ಹಿಂದ್ಮಾತಾ ತಗ್ಗು ಪ್ರದೇಶದ ರಸ್ತೆ ಎತ್ತರ ಹೆಚ್ಚಳ ಕಾರ್ಯಕ್ಕೆ ಚಾಲನೆ
Team Udayavani, Jun 26, 2021, 1:09 PM IST
ಮುಂಬಯಿ : ನಗರದ ಡಾ| ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿರುವ ಹಿಂದ್ಮಾತಾ ಫ್ಲೈಓವರ್ ಮತ್ತು ಪರೇಲ್ ಟಿಟಿ ಫ್ಲೈಓವರ್ ನಡುವಿನ ರಸ್ತೆಯ ಎತ್ತರವನ್ನು ಹೆಚ್ಚಿಸುವ ಕಾರ್ಯಕ್ಕೆ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸ್ಥಳದಲ್ಲಿ ರಸ್ತೆಯ ಎತ್ತರ ಹೆಚ್ಚಿಸುವುದರಿಂದ ತಗ್ಗು ಪ್ರದೇಶ ಜಲಾವೃತಗೊಳ್ಳುವ ಸಮಸ್ಯೆ ಪರಿಹರಿ ಸಲು ಸಹಾಯವಾಗುವುದು ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಂಬಯಿ ಮೇಯರ್ ಕಿಶೋರಿ ಪೆಡೆ°àಕರ್, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಪಿ. ವೇಲರಸು, ಜಿÇÉಾಧಿಕಾರಿ ವಿಜಯ್ ಬಾಲಂವಾರ್ ಮೊದಲಾದವರು ಉಪಸ್ಥಿತರಿದ್ದರು.
ಹಿಂದ್ಮಾತಾ ತಗ್ಗು ಪ್ರದೇಶಗಳಲ್ಲಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿ
ಭಾರೀ ಮಳೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ಯಾಗಿತ್ತು. ಆದುದರಿಂದ ನಿಗಮವು 180 ಮೀಟರ್ ರಸ್ತೆಯ ಎತ್ತರವನ್ನು ಪ್ರಸ್ತುತ ಮಟ್ಟದಿಂದ 1.2 ಮೀಟರ್ ಹೆಚ್ಚಿಸಲಿದೆ.
ಈ ವೇಳೆ ಮಹಾತ್ಮಾ ಗಾಂಧಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮಿನಿ ಪಂಪಿಂಗ್ ಸ್ಟೇಷನ್ ಕಾಮಗಾರಿಗಳನ್ನೂ ಸಚಿವರು ಪರಿಶೀಲಿಸಿದರು. ಇದರ ಸಾಮರ್ಥ್ಯ ನಿಮಿಷಕ್ಕೆ 2.33 ಲಕ್ಷ ಲೀಟರ್ ಆಗಿದೆ. ಈ ಪಂಪಿಂಗ್ ಸ್ಟೇಷನ್ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದು, ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಸಚಿವ ಆದಿತ್ಯ ಠಾಕ್ರೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ