ಬಿ.ಸಿ.ರೋಡ್: ರಸ್ತೆಗಿಳಿದ ಒಂದು ಖಾಸಗಿ ಬಸ್
Team Udayavani, Jul 2, 2021, 5:00 AM IST
ಬಂಟ್ವಾಳ: ದ.ಕ. ಜಿಲ್ಲೆಯ ಕೆಲವೆಡೆ ಗುರುವಾರದಿಂದ ಖಾಸಗಿ ಬಸ್ ಓಡಾಟ ನಡೆಸಿದ್ದು, ಬಿ.ಸಿ.ರೋಡ್ನಲ್ಲಿ ಕೇವಲ ಒಂದು ಖಾಸಗಿ ಬಸ್ ಓಡಾಟ ನಡೆಸಿದೆ. ಬಿ.ಸಿ.ರೋಡ್-ಪೊಳಲಿ- ಕೈಕಂಬ-ಮಂಗಳೂರು ರೂಟ್ನಲ್ಲಿ ಸಂಚರಿಸುವ ಏಕೈಕ ಬಸ್ ರಸ್ತೆಗಿಳಿದಿತ್ತು.
ಬಂಟ್ವಾಳದ ಬಹುತೇಕ ಗ್ರಾಮೀಣ ಭಾಗಗಳಿಗೆ ಖಾಸಗಿ ಬಸ್ಗಳೇ ಸಂಚಾರ ನಡೆಸುತ್ತಿದ್ದು, ಶೇ. 50 ಪ್ರಯಾಣಿಕರಿಗಷ್ಟೇ ಸಂಚರಿಸಲು ಅವಕಾಶ ಸೇರಿದಂತೆ ಹಲವು ಕಾರಣಗಳಿಂದ ಬಸ್ ಮಾಲಕರು ಬಸ್ ಓಡಿಸಲು ಮುಂದೆ ಬಂದಿರಲಿಲ್ಲ. ಜತೆಗೆ ಮಧ್ಯಾಹ್ನದವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಇರುವುದರಿಂದಲೂ ಹೆಚ್ಚಿನ ಬಸ್ಗಳು ರಸ್ತೆಗಿಳಿಯಲಿಲ್ಲ.
ಜಿಲ್ಲೆಯಲ್ಲಿ ಜು. 5ರ ಬಳಿಕ ಬಹುತೇಕ ಲಾಕ್ಡೌನ್ ತೆರವುಗೊಳ್ಳುವ ಸಾಧ್ಯತೆ ಇರುವುದರಿಂದ ಆ ಬಳಿಕವೇ ಹೆಚ್ಚಿನ ಬಸ್ಗಳು ಓಡಾಟ ನಡೆಸುವ ಸಾಧ್ಯತೆ ಇದೆ. ತಾಲೂಕು ಕೇಂದ್ರ ಬಿ.ಸಿ.ರೋಡ್ನಿಂದ ಸಿದ್ದಕಟ್ಟೆ-ಮೂಡುಬಿದಿರೆ, ಸಜೀಪ- ಮುಡಿಪು, ಪೊಳಲಿ-ಕೈಕಂಬ, ಸರಪಾಡಿ, ವಾಮದಪದವು, ಮಂಚಿ- ಸಾಲೆತ್ತೂರು, ಬೆಂಜನ ಪದವು-ನೀರುಮಾರ್ಗ ಮೊದ ಲಾದ ರೂಟ್ಗಳಲ್ಲಿ ಖಾಸಗಿ ಬಸ್ಗಳು ಓಡುತ್ತವೆ.
20ಕ್ಕೂ ಅಧಿಕ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರ :
ಎಂದಿನಂತೆ ಮಧ್ಯಾಹ್ನದವರೆಗೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದ್ದು, ಬಿ.ಸಿ.ರೋಡ್ ಘಟಕದಿಂದ 20ಕ್ಕೂ ಅಧಿಕ ಬಸ್ಗಳು ಓಡಾಟ ನಡೆಸಿದ್ದವು. ಪುತ್ತೂರು, ವಿಟ್ಲ, ಸ್ಟೇಟ್ಬ್ಯಾಂಕ್ ರೂಟ್ಗಳಲ್ಲಿ ಸಂಚಾರ ನಡೆಸಿವೆ.
ಉಳಿದಂತೆ ಮಂಗಳೂರು, ಧರ್ಮಸ್ಥಳ, ಪುತ್ತೂರು ಘಟಕಗಳ ಬಸ್ಗಳು ಬಿ.ಸಿ.ರೋಡ್ನ ಮೂಲಕ ಸಂಚಾರ ನಡೆಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗಕ್ಕೆ ಯಾವುದೇ ಬಸ್ಗಳು ಸಂಚಾರ ನಡೆಸದೇ ಇರುವುದರಿಂದ ಅಲ್ಲಿನ ಜನತೆ ಆಟೋ ರಿಕ್ಷಾ, ಟೆಂಪೋ, ಮ್ಯಾಕ್ಸಿಕ್ಯಾಬ್ ಆಶ್ರಯಿಸಿದ್ದಾರೆ.
ಬೆಳ್ತಂಗಡಿಯಲ್ಲೂ ಒಂದೇ ಬಸ್ ಸಂಚಾರ:
ಬೆಳ್ತಂಗಡಿ ತಾಲೂಕಿನಲ್ಲಿ ಗುರುವಾರ ಖಾಸಗಿ ಬಸ್ ಸಂಚಾರ ನಡೆಸಿದ್ದು, ಉಪ್ಪಿನಂಗಡಿ-ಬೆಳ್ತಂಗಡಿ ನಡುವೆ ಬಸ್ ಸಂಚಾರ ನಡೆಸಿದೆ. ಇತರೆ ಯಾವುದೇ ಭಾಗಗಳಿಗೆ ಖಾಸಗಿ ಬಸ್ ಸಂಚಾರ ನಡೆಸಿಲ್ಲ. ಕೆಎಸ್ಆರ್ಟಿಸಿ ಬಸ್ಗಳು ಪುತ್ತೂರು, ಮಂಗಳೂರು ಸಹಿತ ಪ್ರಮುಖ ಭಾಗಗಳಿಗೆ ಸಂಚಾರ ನಡೆಸಿದೆ.
102 ಕೆಎಸ್ಆರ್ಟಿಸಿ ಬಸ್ ಓಡಾಟ:
ಪುತ್ತೂರು: ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಓಡಾಟ ನಡೆಸುತ್ತಿದ್ದು, ಜು.1 ಪುತ್ತೂರು ವಿಭಾಗದ ಐದು ಘಟಕಗಳಲ್ಲಿ 102 ಬಸ್ಗಳು ಓಡಾಟ ನಡೆಸಿವೆ. ಬುಧವಾರವು ಬಸ್ ಓಡಾಟ ಇದೇ ಸಂಖ್ಯೆಯಲ್ಲಿತ್ತು ಎಂದು ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದ.ಕ.ಜಿಲ್ಲೆಯಾದ್ಯಂತ ಗುರುವಾರದಿಂದ ಖಾಸಗಿ ಬಸ್ ಓಡಾಟ ಪ್ರಾರಂಭಿಸಲಾಗಿದ್ದರೂ ಪುತ್ತೂರಿನಲ್ಲಿ ಓಡಾಟ ಕಂಡು ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್