ಯೋಗದಿಂದ ಬಾಯಿಯ ದುರ್ವಾಸನೆ ದೂರಗೊಳಿಸಿ
ನಾಲಗೆಯನ್ನು ಮುಂದಕ್ಕೆ ಚಾಚಿ ಬಾಯಿಯಿಂದ ಉಸಿರನ್ನು ತೆಗೆದುಕೊಂಡು ಮೂಗಿನ ಮೂಲಕ ಹೊರಬಿಡುವುದು.
Team Udayavani, Jun 14, 2021, 8:32 AM IST
ದೇಹಾರೋಗ್ಯದ ಜತೆಗೆ ಬಾಯಿಯ ಆರೋಗ್ಯ ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಬಾಯಿಯ ಸ್ವಚ್ಛ ತೆಗೆ ಪ್ರಾಧಾನ್ಯತೆ ನೀಡಬೇಕು. ಯೋಗಾಭ್ಯಾಸದಿಂದ ಶಾರೀರಿಕವಾಗಿ ಸಮಸ್ಯೆ ನಿವಾರಿಸಬಹುದು. ಯೋಗದಿಂದ ಶರೀರ ಮತ್ತು ಅಂತರಂಗದ ಭಾಗಗಳನ್ನು ಸ್ವಚ್ಛ ಮಾಡಬಹುದು. ಧೂಮಪಾನ, ಮದ್ಯಪಾನದಿಂದ ಬಾಯಿ ವಾಸನೆ ಹೆಚ್ಚುತ್ತದೆ. ನಾಲಗೆ ಮೇಲಿನ ಬಿಳಿ ಪದರದಿಂದ ಸೂಕ್ಷ್ಮ ಕ್ರಿಮಿಗಳು ಶೇಖರಣೆಯಾಗುತ್ತದೆ. ಬಾಯಿ ಒಣಗುವಿಕೆಯಿಂದ ದುರ್ವಾಸನೆ ಹೆಚ್ಚಾಗುತ್ತದೆ.
ಕಪಾಲಭಾತಿ ಪ್ರಾಣಾಯಾಮ
ಬೆನ್ನು ನೇರ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳುವುದು. ನಿಮ್ಮ ಅಂಗೈಯನ್ನು ತೊಡೆಯ ಮೇಲೆ ಆಕಾಶ ಮುಖವಾಗಿ ಇಟ್ಟು ಕೊಳ್ಳುವುದು. ಅನಂತರ ದೀರ್ಘ ಉಸಿರಾಟ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ದೂರಗೊಳಿಸಬಹುದಾಗಿದೆ.
ಯೋಗಮುದ್ರ
ಪದ್ಮಾಸನದಲ್ಲಿ ಕುಳಿತುಕೊಳ್ಳುವುದು. ಕಣ್ಣು ಮುಚ್ಚಿಕೊಂಡು ಹಣೆಯು ನೆಲವನ್ನು ತಾಕುವವರೆಗೂ ಮುಂದೆ ಬಾಗಿಸಬೇಕು. ಇದು ಬಾಯಿಯ ದುರ್ವಾಸನೆಯ ನಿರ್ಮೂಲನೆಗೆ ಸಹಕಾರಿಯಾಗಿದೆ.
ಶೀತಲೀ ಪ್ರಾಣಾಯಾಮ
ನಾಲಗೆಯನ್ನು ಮುಂದಕ್ಕೆ ಚಾಚಿ ಬಾಯಿಯಿಂದ ಉಸಿರನ್ನು ತೆಗೆದುಕೊಂಡು ಮೂಗಿನ ಮೂಲಕ ಹೊರಬಿಡುವುದು.
ಶೀತಕಾರಿ
ಪ್ರಾಣಾಯಾಮ ನಾಲಗೆಯನ್ನು ಹಲ್ಲುಗಳಿಗೆ ಒತ್ತರಿಸಿ ಉಸಿರನ್ನು ತೆಗೆದುಕೊಂಡು ಅನಂತರ ಬಾಯಿ ಮುಚ್ಚಿ ಮೂಗಿನ ಮೂಲಕ ಉಸಿರನ್ನು ಬಿಡುವುದು. ಈ ಅಭ್ಯಾಸವನ್ನು 5ರಿಂದ 10 ಸಲ ಮಾಡುತ್ತಾ ಬಂದರೆ ಈ ಸಮಸ್ಯೆಯನ್ನು ದೂರಗೊಳಿಸಬಹುದಾಗಿದೆ.
ಈ ದುರ್ವಾಸನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಏಕೆಂದರೆ ಒತ್ತಡ ಮತ್ತು ವಿಪರೀತ ಕೆಲಸದಿಂದ ಶರೀರದ ಸಮತೋಲನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಯೋಗ ಸಹಕಾರಿಯಾಗುವುದರ ಜತೆಗೆ ಈ ಎಲ್ಲ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. ಹಾಗೆಯೇ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್