ಭಗವಂತ ನೀಡಿದ ಶಾಪ
Team Udayavani, Jun 27, 2021, 9:47 AM IST
ಶಾಪ…
ವಾಹನದ ಸದ್ದು ಸಪ್ಪಳವಿಲ್ಲದೆ ಊರುಕೇರಿ ಹಳ್ಳಿದಿಲ್ಲಿಯೆಲ್ಲವೂ ಸ್ಥಬ್ದ
ಕೇಳಬೇಕೆನಿಸಿದರೂ ಕೇಳಲಾಗದು
ಶಾಲೆಯಲ್ಲಿನ ಮಕ್ಕಳ ಆಟ, ಪಾಠ, ತಟ್ಟೆ ಶಬ್ದ
ವಾದ್ಯ, ವಾಲಗ, ಚೆಂಡೆ, ಮದ್ದಳೆ
ಆಡಂಬರದ ಡಿಜೆ ಇಲ್ಲದೆ ಊರಿಗೆ ಊರೇ ನಿಶ್ಯಬ್ದ
ನಾನು ನನ್ನದು ಎನ್ನುವ ಅಹಂಕಾರಿ ಜನ್ಮ
ಕೊನೆಗೊಂದು ಹನಿ ನೀರಿಲ್ಲದೆಯೇ ಪರಿಶುದ್ಧ
ಹಲವು ರೂಪದಲ್ಲಿ ರಣಕೇಕೆ ಹಾಕುತಿಹುದು
ಕರುಣೆಯಿಲ್ಲದ ಮಾರಿ ಕೊರೊನಾ
ಬಡವ ಬಲ್ಲಿದ ಸಿರಿವಂತನೆನ್ನದೆ
ಹಾರಿ ಹೋಗುತ್ತಲಿಹುದು ಪ್ರಾಣ
ಎಚ್ಚರಿಕೆಯಿಲ್ಲದ ಜೀವಕ್ಕೆ ನಿರ್ಲಕ್ಷ್ಯದ
ಪಾಡಿಗೆ ತಪ್ಪದಯ್ಯ ಮರಣ
ಕ್ಷಣ ಮಾತ್ರದಲ್ಲಿ ಹಾಳುಕೆಡುಹದಿರಿ
ಹೆತ್ತಮಾತೆಯ ಗರ್ಭದ ಆ ನಿಮ್ಮ ಪುಣ್ಯ ಜನನ
ಹಚ್ಚಹಸುರಿನ ತಂಪು ಕಂಪಿನ ಸೊಬಗಿನ
ರುಂಡ ಕತ್ತರಿಸಿದ ಮಾನವಭೂಪ
ಪ್ರಕೃತಿ ಮಾತೆಯ ಮನ ಕೆಣಕಿದರೆ
ಬರದಿರುವುದೇ ಆಕೆಗೆ ಕೋಪ
ಹೆಜ್ಜೆಹೆಜ್ಜೆಗೂ ಕಜ್ಜಕಾರ್ಯದಲಿ
ದ್ವಿಗುಣವಾಯಿತು ನರಜನ್ಮದ ಪಾಪ
ಈ ಕೊರೊನಾ ಎನ್ನುವುದು ಏನಿಲ್ಲ ಮನುಜ!!!
ನೀ ಮಾಡಿದ ಪಾಪದ ಪ್ರತಿಫಲ ಭಗವಂತ
ನೀಡಿದ ಶಾಪ
-ಕಿರಣ್ ಕಕ್ಕಿಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ