ಮಳೆಗಾಲದಲ್ಲಿ ಕಾಲುಗಳ ಬಗ್ಗೆ ಇರಲಿ ಕಾಳಜಿ 

ಅರಶಿಣ ಮಿಶ್ರಣ ಹಚ್ಚುವುದರಿಂದ ಉರಿ, ಚರ್ಮ ಏಳಕುವುದನ್ನು ತಡೆಗಟ್ಟಬಹುದು.

Team Udayavani, Jun 25, 2021, 2:55 PM IST

ಮಳೆಗಾಲದಲ್ಲಿ ಕಾಲುಗಳ ಬಗ್ಗೆ ಇರಲಿ ಕಾಳಜಿ 

ಮಳೆಗಾಲ ಎಂದರೆ ಸಾಕು, ಮನಸ್ಸಿಗೆ ಉಲ್ಲಾಸ, ಮಣ್ಣಿನ ಘಮ,ಇವುಗಳ ಜೊತೆ ಬರುವುದು ಮಳೆಗಾಲದ ರೋಗಗಳು. ಡೆಂಗೀ, ಚಿಕುನ್ಗು ನ್ಯ, ಕೆಮ್ಮು, ಶೀತ, ವಾಂತಿ, ಭೇದಿ, ಇತ್ಯಾದಿ ವ್ಯಾಧಿಗಳು ನಮ್ಮನ್ನು ಬಾಧೀಸುತ್ತವೆ. ಇಷ್ಟಲ್ಲದೆ, ಚರ್ಮ ವ್ಯಾಧಿಗಳು ಬಹಳವಾಗಿ ಕಾಡುತ್ತವೆ.
ಸಮಾನ್ಯವಾಗಿ ಚರ್ಮದ ಫಂಗಲ್ ಇನ್ಫೆಕ್ಷನ್ಸ್ಅಥವಾ ಶಿಲೀಂಧ್ರ ಸೋಂಕು ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಕೈ ಬೆರಳು, ಕಾಲು ಬೆರಳು, ತೊಡೆ ಸಂಧಿ, ಕಂಕುಳು, ಕುತ್ತಿಗೆ ಹಾಗೂ ಹೆಂಗಸರಲ್ಲಿ ಸ್ತನಗಳ ಬಳಿ ಕಂಡುಬರುತ್ತವೆ.

ಕಾಲ ಬೆರಳುಗಳ ಸೋoಕನ್ನು tenia ಪೇಡಿಸ್ ಅಥವಾ Athlete’s foot ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಆಡು ಭಾಷೆಯಲ್ಲಿ ಕಾಲು ಹುಳ ತಿನ್ನುವುದು ಎಂದು ಕೂಡ ಹೇಳುತ್ತಾರೆ. ಇದು ಕಾಲುಗಳ ಬೆರಳಿನ ಮಧ್ಯೆ ಇರುವ ಚರ್ಮದ ಸೋಂಕು.

ಸೋಂಕಿನ ಸೂಚನೆಗಳು :
ಬೆರಳುಗಳ ಮಧ್ಯೆ ತುರಿಕೆ, ಚುಚ್ಚಿದ ಭಾವನೆ, ಉರಿ. ತೇವಾಂಶ ಉಂಟಾದಂತೆ ಕಾಣುವುದು ಚರ್ಮ ಸುಲಿದಂತಾಗುವುದು ಅಥವಾ ಏಳಕುವುದು
ಒಂದು ಅಥವಾ ಎರಡು ಕಾಲುಗಳಲ್ಲೂ ಕಾಣಿಸಿಕೊಳ್ಳುವುದು.

ಯಾರಿಗೆ ಕಾಡುವುದು?
ಒದ್ದೆ ನೆಲದಲ್ಲಿ, ಕೆಸರಲ್ಲಿ ಕೆಲಸ ಮಾಡುವವರು. ತುಂಬಾ ಹೊತ್ತು ಒದ್ದೆ ಸಾಕ್ಸ್ ನಲ್ಲಿ ಇರುವುದು. ಸೋಂಕಿಗೆ ಒಳಗಾದವರ ಸಾಕ್ಸ್, ಟವೆಲ್ ಗಳನ್ನು ಉಪಯೋಗಿಸುವುದು. ಪಾದದ ಚರ್ಮ ಅಥವಾ ಉಗುರಲ್ಲಿ ಗಾಯ ಇರುವವರು. ಸಕ್ಕರೆ ಖಾಯಿಲೆ ಅಥವಾ ಇಮ್ಮ್ಯೂನ್ ಡಿಸಾರ್ಡರ್ಸ್ ಇರುವವರು.

ತಡೆಗಟ್ಟುವುದು ಹೇಗೆ?
ಕೆಸರಲ್ಲಿ ಅಥವಾ ಒದ್ದೆ ನೆಲದಲ್ಲಿ ಹೋಗಿ ಬಂದ ಕೂಡಲೇ ಸಾಬೂನು, ಬಿಸಿನೀರಿನಲ್ಲಿ ಕಾಲು ಹಾಗೂ ಬೆರಳುಗಳ ನಡುವೆ ತೊಳೆದು, ಸರಿಯಾಗಿ ಒರೆಸಿ, ಒಣಗಿಸುವುದು. ಸೋಂಕುಳ್ಳವರ ಸಾಕ್ಸ್, ಟವೆಲ್ಸ್, ಶೂಸ್, ಇತ್ಯಾದಿ ವಸ್ತುಗಳನ್ನು ಉಪಯೋಗಿಸದಿರುವುದು. ಸಾಂಡಲ್ಸ್ ಮಾದರಿಯ ಚಪ್ಪಲಿ ಯಥೇಚ್ಛ ಬಳಕೆ.

ಒದ್ದೆ ಶೂ ಅಥವಾ ಸಾಕ್ಸ್ ಗಳನ್ನು ಧರಿಸದೆ ಇರುವುದು. ಗಾಳಿಯಾಡಲು ಸಹಕರಿಸುವ ಬಟ್ಟೆಯಿಂದ ಮಾಡಲ್ಪಟ್ಟ ಸಾಕ್ಸ್ ಗಳನ್ನು ಬಳಸುವುದು.

ಬಂದಾಗ ಮನೆಮದ್ದು:
ಬಿಸಿ ನೀರಿಗೆ ಉಪ್ಪು ಸೇರಿಸಿ ಅದರಲ್ಲಿ ಕಾಲುಗಳ್ಳನ್ನಿಡುವುದರಿಂದ ಸೋಂಕಿನ ಪ್ರಮಾಣ ತಗ್ಗಿಸಬಹುದು ಹಾಗೂ ಗಾಯವನ್ನು ಸ್ವಚ್ಛಗೊ ಳಿಸಬಹುದು.  ಆಲೋವೆರಾ ಹಾಗೂ ಅರಶಿಣ ಮಿಶ್ರಣ ಹಚ್ಚುವುದರಿಂದ ಉರಿ, ಚರ್ಮ ಏಳಕುವುದನ್ನು ತಡೆಗಟ್ಟಬಹುದು.ಬೇವಿನ ಎಣ್ಣೆ ಹಚ್ಚುವುದು. ಬೆಳ್ಳುಳ್ಳಿ ಜಜ್ಜಿ, ಅದರ ರಸ ಸವರುವುದು.

ವೈದ್ಯರ ಬಳಿ ಯಾವಾಗ ಹೋಗಬೇಕು ?
*3 ವಾರಕ್ಕಿಂತ ಹೆಚ್ಚು ದಿನಗಳಾದರೂ ವಾಸಿಯಾಗದಿರುವುದು.
*ಗಾಯದಲ್ಲಿ ಪಸ್ ಬರುವುದು ಅಥವಾ ಜ್ವರ ಬರುವುದು.
*ಬೆರಳುಗಳ ಎಡೆಯಲ್ಲಿ ಅಲ್ಲದೆ, ಪಾದ, ಕೈ, ಕೈಬೆರಳು, ತೊಡೆ ಸಂದುಗಳಲ್ಲಿ ಸೋಂಕು ಕಾಣಿಸಿಕೊಳ್ಳುವುದು.
*ಈ tenia pedis ಸೋಂಕು ಮಹಾಮಾರಿ ಅಲ್ಲ. ಆದರೆ ನಿರ್ಲಕ್ಷದಿಂದ ವೇದನೆ ಬಹಳ. ಮಳೆಗಾಲದಲ್ಲಿ ಎಚ್ಚರವಹಿಸದಿದ್ದಲ್ಲಿ ಅಥವಾ ಅದಕ್ಕೆ ಸೂಕ್ತ ಕ್ರಮದಲ್ಲಿ ಮನೆಮದ್ದು ಮಾಡುವುದರಿಂದ ಹಿತವಾಗುವುದಾದರೆ ನಾವೇಕೆ ಮಾಡಬಾರದು?

ಡಾ. ಭಾವನಾ. ಎಂ,
ಸಹಾಯಕ ಉಪನ್ಯಾಸಕಿ – SVYASA,
Founder – Hear to heal teleclinic

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.