ಲಗ್ಗೆರೆಯಲ್ಲಿ ಬಡ ಕಲಾವಿದರಿಗೆ ನೆರವು
Team Udayavani, Jun 17, 2021, 6:31 PM IST
ದೊಡ್ಡಬಳ್ಳಾಪುರ: ಕಲಾವಿದರ ನೆರವಿಗೆ ಮತ್ತಷ್ಟು ದಾನಿಗಳು ಮುಂದೆ ಬರಬೇಕು. ಉಳ್ಳವರು ಅಸಹಾಯಕರಿಗೆ ಸಾಧ್ಯವಾದಷ್ಟು ನೆರವು ನೀಡಿದರೆ ಮಾತ್ರವೇ ಕೊರೋನಾ ಸಂಕಷ್ಟದ ದಿನಗಳಲ್ಲಿ ಬಡವರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಬಿಜೆಪಿ ಮುಖಂಡಲಗ್ಗೆರೆ ನಾರಾಯಣಸ್ವಾಮಿ ತಿಳಿಸಿದರು.
ಲಗ್ಗೆರೆಯಲ್ಲಿ ಬಾಲನಟಿ ಭೈರವಿ ನೇತೃತ್ವದಲ್ಲಿಗುರುತು ಚೀಟಿ ಇಲ್ಲದ 50ಕ್ಕೂ ಹೆಚ್ಚುಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಕಲಾವಿದರ ಬವಣೆ ನೋಡಿ ಮನಸ್ಸಿಗೆ ನೋವು: ಬಾಲನಟಿ ಭೈರವಿ ಮಾತನಾಡಿ, ನಾನುಪ್ರಮುಖ ಪಾತ್ರದಲ್ಲಿ ನಟಿಸಿರುವ ಶವಸಂಸ್ಕಾರ, ಚಾರಣ ಮತ್ತು ಮಸಣದ ಚಿತ್ರಗಳಲ್ಲಿ ಗಳಿಸಿದಹಣವನ್ನು ನನ್ನ ಹುಟ್ಟುಹಬ್ಬದ ಆಚರಣೆಗಾಗಿ ಕೂಡಿಟ್ಟಿದ್ದೆ. ಅದರೆ, ಚಿತ್ರರಂಗದ ಗುರುತು ಚೀಟಿ ಇಲ್ಲದ ಕಲಾವಿದರ ಬವಣೆಯ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಆ ಹಣಮತ್ತು ನಮ್ಮ ತಂದೆ ಪತ್ರಿಕಾ ವಿತರಕಹುಲುಕುಂಟೆ ಮಹೇಶ ಪತ್ರಿಕಾಸರಬರಾಜಿನಿಂದ ಗಳಿಸಿದ್ದ ಹಣವನ್ನು ಒಗ್ಗೂಡಿಸಿಐವತ್ತು ಜನರಿಗೆ ನೆರವು ನೀಡಿದ್ದೇವೆ ಎಂದುತಿಳಿಸಿದರು.
ನೆರವು ಕಲ್ಪಿಸಲು ಪ್ರಯತ್ನ: ಪತ್ರಿಕಾ ವಿತರಕಹುಲುಕುಂಟೆ ಮಹೇಶ್ ಮಾತನಾಡಿ, ಕಳೆದವರ್ಷ ನಾವು 150ಕ್ಕೂ ಹೆಚ್ಚು ಮಂದಿಚಿತ್ರಮಂದಿರ ಸಿಬ್ಬಂದಿ, ಕಲಾವಿದರಿಗೆ ನೆರವು ನೀಡಿದ್ದೆವು. ಈ ಬಾರಿ ಎರಡು ಹಂತದಲ್ಲಿಸುಮಾರು 100 ಜನ ಬಡ ಕಲಾವಿದರಿಗೆ ನೆರವುನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಕಲಾವಿದರಿಗೆ ನೆರವು ಕಲ್ಪಿಸಲು ಪ್ರಯತ್ನಮಾಡುತ್ತೇವೆ ಎಂದರು.ಸಮಾರಂಭದಲ್ಲಿ ನಿರ್ದೇಶಕ ಕೃಷ್ಣಮೂರ್ತಿ,ರಮೇಶ್ ಜಯಸಿಂಹ, ಯುವ ಮುಖಂಡಬಾಬು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ