ದಲಿತರು-ಸವರ್ಣಿಯರ ಆರೋಪ-ಪ್ರತ್ಯಾರೋಪ
Team Udayavani, Jun 18, 2021, 7:38 PM IST
ಮುದ್ದೇಬಿಹಾಳ: ಪಿಎಸೈ ಎಂ.ಬಿ. ಬಿರಾದಾರ ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು ರಾಜ್ಯ ಗೃಹ ಸಚಿವರಿಗೆ ಬರೆದ ಮನವಿಯನ್ನು ಗುರುವಾರ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಅವರಿಗೆ ಸಲ್ಲಿಸಿದರು. ದಲಿತರ ಮೇಲೆ ಅನ್ಯಾಯವಾದಾಗ ದೂರು ಕೊಡಲು ಠಾಣೆಗೆ ಹೋದರೆ ಸರಿಯಾಗಿ ದೂರು ಸ್ವೀಕರಿಸದೆ ನಿಮ್ಮ ಊರಲ್ಲೇ ಕೇಸ್ ಬಗೆಹರಿಸಿಕೊಳ್ಳಿ ಅಂತ ಉಡಾಫೆ ಉತ್ತರ ಕೊಡುತ್ತಾರೆ.
ದಲಿತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಕೇಸ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೂjರ, ಹುನಕುಂಟಿ ಗ್ರಾಮಗಳಲ್ಲಿ ದಲಿತರ ಮೇಲೆ ಸವರ್ಣಿಯರಿಂದ ದೌರ್ಜನ್ಯ ಮತ್ತು ಜಾತಿನಿಂದನೆ ಕೇಸು ದಾಖಲಿಸಲು ಉದ್ದೇಶಪೂರ್ವಕ ನಿರ್ಲಕ್ಷé ಮಾಡಿದ್ದಾರೆ.
ದಲಿತರು ಯಾವುದೇ ತಪ್ಪು ಮಾಡದಿದ್ದರೂ ಸವರ್ಣಿಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದರೂ ಉದ್ದೇಶಪೂರ್ವಕ ದಲಿತರ ಮೇಲೆ ಕೇಸ್ ಗಳನ್ನು ಹಾಕುತ್ತಾರೆ. ದಲಿತರ ಮೇಲೆ ದೌರ್ಜನ್ಯವಾದಾಗ ದೂರು ಕೊಡಲು ಠಾಣೆಗೆ ಹೋದಾಗ ಕೇಸ್ ಹಾಕಬೇಡಿ ಎಂದು ಬೈದು ಕಳುಹಿಸುತ್ತಾರೆ. ಇವರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು.
ನಿರ್ಲಕ್ಷé ವಹಿಸಿದಲ್ಲಿ ಠಾಣೆ ಮುಂದೆ ದಲಿತಪರ, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಧರಣಿ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುಖಂಡರಾದ ಡಿ.ಬಿ. ಮುದೂರ, ಹರೀಶ ನಾಟೀಕಾರ, ಸಿ.ಜಿ. ವಿಜಯಕರ, ಬಸವರಾಜ ಪೂಜಾರಿ ಸಿದ್ದಾಪುರ, ಪ್ರಕಾಶ ಚಲವಾದಿ ಸರೂರ, ಖಯ್ಯೂಮ ಚೌದ್ರಿ, ಶೇಕಪ್ಪ ಮಾದರ, ಹುಲಗಪ್ಪ ನಾಗರಬೆಟ್ಟ, ಯಲ್ಲಪ್ಪ ಚಲವಾದಿ, ಹನುಮಂತ ಮಾದರ ಸೇರಿ ಹಲವರು ಇದ್ದರು. ಮನವಿ ಸಲ್ಲಿಕೆಗೂ ಮುನ್ನ ಮಿನಿ ವಿಧಾನಸೌಧವರೆಗೆ ಹಲಗೆ ಬಾರಿಸುತ್ತ ರ್ಯಾಲಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
MUST WATCH
ಹೊಸ ಸೇರ್ಪಡೆ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!