ಕಾವ್ಯ ಮಲ್ಲಿಗೆ: ಮಳೆ ನಿಂತ ಮೇಲೆ
Team Udayavani, Jun 14, 2021, 8:00 AM IST
ಬಿಡದೆ.. ಧೋ..!! ಎಂದು
ಸುರಿವ ಮಳೆ ಬಿಡಬಾರದೇ ಬೇಗ
ಎಂದು ಮನ ಹಂಬಲಿಸುತ್ತಿತ್ತು.
ನನ್ನ ಯಾವ ಗೋಜಿಗೂ,
ತಲೆ ಕೆಡಿಸಿಕೊಳ್ಳದೆ ತನ್ನ
ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.
ತಲೆಯೆತ್ತಿ ನೋಡಿದರೆ,
ಆಗಸದ ತುಂಬೆಲ್ಲಾ ಕಪ್ಪನೆ ಮೋಡ.
ನಮ್ಮ ತೋಟದ ಮನೆಯ ಮಣ್ಣಿನ
ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.
ಮಣ್ಣಿನ ವಾಸನೆಯ ಜತೆ,
ಮೈದುಂಬಿ ನಿಂತ ವನಸಿರಿ ನೋಡ.
ಮರೆತು ನಲಿದಿದೆ ಮನ, ಎಲ್ಲ ದುಗುಡ.
ಮಲೆನಾಡ ವನಸಿರಿಯಂತೆ
ರೋಚಕ ಹೆಣ್ಣಿನ ಚೆಲುವು.
ಗಂಡಿನ ಪ್ರೀತಿಯ ವರ್ಷಧಾರೆ
ಸಿಕ್ಕಾಗಲೆ ತಾನೇ, ಆ ಚೆಂದಕೆ
ಇನ್ನಷ್ಟೂ ಮೋಹಕವು.
ಕೆಸರಲ್ಲಿ ಆಡಬೇಕೆಂಬ
ಆಸೆ ಕಾಡಿತ್ತು ಮಗುವಿನಂತೆ,
ಕಂಡವರು ನಕ್ಕಾರು,
ಎಂದು ಸುಮ್ಮನೆ ನಿಂತೆ.
ಅದೇಕೋ ಗೊತ್ತಿಲ್ಲ,
ಮಳೆ ನಿಂತ ಮೇಲೆ… ಮತ್ತೆ
ಮಳೆ ಬರಬಾರದೇ ಎಂದು
ನಾ ಕಾಯುತ್ತಾ…. ನಿಂತೆ..!!
ವಿದ್ಯಾಶ್ರೀ ಬಿ.
ಬಳ್ಳಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ