ಕೋವಿಡ್ ವಾರಿಯರ್ಗೆ ಒಲಿಂಪಿಕ್ಸ್ ಪದಕ ಅರ್ಪಣೆ: ಮನ್ಪ್ರೀತ್ ಗುರಿ
Team Udayavani, Jun 15, 2021, 6:50 AM IST
ಬೆಂಗಳೂರು : ಟೋಕಿಯೊ ಒಲಿಂಪಿಕ್ಸ್ನಲ್ಲಿ ಹಾಕಿ ಪದಕವೊಂದನ್ನು ಗೆದ್ದು ಇದನ್ನು ಕೋವಿಡ್ ವಾರಿಯರ್ಗೆ ಅರ್ಪಿಸಬೇಕು ಎಂಬುದಾಗಿ ಭಾರತ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.
“ಟೋಕಿಯೊ ಒಲಿಂಪಿಕ್ಸ್ಗಾಗಿ ನಾವು ಭರದ ಸಿದ್ಧತೆ ಮಾಡುತ್ತಿದ್ದೇವೆ. ನಮ್ಮ ಗುರಿ ಪೋಡಿಯಂ ಮೇಲೇರಿ ನಿಲ್ಲುವುದು ಹಾಗೂ ಈ ಪದಕವನ್ನು ಕೋವಿಡ್ ವಿರುದ್ಧ ಹೋರಾಡಿದ ನಿಜವಾದ ಹೀರೋಗಳಾದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬಂದಿಗೆ ಅರ್ಪಿ ಸುವುದು. ದೇಶವನ್ನು ಈ ಮಹಾ ಮಾರಿಯಿಂದ ಬಚಾವ್ ಮಾಡು ವಲ್ಲಿ ಇವರು ವಹಿಸಿದ ಶ್ರಮಕ್ಕೆ ಬೆಲೆ ಕಟ್ಟಲಾಗದು. ಥ್ಯಾಂಕ್ಯೂ, ಜೈ ಹಿಂದ್’ ಎಂದು ಹೇಳಿರುವ ಮನ್ಪ್ರೀತ್ ಸಿಂಗ್ ಅವರ ವೀಡಿಯೋವನ್ನು “ಹಾಕಿ ಇಂಡಿಯಾ’ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಅಭ್ಯಾಸ
ಹಾಕಿಪಟುಗಳೆಲ್ಲ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ. ಎಲ್ಲರೂ ಗರಿಷ್ಠ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಕಾತರರಾಗಿದ್ದಾರೆ ಎಂದು ಮನ್ಪ್ರೀತ್ ಹೇಳಿದರು.
ಭಾರತ ಈ ವರೆಗೆ ಒಲಿಂಪಿಕ್ಸ್ ಹಾಕಿಯಲ್ಲಿ 8 ಚಿನ್ನದ ಪದಕ ಗೆದ್ದಿದೆ. ಆದರೆ 1980ರ ಬಳಿಕ ಬಂಗಾರದ ಬರಗಾಲ ಎದುರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ