ಕಾಡು ಬಿಟ್ಟು ನಾಡಿನತ್ತ ನವಿಲುಗಳ ಆಗಮನ : ನವಿಲುಗಳ ವಯ್ಯಾರ ನೋಡುವುದೇ ಒಂದು ರೋಮಾಂಚನ
Team Udayavani, Jul 27, 2021, 6:22 PM IST
ಗುಡಿಬಂಡೆ: ಬರಪೀಡಿತ ಪ್ರದೇಶ, ಬೆಟ್ಟ ಗುಡ್ಡಗಳಿಂದ ಕೂಡಿರುವ ತಾಲೂಕಿನಲ್ಲಿ ನವಿಲುಗಳ ವಯ್ಯಾರ ನೋಡುವುದೇ ಒಂದು ರೋಮಾಂಚನ. ಹಸಿರಿನಿಂದ ಕೂಡಿದ ರೈತರ ಜಮೀನಿನಲ್ಲಿ, ರಸ್ತೆ ಬದಿಯಲ್ಲಿ ಕುಳಿಯುತ್ತ, ನಲಿಯುತ್ತಾ ಓಡುವ ನವಿಲುಗಳು ಗ್ರಾಮೀಣ ಜನರ ಚಿತ್ತಾಕರ್ಷಿಸುತ್ತಿವೆ.
ಅತಿ ಹೆಚ್ಚು ನವಿಲು ಸಂತತಿ ಇರುವ ತಾಲೂಕಿನ ವಲಯ ಅರಣ್ಯ ಪ್ರದೇಶದಲ್ಲಿ ರಾಷ್ಟ್ರಪಕ್ಷಿಯ ದಂಡೇ ಇದೆ. ಇತ್ತೀಚಿಗೆ ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಕಾಡಿನಿಂದ ನಾಡಿಗೆ ಬರುವ ನವಿಲುಗಳು, ರೈತರ ಜಮೀನಿನಲ್ಲಿ, ಊರ ಹೊರವಲಯದಲ್ಲಿ ಕಾಣಸಿಗುತ್ತವೆ.
ನಾಡಲ್ಲೇ ಬೀಡು ಬಿಟ್ಟ ನವಿಲುಗಳು:
ಆಹಾರ ಕೊರತೆಯಿಂದ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ನವಿಲುಗಳು ರೈತರ ಜಮೀನಿನಲ್ಲಿ, ಊರ ಹೊರಹೊರಗಡೆ ಇರುವ ತೋಪಿನಲ್ಲಿ ಬೀಡು ಬಿಟ್ಟು, ರೈತರು ಬೆಳೆದ ರಾಗಿ, ಇನ್ನಿತರೆ ಬೆಳೆಯನ್ನು ತಿಂದು ನಾಶ ಮಾಡುತ್ತಿವೆ. ಇದು ರೈತರ ಅಸಮಾಧಾನಕ್ಕೂ ಕಾರಣವಾಗಿದೆ. ನವಿಲಿನಿಂದ ರೈತರಿಗೆ ಸಮಸ್ಯೆ ಆದರೆ, ದಾರಿಯಲ್ಲಿ ಹೋಗುವವರಿಗೆ, ಮಕ್ಕಳು, ಮಹಿಳೆಯರಿಗೆ ಆನಂದ.
ಇದನ್ನೂ ಓದಿ :ಟಿ ಸೀರಿಸ್ -ಲಹರಿ ಸಂಸ್ಥೆ ತೆಕ್ಕೆಗೆ ‘RRR’ ಆಡಿಯೋ ರೈಟ್ಸ್ :ಸೇಲಾಗಿದ್ದು ಎಷ್ಟು ಕೋಟಿಗೆ ?
ನವಿಲು ನೋಡಲೆಂದೇ ವಾಯುವಿಹಾರ:
ಬೆಳಗ್ಗೆ, ಸಂಜೆ ಸಮಯದಲ್ಲಿ ತಾಲೂಕಿನ ವಾಬಸಂದ್ರ, ಎಲ್ಲೋಡು, ಯರ್ರಹಳ್ಳಿ, ಗೌರಿಬಿದನೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ನೊಡಲೆಂದೇ ಪಟ್ಟಣದ ಜನರು, ಸಂಸಾರ ಸಮೇತವಾಗಿ ಕಾರು, ಬೈಕ್, ಮತ್ತಿತರ ವಾಹನಗಳಲ್ಲಿ ಸಂಜೆ ವಾಯುವಿಹಾರಕ್ಕೆ ತೆರಳುತ್ತಾರೆ.
ಪ್ರಾಣಿ-ಪಕ್ಷಿ ಸೇರಿ ಸಕಲ ಜೀವ ಸಂಕುಲಕ್ಕೆ ಗುಡಿಬಂಡೆ ಅರಣ್ಯ ಪ್ರದೇಶವು ಆಶ್ರಯ ತಾಣವಾಗಿದೆ. ಇಲಾಖೆಯ ಪ್ರಕಾರ 10 ಸಾವಿರಕ್ಕೂ ಹೆಚ್ಚು ನವಿಲುಗಳು ಈ ಮೀಸಲು ಅರಣ್ಯ ಪ್ರದೇಶದಲ್ಲಿವೆ ಎನ್ನುತ್ತಾರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹುಲುಗಪ್ಪ.
ನವಿಲುವನ ಸ್ಥಾಪಿಸಿ:
ತಾಲೂಕಿನಲ್ಲಿ ದಿನೇ ದಿನೆ ನವಿಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶ ಪಟ್ಟಣಕ್ಕೆ ಸಮೀಪ ಇರುವುದರಿಂದ ನವಿಲು ವನ ಸ್ಥಾಪಿಸಿದಲ್ಲಿ, ತಾಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು. ಇದರಿಂದ ಸ್ಥಳವಾಗಿ ಕೆಲವರಿಗೆ ಉದ್ಯೋಗ, ವ್ಯಾಪಾರವೂ ವೃದ್ಧಿ ಆಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್