಹಳ್ಳಿ, ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ ಉಪಸ್ಥಿತರಿದ್ದರು. ಪಂಚಾಯತ ಗ್ರಾಮಾಭಿವೃದ್ಧಿ ಅಧಿಕಾರಿ ಯೋಗಿತಾ ಹೆಗಡೆ ನಿರೂಪಿಸಿದರು.

ಸಾಂಕೇತಿಕವಾಗಿ ಪಂಚಾಯತ ಆವರಣದ ಔಷ ಧವನದಲ್ಲಿ ಗಿಡ ನೆಡಲಾಯಿತು. ಬಳಿಕ ಸಮೀಪದ ಪಟ್ಟಣಹೊಳೆಯ ಮುರೇಗಾರ್‌ ಜಲಪಾತದ ಬಳಿಯ ನದಿಪಾತ್ರಕ್ಕೆ ಗ್ರಾಮಸ್ಥರ ನಿಯೋಗ ಭೇಟಿ ನೀಡಿತು. ಅಲ್ಲಿನ ಪರಿಸರದ ಸಮೀಕ್ಷೆ ನಡೆಸಲಾಯಿತು. ಮುರೇಗಾರ್‌ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಣಪತಿ ಹೆಗಡೆ ಮುರೇಗಾರ್‌ ಅರಣ್ಯ ಸಮಿತಿ ಕಾರ್ಯಚಟುವಟಿಕೆ ಪರಿಚಯಿಸಿದರು.

ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ್‌ ಈ ಪ್ರದೇಶದ ಕೃಷಿ ಪರಿಸ್ಥಿತಿ ಹಾಗೂ ಪರಿಸರದ ಪಾರಂಪರಿಕ ಮಹತ್ವ ವಿವರಿಸಿದರು. ಬೇಡ್ತಿ-ಅಘನಾಶಿನಿ ಕೊಳ್ಳಸಮಿತಿ ಉಪಾಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ಮನಳ್ಳಿ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಪರಿಸರ ನಡೆಯುತ್ತಿರುವ ಸಂರಕ್ಷಣಾ ಕಾರ್ಯ ಪ್ರಸ್ತಾಪಿಸಿ, ಈ ಪ್ರದೇಶದಲ್ಲಿ ಯಾವುದೇ ವಿನಾಶಕಾರಿ ಯೋಜನೆಗಳು ಬರದಂತೆ ಜನರು ಸದಾ ಜಾಗೃತರಾಗಿರಬೇಕು ಎಂದರು.

ನರಸಿಂಹ ಹೆಗಡೆ ವಾನಳ್ಳಿ ಮಾತನಾಡಿ, ಈ ಕಣಿವೆಯ ಕಾಡಿನ ವೈಶಿಷ್ಠ, ಅಪರೂಪದ ಜೀವವೈವಿಧ್ಯ, ಪಾರಂಪರಿಕ ಕೃಷಿ ಹಾಗೂ ಕರಕುಶಲ ಪದ್ಧತಿ, ಒಕ್ಕಲಿಗ ವನವಾಸಿಗಳ ಪರಿಸರ ಕಾಳಜಿ ಕುರಿತು ಮಾಹಿತಿ ನೀಡಿದರು. ವನ್ಯಜೀವಿತಜ್ಞ ಬಾಲಚಂದ್ರ ಸಾಯಿಮನೆ, ರಮಾಕಾಂತ ಮಂಡೇಮನೆ, ಕೇಶವ ಕೊರ್ಸೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.