ಲಸಿಕೆ ಪಡೆಯಲು ಬಂದವರು 500 ಮಂದಿ, ಕೊಟ್ಟ ಟೋಕನ್ ಕೇವಲ 200: ರೊಚ್ಚಿಗೆದ್ದ ಜನರು
Team Udayavani, Jun 28, 2021, 10:44 AM IST
ಚಿಕ್ಕಮಗಳೂರು: ಕೋವಿಡ್ ಲಸಿಕೆ ಪಡೆಯಲು ಜನರು ಉದ್ದ ಉದ್ದದ ಸಾಲಿನಲ್ಲಿ ನಿಂತಿರುವ ಸುದ್ದಿಗಳನ್ನು ನೀವು ಓದಿದ್ದೀರಿ. ಆದರೆ ಇಲ್ಲಿ ಬಂದ ಎಲ್ಲರಿಗೂ ಟೋಕನ್ ನೀಡಿಲ್ಲ ಎಂದು ಜನರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಘಟನೆ ನಡೆದಿದ್ದು ಚಿಕ್ಕಮಗಳೂರು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ. ಇಲ್ಲಿ ಇಂದು ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ಬಂದಿದ್ದರು.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 46 ಸಾವಿರ ಕೋವಿಡ್ ಪ್ರಕರಣ ಪತ್ತೆ, 979 ಸಾವು
500ಕ್ಕೂ ಹೆಚ್ಚು ಜನ ಮುಂಜಾನೆಯಿಂದ ಕೋವಿಡ್ ಲಸಿಕೆ ಪಡೆಯಲೆಂದು ಕಾದು ನಿಂತಿದ್ದರು. ಆದರೆ ಅಧಿಕಾರಿಗಳು ಬಂದು ಕೇವಲ 200 ಮಂದಿಗೆ ಟೋಕನ್ ಕೊಟ್ಟಿದ್ದರು. ಇದರಿಂದ ಟೋಕನ್ ಸಿಗದ ಜನರು ರೊಚ್ಚಿಗೆದ್ದ ಘಟನೆ ನಡೆಯಿತು.
ಬೆಳ್ಳಂಬೆಳಗ್ಗೆ ಕಾದು ನಿಂತರೂ ಟೋಕನ್ ನೀಡಿಲ್ಲ ಎಂದು ಅಧಿಕಾರಿಗಳು, ಏಜೆನ್ಸಿ ವಿರುದ್ಧ ಆಕ್ರೋಶಗೊಂಡ ಜನರು ಸಿಬ್ಬಂದಿ ಜೊತೆ ಮಾತಿನ ಚಕಮಕಿಯನ್ನು ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ