ಗೋಡಂಬಿ ಹೆಸರಲ್ಲಿ ಕಳಪೆ ಅಡಕೆ ಆಮದು: ಕ್ರಮಕ್ಕೆ ಒತ್ತಾಯ
Team Udayavani, Jul 3, 2021, 5:12 PM IST
ರಿಪ್ಪನ್ಪೇಟೆ: ದೇಶದಲ್ಲಿನ ಅಡಕೆ ವ್ಯಾಪಾರಿಗಳ ವಂಚಕರ ಜಾಲವುಗೋಡಂಬಿ ಹೆಸರಿನಲ್ಲಿಕಳಪೆ ಗುಣಮಟ್ಟದಅಡಕೆಯನ್ನು ಇಂಡೋನೇಷಿಯಾದಿಂದ ಅಮದುಮಾಡುವ ಮೂಲಕ ದೇಶದ ಅಡಕೆ ಬೆಳೆಗಾರರು ಅರ್ಥಿಕ ಸಂಕಷ್ಟದಲ್ಲಿಸಿಲುಕುವಂತೆ ಮಾಡಿದ್ದಾರೆ. ಕಳೆಪೆ ಅಡಕೆ ಅಮದುಗಾರ ವರ್ತಕರ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತೆ ಶಾಸಕ ಮತ್ತು ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಡಕೆವ್ಯಾಪಾರಿಗಳ ವಂಚಕರ ಜಾಲವು ಇಂಡೋನೇಷಿಯ ಮತ್ತು ವಿವಿಧದೇಶಗಳಿಂದ ಕಳಪೆ ಗುಣಮಟ್ಟದ ಅಡಕೆಗಳನ್ನು ಅಮದು ಮಾಡಿ ದೇಶದ ಅಡಕೆ ಗ್ರಾಹಕರಿಗೆ ವಂಚಿಸುವುದರ ಜೊತೆಗೆ ಸರ್ಕಾರಕ್ಕೆ ಸುಂಕದಲ್ಲಿಸಹ ಸಾವಿರಾರು ಕೋಟಿ ರೂ. ಗಳನ್ನು ವಂಚಿಸಿರುವ ಹಿನ್ನೆಲೆಯಲ್ಲಿಮುಂಬಯಿ ಉಚ್ಚ ನ್ಯಾಯಾಲಯದನಾಗಪುರ ಪೀಠದಲ್ಲಿ 16 ಸಾವಿರಕೋಟಿ ರೂ.ಗಳ ಸುಂಕದ ಅವ್ಯವಹಾರಸಾಬೀತಾದ ಕಾರಣ ಸಿಬಿಐ ತನಿಖೆಗೆ ಒಳಪಡಿಸಲಾಗಿದೆ.
ತನಿಖೆಯಲ್ಲಿಯೂ ಅರೋಪ ಸಾಬೀತಾಗಿದೆ. ದೇಶದಲ್ಲಿನಗುಣಮಟ್ಟದ ಅಡಕೆ ಮತ್ತುಅಡಕೆ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗದೆ ವಂಚಿತರನ್ನಾಗಿಸಿದೆಎಂದು ವಿಷಾದ ವ್ಯಕ್ತಪಡಿಸಿದರು.ಈ ಬಗ್ಗೆ ಕೇಂದ್ರ ಸರ್ಕಾರಪರಿಶೀಲನೆ ನಡೆಸಬೇಕು.ಕಳಪೆ ಗುಣಮಟ್ಟದ ಅಡಕೆ ಅಮದುದೇಶದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದುಈ ಕೃತ್ಯದಲ್ಲಿ ತೊಡಗಿರುವ ಕೇಂದ್ರದ ಸುಂಕದ ಅಧಿಕಾರಿಗಳು ಹಾಗೂ ಅಡಕೆ ಅಮದು ಮಾಡುವ ವಂಚಕ ವರ್ತಕರಿಗೆ ಹೊರದೇಶದಿಂದ ಅಡಕೆ ಅಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ದೇಶದ ಅಡಕೆ ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗುವುದರಜೊತೆಗೆ ಭ್ರಷ್ಟ ಅಧಿಕಾರಿಗಳುಮತ್ತು ವಂಚಕ ಅಡಕೆ ವರ್ತಕರ ಮೇಲೆ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬೆಳ್ಳೂರು ತಿಮ್ಮಪ್ಪ,ನಂದನ್, ಕಗ್ಗಲಿ ಲಿಂಗಪ್ಪ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್