ಪಣಂಬೂರು: ಲಾಕ್ ಡೌನ್ ವೇಳೆ ಸುಮ್ಮನಿದ್ದ ಹೆದ್ದಾರಿ ಇಲಾಖೆಯಿಂದ ಈಗ ಕಾಮಗಾರಿ;ಟ್ರಾಫಿಕ್ ಜಾಮ್
Team Udayavani, Jul 3, 2021, 12:07 PM IST
ಪಣಂಬೂರು: ಲಾಕ್ ಡೌನ್ ಸಂದರ್ಭ ದುರಸ್ತಿ ಕಾರ್ಯ ಮಾಡಲು ಸಾಕಷ್ಟು ಸಮಯಾವಕಾಶ ಇದ್ದರೂ ಇದೀಗ ಅನ್ ಲಾಕ್ ಆದ ಬಳಿಕ ಹೆದ್ದಾರಿ ಇಲಾಖೆ ಕೂಳೂರು ಬಳಿ ಇಂಟರ್ ಲಾಕ್ ಕಾಮಗಾರಿಗೆ ಇಳಿದಿದ್ದು ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ಶನಿವಾರ ವಾರಾಂತ್ಯದ ಕರ್ಫ್ಯೂ ಇದ್ದರೂ ಪಣಂಬೂರು ಕೂಳೂರು ಕೆಪಿಟಿ ಯವರೆಗೆ ಟ್ರಾಫಿಕ್ ಜಾಮ್ ಆಗಿದೆ. ಕಾಮಗಾರಿಗಾಗಿ ಒನ್ ವೇ ರಸ್ತೆ ಅವಕಾಶ ಮಾಡಿದ್ದು ಟ್ರಾಫಿಕ್ ಜಾಮ್ ಹೆಚ್ಚಲು ಕಾರಣವಾಗಿದೆ.
ಇದನ್ನೂ ಓದಿ:ಹೆಣ್ಣು ಮಗುವೆಂಬ ಕಾರಣಕ್ಕೆ ನವಜಾತ ಶಿಶುವಿಗೆ ನೇಣುಬಿಗಿದು ಶೌಚಾಲಯದ ಕಿಟಕಿಗೆ ಕಟ್ಟಿದ ಪಾಪಿ!
ಈ ಬಗ್ಗೆ ವಾಹನ ಸವಾರರು ಹೆದ್ದಾರಿ ಇಲಾಖೆಯ ಬೇಜವಾಬ್ದಾರಿ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಸಂಚಾರ ಆರಂಭವಾಗಿ ಕೇವಲ ಎರಡು ದಿನವಾಗಿದ್ದು ನಿಮಿಷಕ್ಕೊಂದರಂತೆ ಓಡಾಡುವ ಬಸ್ ಗಳು ಟ್ರಾಫಿಕ್ ಜಾಮ್ ನಿಂದಾಗಿ ಟ್ರಿಪ್ ಕಟ್ ಮಾಡಿ ಕುಳಿತುಕೊಳ್ಳುವ ಸಂದಿಗ್ದ ಸ್ಥಿತಿ ಶನಿವಾರ ಎದುರಿಸುವಂತಾಯಿತು.