ಸಂಚಾರಿ ವಿಜಯ್ ಅಂತ್ಯಕ್ರಿಯೆಯಲ್ಲಿ ಪೊಲೀಸರಿಂದ ಗೌರವ ಸಮರ್ಪಣೆ
Team Udayavani, Jun 15, 2021, 3:59 PM IST
ಚಿಕ್ಕಮಗಳೂರು : ನಟ ಸಂಚಾರಿ ವಿಜಯ್ ಪಾರ್ಥಿವ ಶರೀರ ಚಿಕ್ಕಮಗಳೂರಿಗೆ ತಲುಪಿದ್ದು, ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಪೊಲೀಸರು ಗೌರವ ಸಮರ್ಪಣೆ ಮಾಡಿದ್ದಾರೆ.
ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದ್ದಾರೆ. ಇನ್ನು ಸರಕಾರಿ ಗೌರವದ ಬಳಿಕ ವೀರಶೈವ ಲಿಂಗಾಯತ ಧಾರ್ಮಿಕ ವಿಧಿಯನ್ನು ಕುಟ್ಟೂರು ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಸಲಾಗುತ್ತದೆ. ಶವ ಸಂಸ್ಕಾರ, ಬಿಲ್ವಪತ್ರೆ ಬಳಸಿ ಪೂಜೆ ಮಾಡಲಾಗುತ್ತಿದೆ.
ಸಂಚಾರಿ ವಿಜಯ್ ಸಹೋದರರು, ಕುಟುಂಬಸ್ಥರಿಂದ ಪೂಜೆ ಮಾಡಲಾಗಿದ್ದು, ಅಂತ್ಯ ಕ್ರಿಯೆ ನಡೆಯುವ ಸ್ಥಳಕ್ಕೆ ಸಚಿವ ಮಾಧುಸ್ವಾಮಿ, ಶಾಸಕರಾದ ಸಿಟಿ ರವಿ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವರು ಆಗಮಿಸಿದ್ದರು.