ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ
Team Udayavani, Jun 15, 2021, 8:24 PM IST
ದಾವಣಗೆರೆ: ಕೋವಿಡ್ ಕೇರ್ ಸೆಂಟರ್ಗೆ ತೆರಳಲು ನಿರಾಕರಿಸಿದ ಕೊರೊನಾ ಸೋಂಕಿತನೋರ್ವ ವಿಷ ಕುಡಿದು ಸಾವನ್ನಪ್ಪುವುದಾಗಿ ಬೆದರಿಸಿದ ಘಟನೆ ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಮಂಗಳವಾರ (ಜೂನ್ 15) ನಡೆದಿದೆ.
ಭಾನುವಳ್ಳಿ ಗ್ರಾಮದ ಒಂದೇ ಮನೆಯ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಗ ಮತ್ತು ಸೊಸೆಯನ್ನ ಬೇರೆ ಕಡೆಗೆ ಕಳಿಸಿದ್ದ ವ್ಯಕ್ತಿಯನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್ಗೆ ಕರೆದೊಯ್ಯಲು ತೆರಳಿದ್ದ ಸಂದರ್ಭದಲ್ಲಿ ಆತ ಕೇರ್ ಸೆಂಟರ್ಗೆ ದಾಖಲಾಗಲು ನಿರಾಕರಿಸಿದ್ದಾನೆ.
ಪಾಸಿಟಿವ್ ಬಂದ ಆತನಿಗೆ ಕೇರ್ ಸೆಂಟರ್ಗೆ ದಾಖಲಾಗುವಂತೆ ಎಷ್ಟೇ ಮನವೊಲಿಸಿದರೂ ಬಿಲ್ಕುಲ್ ಒಪ್ಪದ ಆತ ನನಗೆ ಏನೂ ಆಗಿಲ್ಲ. ಆರೋಗ್ಯವಾಗಿಯೇ ಇದ್ದೇನೆ ಎಂದು ವಾದಿಸಿದ್ದಾನೆ. ಕೊನೆಗೆ ಮನೆಯ ಒಳಗನಿಂದ ವಿಷದ ಬಾಟಲಿ ತಂದು ಕುಡಿದು ಸಾಯುವುದಾಗಿ ಹೇಳಿದ್ದಾನೆ. ಅಧಿಕಾರಿಗಳ ತಂಡ ಸಮಾಧಾನ ಪಡಿಸಿ, ವಿಷದ ಬಾಟಲಿ ಕಿತ್ತ್ತುಕೊಂಡಿದ್ದಾರೆ. ಎಷ್ಟೇ ಮನವೊಲಿಕೆ ಮಾಡಿದರೂ ಆತ ಕೇರ್ ಸೆಂಟರ್ಗೆ ತೆರಳಲಿಕ್ಕೆ ಬಿಲ್ಕುಲ್ ಒಪ್ಪಲಿಲ್ಲ ಹಾಗಾಗಿ ಅಽಕಾರಿಗಳ ತಂಡ ಬರಿಗೈಯಲ್ಲಿ ವಾಪಾಸ್ ಆಗಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ