ಟೋಕಿಯೊ ಒಲಂಪಿಕ್ಸ್ : ತಾರೆಯರ ಅಂಗಳದಲ್ಲಿ ಹೊಳಪೇ ನಾಪತ್ತೆ!


Team Udayavani, Jul 21, 2021, 6:40 AM IST

ಟೋಕಿಯೊ ಒಲಂಪಿಕ್ಸ್ : ತಾರೆಯರ ಅಂಗಳದಲ್ಲಿ ಹೊಳಪೇ ನಾಪತ್ತೆ!

ಒಲಿಂಪಿಕ್ಸ್‌ ಗೆ ಗೈರಾಗಿದ್ದಾರೆ ಫೆಡರರ್‌, ಸೆರೆನಾ ವಿಲಿಯಮ್ಸ್‌, ನೇಮಾರ್‌ರಂತಹ ತಾರೆಯರು.

ರೋಜರ್‌ ಫೆಡರರ್‌ಗೆ ಗಾಯ
ಟೆನಿಸ್‌ ಜಗತ್ತಿನ ದಂತಕಥೆ, 20 ಬಾರಿ ಗ್ರ್ಯಾನ್‌ಸ್ಲಾéಮ್‌ ಗೆದ್ದಿರುವ ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌, ವಿಂಬಲ್ಡನ್‌ನಲ್ಲಿ ಆಡಿದ ವೇಳೆ ತನಗೆ ಗಾಯವಾಗಿದೆ, ಆದ್ದರಿಂದ ಆಡುವುದಿಲ್ಲವೆಂದಿದ್ದಾರೆ.

ಸೆರೆನಾ ಆಡಲ್ಲ ಅಷ್ಟೇ
ಮಹಿಳಾ ಟೆನಿಸ್‌ನ ಅನಿಭಿಷಿಕ್ತ ರಾಣಿ, 23 ಬಾರಿ ಸಿಂಗಲ್ಸ್‌ ಗ್ರ್ಯಾನ್‌ಸ್ಲಾéಮ್‌ ಗೆದ್ದಿರುವ ಸೆರೆನಾ ವಿಲಿಯಮ್ಸ್‌ ಈ ಬಾರಿ ತಾನು ಅಮೆರಿಕವನ್ನು ಒಲಿಂಪಿಕ್ಸ್‌ ನಲ್ಲಿ ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ. ತಾನು ಪಾಲ್ಗೊಳ್ಳದಿರುವುದಕ್ಕೆ ಹಲವು ಕಾರಣಗಳಿವೆ, ಒಟ್ಟಾರೆ ಬೇಡೆವೆನಿಸಿದೆ ಎಂದಿದ್ದಾರೆ.

ನಡಾಲ್‌ಗೆ ಭವಿಷ್ಯದ ಚಿಂತೆ
ಫ್ರೆಂಚ್‌ ಓಪನ್‌ ಟೆನಿಸ್‌ನಲ್ಲಿ ಆಘಾತಕಾರಿ­ಯಾಗಿ ಸೋತ ಅನಂತರ ಸ್ಪೇನಿನ ರಫೆಲ್‌ ನಡಾಲ್‌, ತಾನು ವಿಂಬಲ್ಡನ್‌, ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸಲ್ಲ ಎಂದರು. ತನಗೆ ವೃತ್ತಿಜೀವನ­ದಲ್ಲಿ ದೀರ್ಘ‌ಕಾಲ ಮುಂದುವರಿಯುವುದು ಮುಖ್ಯ, ಸದ್ಯ ತನ್ನ ದೇಹ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಟೋಕಿಯೊದಿಂದ ಹಿಂದೆ ಸರಿದಿದ್ದಾರೆ.

ನೇಮಾರ್‌ಗೆ ಕ್ಲಬ್‌ನಿಂದ ಅನುಮತಿಯಿಲ್ಲ!
ಬ್ರಝಿಲ್‌ ಫ‌ುಟ್‌ಬಾಲ್‌ ತಂಡದ ನಾಯಕ ಒಲಿಂಪಿಕ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಕೊಪಾ ಅಮೆರಿಕ ಫ‌ುಟ್‌ಬಾಲ್‌ ಕೂಟದಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದ ನೇಮಾರ್‌ಗೆ, ಅವರ ಫ‌ುಟ್‌ಬಾಲ್‌ ಕ್ಲಬ್‌ ಪಿಎಸ್‌ಜಿ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊ­ಳ್ಳಲು ಅನುಮತಿ ನೀಡಿಲ್ಲ. ಇದೇ ದಾರಿಯನ್ನು ಫ್ರಾನ್ಸ್‌ನ ಕಿಲಿಯನ್‌ ಎಂಬಪೆ, ಈಜಿಪ್ಟ್ ಮೊಹಮ್ಮದ್‌ ಸಲಾಹ್‌ ಕೂಡ ಅನುಸರಿಸಿದ್ದಾರೆ.

ಕ್ಯಾರೋಲಿನಾ ಮರಿನ್‌ಗೆ ಗಾಯ
ಸ್ಪೇನಿನ ಖ್ಯಾತ ಮಹಿಳಾ ಬ್ಯಾಡ್ಮಿಂಟನ್‌ ಆಟಗಾರ್ತಿ ಕ್ಯಾರೋಲಿನಾ ಮರಿನ್‌ ಗಾಯವಾಗಿದೆ. ಮಂಡಿಯಲ್ಲೂ ಸಮಸ್ಯೆಯಾಗಿದೆ. ಇದೇ ಕಾರಣದಿಂದ ಈಕೆ ತಾನಾಡು­ವುದಿಲ್ಲ ಎಂದಿದ್ದಾರೆ.

ಹಿಮಾದಾಸ್‌ಗೂ ಗಾಯವೇ ಅಡ್ಡಿ
ಅಸ್ಸಾಂನ ಹಿಮಾದಾಸ್‌ಗೆ ಕೇವಲ 21 ವರ್ಷ. ಈಕೆ 20 ವಯೋಮಿತಿಯೊಳಗಿನ ವಿಶ್ವ ಚಾಂಪಿಯನ್‌ಶಿಪ್‌ನ 400 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಾರೆ. ಹಾಗೆಯೇ 2018ರ ಏಷ್ಯಾಡ್‌ನ‌ ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ 2 ಚಿನ್ನ ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲೂ
ಇವರ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು. ಆದರೆ ರಾಷ್ಟ್ರೀಯ ಕ್ರೀಡಾಕೂಟ­ವೊಂದರಲ್ಲಿ ಆಡುವಾಗ ಮಂಡಿನೋವಿಗೆ ತುತ್ತಾಗಿ ತೀವ್ರ ನಿರಾಶೆಗೊಳ­ಗಾಗಿದ್ದಾರೆ.

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.